July 23, 2026
ಅಪಘಾತಗ್ರಾಮಾಂತರ ಸುದ್ದಿವರದಿಸಮಸ್ಯೆ

ಶಿಶಿಲದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ಜರಿದು ರಸ್ತೆ ಬಂದ್

ಶಿಶಿಲ: ಇಂದು (ಆ. 5)ಸಂಜೆ ಪ್ರಾರಂಭವಾದ ಮಳೆ ಎಡೆಬಿಡದೆ ಬರುತ್ತಿದ್ದು ಶಿಶಿಲ ಪರಿಸರದಲ್ಲಿ ಆತಂಕದ ಸನ್ನಿವೇಶ ನಿರ್ಮಾಣವಾಗಿದೆ.ಶಿಶಿಲೇಶ್ವರ ದೇವಸ್ಥಾನದೊಳಗೆ ನೀರು ನುಗ್ಗಿ ಪರಿಸ್ಥಿತಿ ಹದಗೆಟ್ಟಿರುತ್ತದೆ. ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ರಸ್ತೆಗೆ ಜರಿದು ಅರಸಿನಮಕ್ಕಿ- ಶಿಶಿಲ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.

ಬರ್ಗುಳ ಎಂಬಲ್ಲಿ ಅರಣ್ಯದಿಂದ ಬರುವ ನೀರು ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿ ಹೊಳೆಯಂತಾಗಿ ವಾಹನ ಸಂಚರಿಸಲು ಆಗದಂತ ಪರಿಸ್ಥಿತಿ ಉಂಟಾಗಿದೆ. ಮುಚ್ಚಿರಡ್ಕ ಕೃಷ್ಣಪ್ಪ ಗೌಡರವರ ಮನೆಯ ಬಳಿ ಗುಡ್ಡ ಜರಿದು ಮನೆಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ರಸ್ತೆ -ಹಳ್ಳ ತೋಡುಗಳು ನೀರಿನಿಂದ ತುಂಬಿವೆ.

ಪರಿಸ್ಥಿತಿಯನ್ನು ನಿಭಾಯಿಸಲು ಗ್ರಾ.ಪಂ. ಅಧ್ಯಕ್ಷ ಸುಧೀನ್, ಶೌರ್ಯ ವಿಪತ್ತು ನಿರ್ವಹಣಾ ತಂಡ, ಗ್ರಾ.ಪಂ ಹಾಗೂ ಗ್ರಾಮಸ್ಥರು ಶ್ರಮಿಸುತ್ತಿದ್ದಾರೆ. ರಸ್ತೆಗೆ ಬಿದ್ದ ಮಣ್ಣನ್ನು ತೆಗೆಯಲು ಹಿಟಾಚಿ ಮೂಲಕ ಪ್ರಯತ್ನಿಸಲಾಗುತ್ತಿದೆ.ಅರಸಿನಮಕ್ಕಿಯಿಂದ ಬೂಡುಮುಗೇರು ಕಡೆ ಬರುವಲ್ಲಿ ಕೂಡಾ ಬರೆ ಜರಿದು ರಸ್ತೆಗೆ ಮಣ್ಣು ಬಿದ್ದಿದ್ದೆ. ಪಟ್ರಮೆ ಮಸೀದಿ ಬಳಿ ನದಿ ನೀರು ರಸ್ತೆಗೆ ಬಂದಿರುತ್ತದೆ. ಮಣಿಯೇರು ರಸ್ತೆ, ಕೂಟೇಲು ಬಳಿ ನೀರು ತುಂಬಿ ಸಂಪರ್ಕ ಕಡಿದಿದೆ.

Related posts

ಡಾ.ಸುಬ್ರಹ್ಮಣ್ಯ ಭಟ್ಟರ ದಕ್ಷಿಣ ಕನ್ನಡ ಭಾಷಾ ಸೊಗಡಿನ  ಮೂರನೇ ಕಾದಂಬರಿ “ಅಚ್ಚಣ್ಣ ಭಟ್ರು” ವನ್ನು  ಇಂದು ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಅರಸಿನಮಕ್ಕಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಮೇ 8: ಮಾಜಿ ಜಿ.ಪಂ. ಉಪಾಧ್ಯಕ್ಷ ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಬಿ.ಎಸ್. ಯಡಿಯೂರಪ್ಪ ‘ಅಭಿಮಾನೋತ್ಸವ’ ಕಾರ್ಯಕ್ರಮ

Suddi Udaya

ಪ್ರತಿಭಾ ಕಾರಂಜಿ: ಬಜಿರೆ ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಸೋದೆ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಧರ್ಮಸ್ಥಳ ಭೇಟಿ

Suddi Udaya

ಫೆ.7-8: ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾಮಹೋತ್ಸವ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ರಂಗಪೂಜೆ

Suddi Udaya
error: Content is protected !!