ಬೆಳ್ತಂಗಡಿ: ಕರಾಯ ಮಖ್ಯರಸ್ತೆಯ ಕರಾಯ ಮಸೀದಿ ಮುಂದುಗಡೆ ಮೋರಿ ಕುಸಿತಗೊಂಡ ಬಗ್ಗೆ ವರದಿಯಾಗಿದೆ.

ಮಳೆ ನೀರು ಮತ್ತು ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಆಲವಾದ ಹೊಂಡ ಬಿದ್ದು ನೀರು ತುಂಬಿದೆ, ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇಂತಹಾ ಮೋರಿ ಕುಸಿತದಿಂದ ಹಲವು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ದಿನ ನಿತ್ಯ ಶಾಲಾ ಮಕ್ಕಳು ಇದೇ ರಸ್ತೆಯ ಪಕ್ಕದಲ್ಲಿ ನಡೆದಾಡುತ್ತಾ ಇದ್ದಾರೆ.
ಇಂತಹ ಗಂಭೀರವಾದ ಸಮಸ್ಯೆಯನ್ನು ಸಂಬಂಧಿಸಿದ ಇಲಾಖೆ ತಕ್ಷಣವೇ ದುರಸ್ತಿ ಮಾಡಬೇಕು. ಇನ್ನಷ್ಟು ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಪ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.













