ಬೆಳ್ತಂಗಡಿ: ಈಕೆ ರೀಲ್ಸ್ ತಾರೆ, ಮೈಕ್ ಹಿಡಿದರೆ ಗಾನ ಕೋಗಿಲೆ, ಕ್ಯಾಮಾರಕ್ಕೆ ಫೋಸ್ ನೀಡುವ ಈ ಚೆಲುವೆ ಇದೀಗ ಸೀರಿಯಲ್ ಬೆಡಗಿ. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂದಗೋಕುಲ ‘ಧಾರಾವಾಹಿಯಲ್ಲಿ ನಂದನ ಕಿರಿಯ ಮಗಳಾದ ರಕ್ಷಾ ಪಾತ್ರಧಾರಿ ಕೃಷ್ಣಪ್ರಿಯಾ ಭಟ್ ಮೂಲತಃ ಬೆಳ್ತಂಗಡಿ ತಾಲೂಕಿನ ನಾರಾವಿಯವರು.

ರೀಲ್ಸ್ ಮಾಡಿ ಎಡವಟ್ಟು ಮಾಡಿಕೊಂಡವರನ್ನು ಎಷ್ಟೋ ಮಂದಿಯನ್ನು ನೋಡಿದ್ದೇವೆ. ಆದರೆ ರೀಲ್ಸ್ ಮಾಡುವುದೇ ಇತ್ತಿಚೀನ ದಿನಗಳಲ್ಲಿ ಕೆಲವರಿಗೆ ಹವ್ಯಾಸ ಹಾಗೂ ರೂಢಿಯಾಗಿದೆ. ಕೃಷ್ಣಪ್ರಿಯಾ ಭಟ್ ರೀಲ್ಸ್ ಮಾಡುವ ಹವ್ಯಾಸ ಹೊಂದಿದ್ದರು. ಆ ಹವ್ಯಾಸ ಇಂದು ಅವರನ್ನು ಕಿರುತೆರಗೆ ಪರಿಚಯಿಸಿದೆ. ತಾವು ಮಾಡುತ್ತಿರುವ ರೀಲ್ಸ್ಗಳನ್ನು ಕಂಡ ಕಲರ್ಸ್ ಕನ್ನಡ ವಾಹಿನಿಯಿಂದ ನೇರವಾಗಿ ಅವರಿಗೆ ಕರೆ ಬಂದು, ಮೊಬೈಲ್ ಮೂಲಕ ಅಡೀಷನ್ ಮಾಡಿ ಅದರಲ್ಲಿ ಆಯ್ಕೆಯಾಗಿ ನಂದಗೋಕುಲ ತಂಡಕ್ಕೆ ಹಾಗೂ ಕಿರುತೆರೆಗೆ ಪಾದರ್ಪಣೆ ಮಾಡಿದರು.


ನಂದಗೋಕುಲ ‘ಧಾರವಾಹಿ ಒಂದು ತಿಂಗಳಿನಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸರವಾಗುತ್ತಿದ್ದು ಜನಮನಗಳಿಸುತ್ತಿದೆ. ನಂದನ ಮಗಳಾಗಿ ಕಾಣಿಸಿಕೊಂಡಿರುವ ಕೃಷ್ಣಪ್ರಿಯಾ ಭಟ್ ಪ್ರೇಕ್ಷಕರ ಪ್ರೀತಿಗಳಿಸುತ್ತಿದ್ದಾರೆ. ಈಕೆ ನಮ್ಮೂರಿನ ಹೆಮ್ಮೆಯ ಪ್ರತಿಭೆಯಾಗಿದ್ದು ಇವರ ಬಗ್ಗೆ ಸಂಪೂರ್ಣ ವಿಶೇಷ ವರದಿ ಸುದ್ದಿ ಉದಯ ವಾರಪತ್ರಿಕೆಯಲ್ಲಿ ಗುರುವಾರ ಪ್ರಕಟಗೊಳ್ಳಲಿದ್ದು ಅಲ್ಲಿಯವರೆಗೆ ನೀರಿಕ್ಷಿಸಿ…











