ನಿಡ್ಲೆ: ಬರೆಂಗಾಯ ಅಗ್ರಿಲೀಫ್ ಅಡಿಕೆ ಹಾಳೆತಟ್ಟೆ ತಯಾರಿಕಾ ಸಂಸ್ಥೆಯ ಅವಿನಾಶ್ ರಾವ್ ಹಾಗೂ ಅತಿಶಯ್ ಜೈನ್ ರವರ ದೂರದೃಷ್ಟಿಯೊಂದಿಗೆ 2019ರಲ್ಲಿ ಪ್ರೈ.ಲಿ. ಆಗಿ ವಿವಿಧ ಪರಿಸರ ಸ್ನೇಹಿ ಉತ್ಪನಗಳೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟ ಹೊಂದಿರುವ ಮತ್ತು ರಫ್ತು ಉದ್ಯಮದಲ್ಲಿ ದೇಶದ ನಂ.1 ಸಂಸ್ಥೆಯಾಗಿದೆ.
ಈ ಸಂಸ್ಥೆಯು ಗ್ರಾಮೀಣ ಉದ್ಯೋಗಕ್ಕೆ ಬೆಂಬಲಿಸುವುದರ ಜೊತೆಗೆ ದೇಶದ ಮೂಲೆ ಮೂಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಸಂಸ್ಥೆಯಲ್ಲಿ ಉದ್ಯೋಗದ ಅವಕಾಶ ನೀಡಿದೆ.
ಸಂಸ್ಥೆಯ ಉನ್ನತಿಗಾಗಿ ಪ್ರತಿವರ್ಷ ವಿವಿಧ ಹುದ್ದೆಗಳಿಗೆ ಉದ್ಯೋಗ ಮೇಳವನ್ನು ಆಯೋಜಿಸುತ್ತಿದ್ದು, ಈ ವರ್ಷವು ಆ.17 ರಂದು ಉಜಿರೆ ದಿ ಓಷ್ಯನ್ ಪರ್ಲ್ನಲ್ಲಿ ಬೆಳಿಗ್ಗೆ 9 ರಿಂದ ವಾಕ್ ಇನ್ ಡ್ರೈವ್ ಉದ್ಯೋಗ ಮೇಳ ನಡೆಯಲಿದೆ. ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.













