23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ವನಮಹೋತ್ಸವ

ವೇಣೂರು: ನಮ್ಮ ಹಿರಿಯರ ಪರಿಸರ ಕಾಳಜಿ ನಮಗಿಂದು ಉಸಿರಾಗಿ ದಕ್ಕಿದೆ. ಇದನ್ನು ವರ್ಧಿಸುವುದಕ್ಕಾಗಿ ಯುವ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಸರ ಕಾಳಜಿಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಎಕ್ಸೆಲ್ ಕ್ಯಾಂಪಸ್ ವ್ಯವಸ್ಥಾಪಕ ಶಾಂತಿ ರಾಜ್ ಜೈನ್ ಹೇಳಿದರು.

ಅವರು, ಜು. 5ರಂದು ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಸುಜಾತಾ ಬಿ, ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹುಟ್ಟು ಹಬ್ಬದ ಸಮಯದಲ್ಲಿ ಒಂದು ಗಿಡ ನೆಟ್ಟು ಪರಿಸರ ಕಾಳಜಿಯನ್ನು ಅರ್ಥ ಪೂರ್ಣವಾಗಿಸಬೇಕೆಂದರು. ಪ್ರಾಸ್ತಾವಿಕ ನುಡಿದ
ಶಿಕ್ಷಕಿ ಕಾವ್ಯಶ್ರೀ 1950ರಲ್ಲಿ ಆಚರಣೆಗೆ ಬಂದ ವನಮಹೋತ್ಸವ, ಜಾಗೃತಿ ಅಭಿಯಾನವಾಗಿ ರೂಪುಗೊಂಡಿದೆ ಎಂದರು.

ಕಾರ್ಯಕ್ರಮದಲ್ಲಿ ಎಕ್ಸೆಲ್ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕಿ ಶ್ರೀಮತಿ ಸಹನಾ ಜೈನ್, ಸದಸ್ಯರಾದ ಶ್ರೀಮತಿ ಶ್ರುತಿ ಉಪಸ್ಥಿತರಿದ್ದು, ವಿದ್ಯಾರ್ಥಿಗಳಾದ ಪ್ರಣಮ್ಯಾ, ಸಾನ್ವಿ, ಅನ್ವಿತಾ, ಹರ್ಷಿಕಾ ಪ್ರಾರ್ಥಿಸಿದ ಸಭೆಗೆ ಶಿಕ್ಷಕರಾದ ಅರುಣ್ ಕುಮಾರ್ ನಿರೂಪಿಸಿ , ದಾಮೋದರ್ ಸ್ವಾಗತಿಸಿ, ಶ್ರೀಮತಿ ಅಪರ್ಣಾ ಧನ್ಯವಾದವಿತ್ತರು.

ಶ್ವೇತಾ ಜೈನ್, ಶಾಲಿನಿ, ವಿಂದ್ಯಾ, ಅಕ್ಷತಾ , ಪ್ರಸಾದ್, ಮಮತಾ ಸಹಕರಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

Related posts

ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ

Suddi Udaya

ಯುದ್ದ ಖಂಡಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಸಿಐಟಿಯು ಸೇರಿದಂತೆ ವಿವಿಧ ಸಂಘಟನೆಗಳ‌ ಪ್ರತಿಭಟನೆ

Suddi Udaya

ಬೆಳ್ತಂಗಡಿಯಲ್ಲಿ ರಾಜಸ್ಥಾನ ಆರ್ಟ್‌ ಹಾಗೂ ಕ್ರಾಫ್ಟ್ ಬೃಹತ್ ಪ್ರದರ್ಶನ, ಮಾರಾಟ ಮೇಳ

Suddi Udaya

ಪಟ್ರಮೆ ಕಲ್ಲರಿಗೆ ನಿವಾಸಿ ಸದಾಶಿವ ದಾಸ್ ನಿಧನ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಯಕ್ಷಗಾನ ತರಗತಿ – “ಯಕ್ಷ ಭಾರತೀ” ಉದ್ಘಾಟನೆ

Suddi Udaya

ಕುದ್ಯಾಡಿ ಕ್ರಿಕೆಟ್ ಪಂದ್ಯಾಟದಲ್ಲಿ ವಿಶ್ವೇಷ್ ಆಚಾರ್ಯ ರವರಿಗೆ ಸನ್ಮಾನ

Suddi Udaya
error: Content is protected !!