July 23, 2026
ಗ್ರಾಮಾಂತರ ಸುದ್ದಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕವಿ ಸಮ್ಮಿಲನ

ಬೆಳ್ತಂಗಡಿ :ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಮಹಿಳಾ ಪ್ರಕಾರ ಬೆಳ್ತಂಗಡಿ ತಾಲೂಕು ಘಟಕ ಇದರ ನೇತೃತ್ವದಲ್ಲಿ ‘ಹಸಿರೇ ನಮ್ಮ ಉಸಿರು’ ವಿಷಯದ ಕುರಿತು ಕವಿ ಸಮ್ಮಿಲನ ಕಾರ್ಯಕ್ರಮ ಬೆಳ್ತಂಗಡಿಯ ಜೇಸಿ ಭವನ ಜರುಗಿತು.

ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಕವನಗಳ ಅವಲೋಕನದ ನಿರ್ವಹಣೆಯನ್ನು ಉಪನ್ಯಾಸಕಿ ಹೇಮಾವತಿ ಕೆ.ನಡೆಸಿದರು. ತಾಲೂಕು ಸಮಿತಿ ಉಪಾಧ್ಯಕ್ಷ ರಾಮಕೃಷ್ಣ ಬದನಾಜೆ, ಕಾರ್ಯದರ್ಶಿ ಸುಭಾಷಿಣಿ,ಸಹ ಕಾರ್ಯದರ್ಶಿ ಸಂತೋಷಿನಿ ಕಾರಂತ್, ಮಹಿಳಾ ಪ್ರಕಾರದ ಕೋಶಾಧಿಕಾರಿ ವನಜಾ ಜೋಷಿ,ಸದಸ್ಯರಾದ ದಿವಾಕರ್ ಕೊಕ್ಕಡ ,ಶಿವಪ್ರಸಾದ್ ಸುರ್ಯ,ಕೇಶವ ಭಟ್ ಅತ್ತಾಜೆ ಉಪಸ್ಥಿತರಿದ್ದರು.


ಅಭಾಸಪ ಮಹಿಳಾ ಪ್ರಕಾರ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷೆ ಆಶಾ ಅಡೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಳ್ತಂಗಡಿ ಪರಿಸರದ ಕವಿಗಳಾದ ವೃಂದಾ ತಾಮನ್ಕರ್, ಉಷಾ ಶಶಿಧರ್ ಶೆಟ್ಟಿ,ಅಶ್ವಿನಿ ಹೆಬ್ಬಾರ್,ಅಶ್ವಿಜಾ ಶ್ರೀಧರ್, ಅಕ್ಷತಾ ಅಡೂರ್,ಜ್ಯೋತಿ, ಜ್ಯೋತಿ ಬಾಳಿಗ, ಸುಮತಿ ಪಿ. ಕಾರ್ಕಳ,ಧನ್ಯಾ ನಾವುಳೆ, ಆಶಾ, ತೃಷಾ, ಸೃಷ್ಟಿ, ಮೋಕ್ಷಿತ್ ಕೆ., ರಕ್ಷಾ ಎನ್., ಪುಣ್ಯಶ್ರೀ, ತ್ರಿಷಾ ಜೈನ್, ಮೋಕ್ಷಿತಾ, ಮೋಕ್ಷಾ ವರ್ಷಿತಾ, ರಶ್ಮಿ ಸ್ವರಚಿತ ಕವನ ವಾಚಿಸಿದರು.


ಮಹಿಳಾ ಪ್ರಕಾರದ ಪ್ರಮುಖ್ ವನಿತಾ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಮೇಘನಾ ಪ್ರಶಾಂತ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.ಅಕ್ಷತಾ ಅಡೂರ್ ಸಹಕರಿಸಿದರು.

Related posts

ಇಳಂತಿಲ ಗ್ರಾ.ಪಂ. ನಲ್ಲಿ ಉಜಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮ

Suddi Udaya

ಮೇ 24: ಮುಂಡೂರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ:ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ: ರೂ. 123 ಕೋಟಿ ವ್ಯವಹಾರ, ರೂ. 50 ಲಕ್ಷ ಲಾಭ, ಶೇ.12 ಡಿವಿಡೆಂಡ್

Suddi Udaya

ಶಿರ್ಲಾಲಿನಲ್ಲಿ 25ನೇ ವರ್ಷದ ಗುರುಪೂಜಾ ಕಾರ್ಯಕ್ರಮ

Suddi Udaya

ಏಕರೂಪ ಸಮವಸ್ತ್ರ ನೀತಿ ಪಾಲನೆ ಹಾಗೂ ಬಕ್ರೀದ್ ಹಬ್ಬದ ಹಿನ್ನಲೆ ಅಕ್ರಮ ಗೋಹತ್ಯೆ ತಡೆಗೆ ಆಗ್ರಹ: ಹಿಂದೂ ಜನಜಾಗೃತಿ ಸಮಿತಿಯಿಂದ ತಹಶೀಲ್ದಾರ್ ರಿಗೆ ಮನವಿ

Suddi Udaya
error: Content is protected !!