September 6, 2026
ಗ್ರಾಮಾಂತರ ಸುದ್ದಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕವಿ ಸಮ್ಮಿಲನ

ಬೆಳ್ತಂಗಡಿ :ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ಬೆಳ್ತಂಗಡಿ ತಾಲೂಕು ಘಟಕ ಇದರ ನೇತೃತ್ವದಲ್ಲಿ ‘ಹಸಿರೇ ನಮ್ಮ ಉಸಿರು’ ವಿಷಯದ ಕುರಿತು ಕವಿ ಸಮ್ಮಿಲನ ಕಾರ್ಯಕ್ರಮ ಬೆಳ್ತಂಗಡಿಯ ಜೇಸಿ ಭವನ ಜರುಗಿತು.

ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕವನಗಳ ಅವಲೋಕನದ ನಿರ್ವಹಣೆಯನ್ನು ಉಪನ್ಯಾಸಕಿ ಹೇಮಾವತಿ ಕೆ.ನಡೆಸಿದರು. ತಾಲೂಕು ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ಬದನಾಜೆ, ಕಾರ್ಯದರ್ಶಿ ಸುಭಾಷಿಣಿ,ಸಹ ಕಾರ್ಯದರ್ಶಿ ಸಂತೋಷಿನಿ ಕಾರಂತ್, ಮಹಿಳಾ ಪ್ರಕಾರದ ಕೋಶಾಧಿಕಾರಿ ವನಜಾ ಜೋಷಿ,ಸದಸ್ಯರಾದ ದಿವಾಕರ್ ಕೊಕ್ಕಡ ,ಶಿವಪ್ರಸಾದ್ ಸುರ್ಯ,ಕೇಶವ ಭಟ್ ಅತ್ತಾಜೆ ಉಪಸ್ಥಿತರಿದ್ದರು.


ಅಭಾಸಪ ಮಹಿಳಾ ಪ್ರಕಾರ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷೆ ಆಶಾ ಅಡೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಳ್ತಂಗಡಿ ಪರಿಸರದ ಕವಿಗಳಾದ ವೃಂದಾ ತಾಮನ್ಕರ್, ಉಷಾ ಶಶಿಧರ್ ಶೆಟ್ಟಿ,ಅಶ್ವಿನಿ ಹೆಬ್ಬಾರ್,ಅಶ್ವಿಜಾ ಶ್ರೀಧರ್, ಅಕ್ಷತಾ ಅಡೂರ್,ಜ್ಯೋತಿ, ಜ್ಯೋತಿ ಬಾಳಿಗ, ಸುಮತಿ ಪಿ. ಕಾರ್ಕಳ,ಧನ್ಯಾ ನಾವುಳೆ, ಆಶಾ, ತೃಷಾ, ಸೃಷ್ಟಿ, ಮೋಕ್ಷಿತ್ ಕೆ., ರಕ್ಷಾ ಎನ್., ಪುಣ್ಯಶ್ರೀ, ತ್ರಿಷಾ ಜೈನ್, ಮೋಕ್ಷಿತಾ, ಮೋಕ್ಷಾ ವರ್ಷಿತಾ, ರಶ್ಮಿ ಸ್ವರಚಿತ ಕವನ ವಾಚಿಸಿದರು.


ಮಹಿಳಾ ಪ್ರಕಾರದ ಪ್ರಮುಖ್ ವನಿತಾ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಮೇಘನಾ ಪ್ರಶಾಂತ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.ಅಕ್ಷತಾ ಅಡೂರ್ ಸಹಕರಿಸಿದರು.

Related posts

ಎಸ್.ಡಿ.ಎಂ ಕಾಲೇಜು : ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪೂರ್ವಾಭ್ಯಾಸ ಶಿಬಿರ

Suddi Udaya

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ.ವಿ. ದೇವಸ್ಯ, ಉಪಾಧ್ಯಕ್ಷರಾಗಿ ಸುನಿಲ್ ದೊಂಡೋಲೆ ಅವಿರೋಧ ಆಯ್ಕೆ

Suddi Udaya

ಕಡಿರುದ್ಯಾವರ: ಕೆ. ಎನ್. ಭಟ್ ಶಿರಾಡಿಪಾಲ್ ಜನ್ಮ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯ ಅವ್ಯವಸ್ಥೆಯ ಕೇಳುವವರಾರು? : ಡಿವೈಎಫ್ ಐ ಪ್ರಶ್ನೆ

Suddi Udaya

ಜು12:ಯುವವಾಹಿನಿ ಬೆಳ್ತಂಗಡಿ ಘಟಕದ ಪದಪ್ರದಾನ ಸಮಾರಂಭ: ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ ಹಾಗೂ ಸಾಂತ್ವನ ನಿಧಿ ವಿತರಣೆ

Suddi Udaya

ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ

Suddi Udaya
error: Content is protected !!