September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆ.5 ರಂದು ಮಂಗಳೂರು ಜಂಟಿ ಕ್ರಿಯಾ ಸಮಿತಿಯ ವತಿಯಿಂದ ಏರ್ಪಡಿಸಲಾದ ಹೋರಾಟಕ್ಕೆ ಭಾರತೀಯ ಮಜ್ದೂರು ಸಂಘ ಬಾಹ್ಯ ಬೆಂಬಲ

ಮಂಗಳೂರು : ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ಹಾಗೂ ನಿವೃತ್ತ ನೌಕರರ ಹಲವಾರು ಹಕ್ಕುಗಳು ತೀವ್ರ ಉಲ್ಲಂಘನೆಯ ಸ್ಥಿತಿಗೆ ತಲುಪಿರುವುದರಿಂದ, ಆ. 5ರಂದು ಜಂಟಿ ಕ್ರೀಯಾ ಸಮಿತಿಯ ವತಿಯಿಂದ ಏರ್ಪಡಿಸಲಾದ ಹೋರಾಟಕ್ಕೆ ಭಾರತೀಯ ಮಜ್ದೂರು ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕ ಬಾಹ್ಯ ಬೆಂಬಲ ನೀಡುತ್ತಿದೆ.

ಸಂಘಟನೆಯ ದೃಷ್ಟಿಯಲ್ಲಿ ವೇತನ ಪರಿಷ್ಕರಣೆ, ಹಿಂಬಾಕಿ ಬಾಕಿ ಹಣದ ಪಾವತಿ, ಅನುಚಿತ ಶಿಸ್ತು ಕ್ರಮಗಳ ವಿರೋಧ, ಗುತ್ತಿಗೆ ನೇಮಕಾತಿಗಳ ರದ್ದುಪಡಿಸುವುದು ಹಾಗೂ ಭ್ರಷ್ಟಾಚಾರದ ವಿರುದ್ಧ ಕ್ರಮಗಳೆಲ್ಲ ಅತೀ ತುರ್ತು ಹಾಗೂ ನ್ಯಾಯಸಮ್ಮತ ಬೇಡಿಕೆಗಳಾಗಿವೆ. ಈ ಬೇಡಿಕೆಗಳು ಕೇವಲ ಕಾರ್ಮಿಕರ ಅಭಿವೃದ್ದಿಗೆ ಮಾತ್ರವಲ್ಲದೆ ನಿಗಮಗಳ ಕಾರ್ಯಕ್ಷಮತೆ ಹಾಗೂ ಸಾರ್ವಜನಿಕ ಸೇವೆಯ ಗುಣಮಟ್ಟಕ್ಕೂ ಅತ್ಯಂತ ಅಗತ್ಯವಾಗಿವೆ. ಭಾರತೀಯ ಮಜ್ದೂರು ಸಂಘವು ಯಾವಾಗಲೂ ನ್ಯಾಯಕ್ಕಾಗಿ ಹೋರಾಡುತ್ತಿರುವ ಕಾರ್ಮಿಕರೊಂದಿಗೆ ನಿಂತಿದೆ. ಕಾರ್ಮಿಕರ ಹಿತಾಸಕ್ತಿಯೇ ನಮ್ಮ ಹೋರಾಟದ ನೇರ ಉದ್ದೇಶ. ಸರ್ಕಾರವು ತಕ್ಷಣ ಸ್ಪಂದಿಸಿ ಈ ಬೇಡಿಕೆಗಳನ್ನು ಈಡೇರಿಸಬೇಕೆಂಬುದಾಗಿ ನಾವು ಒತ್ತಾಯಿಸುತ್ತೇವೆ. ಆಗಸ್ಟ್ 5ರ ಪ್ರತಿಭಟನೆ ನೌಕರರ ಧ್ವನಿ, ನೌಕರರ ಆತ್ಮವಿಲ್ಲದ ಸ್ಥಿತಿಗೆ ವಿರೋಧದ ಘೋಷಣೆಯಾಗಲಿದೆ. ಎಲ್ಲ ರಾಜ್ಯ ಸರ್ಕಾರಿ ಸಾರಿಗೆ ನೌಕರರ ಹಕ್ಕುಗಳ ರಕ್ಷಣೆಗಾಗಿ ನಡೆಯುತ್ತಿರುವ ಈ ಹೋರಾಟದ ಜೊತೆಗೆ ನಮ್ಮ ಧ್ವನಿ ಕೂಡ ಶಕ್ತಿಯಾಗಿ ನಿಲ್ಲಲಿದೆ. ಎಂದು ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಹೇಳಿದರು.

Related posts

ರೂ.2.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಪ್ರೌಢಶಾಲಾ ಕಟ್ಟಡ ಸಿಂಧೂರ: ಜೂ. 20 ರಂದು ಲೋಕಾರ್ಪಣೆಗೊಳ್ಳಲಿದೆಪತ್ರಿಕಾಗೋಷ್ಠಿಯಲ್ಲಿ ಅನಂತ ಭಟ್ ಮಚ್ಚಿಮಲೆ ಹೇಳಿಕೆ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿಗೆ ಎಕ್ಸ್‌ಪೆರಿಯಾ-2023 ಪ್ರಶಸ್ತಿ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಸ್ಥಾನದ ಉಪಚುನಾವಣೆಗೆ ಮಾಜಿ ಸೈನಿಕ ತಂಗಚ್ಚನ್ ಅವಿರೋಧ ಆಯ್ಕೆ

Suddi Udaya

ಅಕ್ರಮ ಸಕ್ರಮ ಭೂ ಮಂಜೂರಾತಿ ಆ್ಯಪ್ ನಲ್ಲಿ ಇರುವ ತೊಡಕನ್ನು ಬದಲಾಯಿಸುವಂತೆ ಆಗ್ರಹಿಸಿ ಕೃಷಿಕರಿಂದ ಸಚಿವ ಕೃಷ್ಣ ಬೈರೆ ಗೌಡರಿಗೆ ಪತ್ರ ಚಳುವಳಿ ಮೂಲಕ ಮನವಿ

Suddi Udaya

ಬಡಗಕಾರಂದೂರು: ಬಾವಲಿಗುಂಡಿ ಕಿಂಡಿ ಅಣೆಕಟ್ಟು ಬಳಿ ರೂ.3 ಕೋಟಿ ವೆಚ್ಚದ ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ

Suddi Udaya

ಮುಂಡಾಜೆ ಗ್ರಾ.ಪಂ. ಸಿಬ್ಬಂದಿ ಜನಾರ್ದನ ನಾಯ್ಕ ನಿಧನ

Suddi Udaya
error: Content is protected !!