23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಳಿಯ ಗ್ರಾ.ಪಂ. ನ ಮೂರನೇ ವಾರ್ಡ್ ಮತ್ತು ನ್ಯಾಯತರ್ಪು ಗ್ರಾಮದ ಪ್ರಥಮ ಸುತ್ತಿನ ವಾರ್ಡ್ ಸಭೆ

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್ ನ ಕಳಿಯ ಮೂರನೇ ವಾರ್ಡ್ ಮತ್ತು ನ್ಯಾಯತರ್ಪು ಗ್ರಾಮದ ಪ್ರಥಮ ಸುತ್ತಿನ ವಾರ್ಡ್ ಸಭೆಯು ನಾಳ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್ ಉಪಸ್ಥಿತಿಯಲ್ಲಿ ಕಳಿಯ ವಾರ್ಡ್ ಮೂರನೇ ವಾರ್ಡ್ ನ ಸದಸ್ಯರಾದ ಸುಧಾಕರ ಮಜಲು ರವರ ಅಧ್ಯಕ್ಷತೆಯಲ್ಲಿ ಮೂರನೇ ಬ್ಲಾಕ್ ನ ವಾರ್ಡ್ ಸಭೆ ಹಾಗೂ ನ್ಯಾಯತರ್ಪು ಗ್ರಾಮದ ವಾರ್ಡ್ ಸದಸ್ಯರಾದ ವಿಜಯ ಗೌಡ ಅಧ್ಯಕ್ಷತೆಯಲ್ಲಿ ನ್ಯಾಯತರ್ಪು ಗ್ರಾಮದ ವಾರ್ಡ್ ಸಭೆ ಜರಗಿತು.


ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್,ಸದಸ್ಯರಾದ ಶ್ರೀಮತಿ ಮೋಹಿನಿ, ಲತೀಫ್ ಪರಿಮ, ಯಶೋದರ ಶೆಟ್ಟಿ, ಶ್ರೀಮತಿ ಕುಸುಮ ಎನ್ ಬಂಗೇರ,ಶ್ರೀಮತಿ ಪುಷ್ಪಾ ಹಾಗೂ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.
ಗ್ರಾಮಸ್ಥರಿಂದ ಕರತ್ತೂರು ರಸ್ತೆಯನ್ನು ದುರಸ್ಥಿ ಪಡಿಸುವಂತೆ ತಿಳಿಸಿದರು.


ವಾರ್ಡ್ ನ ವಿವಿಧ ಕಡೆಗಳಲ್ಲಿ ಸೋಲಾರ್ ಲೈಟ್ ಅಳವಡಿಸಲು, ತೀವೃ ಹದಗೆಟ್ಟ ಬಟ್ಟೆಮಾರು ವಂಜಾರೆ ರಸ್ತೆಯನ್ನು ಡಾಮರೀಕರಣಗೊಳಿಸಲು, ವಂಜಾರೆ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರವನ್ನು ತೆರವುಗೊಳಿಸಲು ಗ್ರಾಮಸ್ಥರು ತಿಳಿಸಿದಾಗ ಈ ಬಗ್ಗೆ ಈಗಾಗಲೇ ಅರಣ್ಯ ಮತ್ತು ಮೆಸ್ಕಾಮ್ ಇಲಾಖೆಗೆ ಪತ್ರ ಬರೆದಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಕಳೆದ ವಾರ್ಡ್ ಸಭೆಗಳಲ್ಲಿ ಸೋಲಾರ್ ದೀಪ ಅಳವಡಿಸಲು ಬೇಡಿಕೆ ಸಲ್ಲಿಸಿದಂತೆ ಈಗಾಗಲೇ ಪಂಚಾಯತ್ ವತಿಯಿಂದ ಬಟ್ಟೆಮಾರು ಕಜೆ ವಂಜಾರೆ ರಸ್ತೆ ಬದಿಯಲ್ಲಿ ಸೋಲಾರ್ ದೀಪ ಅಳವಡಿಸಿದ್ದಕ್ಕೆ ಪಂಚಾಯತ್ ಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.


ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ ದನ್ಯವಾದವಿತ್ತರು. ಸಿಬ್ಬಂದಿಗಳಾದ ರವಿ ಎಚ್,ಸುರೇಶ್ ಗೌಡ ಸಹಕರಿಸಿದರು.

Related posts

ನೆರಿಯ ಅರ್ಬಿಬೊಟ್ಟುನಲ್ಲಿ ಕುಸಿಯುವ ಹಂತದಲ್ಲಿರುವ ಕಿರುಸೇತುವೆ

Suddi Udaya

ವಲಯ ಮಟ್ಟದ ಕ್ರೀಡಾಕೂಟ: ಅಳದಂಗಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ: ಲಕ್ಷ್ಮೀಶ ಭಟ್ ಇವರಿಗೆ ಹಿಮಾಲಯ ವುಡ್ ಬ್ಯಾಡ್ಜ್ ನಲ್ಲಿ ಅರ್ಹತೆ

Suddi Udaya

ಮನಕಲಕುವ ಹೃದಯ ವಿದ್ರಾವಕ ಘಟನೆ: ನಲ್ಲೂರು ಬಳಿ ಬೈಕ್- ಮಿನಿ ಲಾರಿ ನಡುವೆ ಅಪಘಾತ: ಬೈಕ್ ನಲ್ಲಿದ್ದ ಪುಟ್ಟ ಮಕ್ಕಳು ಸೇರಿ ನಾಲ್ವರು ದುರ್ಮರಣ

Suddi Udaya

ಕಾಯರ್ತಡ್ಕ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಶ್ರೀಮತಿ ರತ್ನ ರವರಿಗೆ ಚಿಕಿತ್ಸಾ ನೆರವು

Suddi Udaya

ಮತ ಚಲಾಯಿಸಿದ ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಹಿಲನ್

Suddi Udaya
error: Content is protected !!