ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಕೆಸರಡ್ ಒಂಜಿ ದಿನ” ಕಾರ್ಯಕ್ರಮ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ “ಕೆಸರಡ್ ಒಂಜಿ ದಿನ” ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಶಾಲೆಯ ಪರಿಸರ ಸಂಘ, ಸ್ಕೌಟ್ ಅಂಡ್ ಗೈಡ್ ನ ವಿದ್ಯಾರ್ಥಿಗಳು ಮತ್ತು ಸಂಸ್ಕೃತಿಕ ಸಂಘದ ಸದಸ್ಯರು ಭತ್ತದ ಗದ್ದೆಯಲ್ಲಿ ಸೇರಿ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಸ್ಕೌಟ್ ಅಂಡ್ ಗೈಡ್, ಪರಿಸರ ಸಂಘ ಮತ್ತು ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳಿಗೆ ಶಾರೀರಿಕ ಚಟುವಟಿಗೆಗೆ ಪ್ರೋತ್ಸಾಹ ನೀಡುವ ಜೊತೆಗೆ, ಮಕ್ಕಳಲ್ಲಿ ತಂಡಭಾವನೆ ಹಾಗೂ ಸ್ನೇಹ ಭಾವ, ಸ್ಪರ್ಧಾತ್ಮಕ ಮನೋಭಾವವೂ ಬೆಳೆಯುವ ಪರಿಸರ ಒದಗಿಸಲಾಗಿತ್ತು.


ಪರಿಸರ ಸಂಘದ ಹಾಗೂ ಸ್ಕೌಟ್ ಹಾಗೂ ಗೈಡ್ ಸದಸ್ಯರು ಗದ್ದೆಯ ಬದುವನ್ನು ಸರಿಪಡಿಸಿ, ಕಲ್ಲು ಹಾಗೂ ಕಸವನ್ನು ತೆಗೆದು, ಮಣ್ಣನ್ನು ಹದಗೊಳಿಸಿ ನಾಟಿಗೆ ಅಣಿಗೊಳಿಸಿದರು.


ಸಾಂಸ್ಕೃತಿಕ ಸಂಘದ ವಿದ್ಯಾರ್ಥಿಗಳ ಜೊತೆಗೆ ಪರಿಸರ ಸಂಘದ ಹಾಗೂ ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ತುಳುನಾಡು ನುಡಿಗೆ ಸಂಬಂಧಿಸಿದ ನೃತ್ಯಗಳನ್ನು ಪ್ರದರ್ಶಿಸಿದರು.ಅಡಿಕೆ ಹಾಳೆಯಲ್ಲಿ ಕುಳಿತು ಕೆಸರಿನಲ್ಲಿ ಎಳೆಯುವ ಆಟ, ಕೆಸರು ಗದ್ದೆ ಓಟ ಇತ್ಯಾದಿ ವಿವಿಧ ವಿನೋದಾವಳಿ ಆಟಗಳನ್ನು ಆಡಿ ವಿದ್ಯಾರ್ಥಿಗಳು ಸಂತಸ ಪಟ್ಟರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳ ಎಂ ವಿ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಕಾರ್ಯಕ್ರಮವನ್ನು ಶಾಲೆಯ ಸ್ಕೌಟ್ ಅಂಡ್ ಗೈಡ್ ಉಸ್ತುವಾರಿ ಶಿಕ್ಷಕರು, ಪರಿಸರ ಸಂಘದ ಶಿಕ್ಷಕರು ಮತ್ತು ಸಾಂಸ್ಕೃತಿಕ ಸಂಘದ ಶಿಕ್ಷಕರು ಸಂಯೋಜಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.

Related posts

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ತಂಬಾಕು ರಹಿತ ದಿನ

Suddi Udaya

ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದ ಸಂಜನಾ ಪೈ ಯವರಿಗೆ ಶಾಸಕ ಹರೀಶ್‌ ಪೂಂಜರಿಂದ ಸನ್ಮಾನ

Suddi Udaya

ಉಜಿರೆ ಎಸ್.ಡಿ.ಎಂ ಸಿಬಿಎಸ್ಇ ಶಾಲೆಯಲ್ಲಿ ‘ಕಲಾಬ್ದಿ – 2025’ ಗೆ ಚಾಲನೆ

Suddi Udaya

ಕೃಷಿ ಮಾಡಿ ಜೀವನ ನಡೆಸಲು 2 ಎಕರೆ ಡಿಸಿ ಮನ್ನಾ ಭೂಮಿ ನೀಡಿ , ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ನಾಯಕರುಗಳ ಆಗ್ರಹ

Suddi Udaya

ಬೆಳ್ತಂಗಡಿಯಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜು ಕ್ಯಾಂಪಸ್ ಉದ್ಘಾಟನೆ

Suddi Udaya

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಈಜಲು ತೆರಳಿದ ಉಪನ್ಯಾಸಕರಿಬ್ಬರು ನೀರುಪಾಲು: ಬೆಳ್ತಂಗಡಿ ತಾಲೂಕಿನ ನೆರಿಯಾ ನಿವಾಸಿ ಪುನೀತ್ ನಾಪತ್ತೆ, ಮುಂದುವರಿದ ಶೋಧಕಾರ್ಯ

Suddi Udaya
error: Content is protected !!