ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ(ರಿ) ಇವರ ಸಹೋಯೋಗದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಭಾವಗೀತೆ ಮತ್ತ ದೇಶಭಕ್ತಿ ಸಮೂಹ ಗೀತೆಗಳ “ರೋಟಾಲಯ ಸಂಗೀತ ಸ್ಪರ್ಧೆ” ಯು ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಂಗಣದದಲ್ಲಿ ನಡೆಯಿತು.

ಉದ್ಘಾಟನೆಯನ್ನು ರೋಟರಿ ಕ್ಲಭ್ ನ ಅಸಿಸ್ಟೆಂಟ್ ಗವರ್ನರ್ ಡಾ. ಎ. ಜೆ ಶೆಟ್ಟಿ ಮತ್ತು ಲಯನ್ಸ್ ಕ್ಲಬ್ ಪೂರ್ವ ಪ್ರಾಂತ್ಯಾಧ್ಯಕ್ಷರಾದ ರಾಜು ಶೆಟ್ಟಿಯವರು ಜಂಟಿಯಾಗಿ ನಿರ್ವಹಿಸಿದರು.
ಮುಖ್ಯ ಅತಿಥಿ ಶಿವಾನಂದ, ರೋಟರಿ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭು, ಕಾರ್ಯದರ್ಶಿ ಡಾ.ಎಂ.ಎಂ ದಯಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಲ। ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಲಿಯೋ ಕ್ಲಬ್ ಅಧ್ಯಕ್ಷೆ ಡಾ ಭಾಷಿನಿ, ಲ. ವಸಂತ ಶೆಟ್ಟಿ ಶ್ರದ್ದಾ, ಲ| ಧರಣೇಂದ್ರ ಕುಮಾರ್ ,ಲ| ರಾಮಕೃಷ್ಣ, ಲಯನ್ , ಉಮೇಶ್ ಶೆಟ್ಟಿ, ಲಯನ್ ರವೀಂದ್ರ ಶೆಟ್ಟಿ, ಲಯನ್ ನಾಣ್ಯಪ್ಪ ನಾಯ್ಕ, ಲ. ಸುಂದರಿ ಲಿಯೋ ಅಭಿಜ್ಞಾ ರೊ. ತ್ರಿವಿಕ್ರಮ ಹೆಬ್ಬಾರ್, ರೊ.ಡಾ. ಶಶಿಕಾಂತ ಡೋಂಗ್ರೆ, ರೊ.ಅನಂತ ಭಟ್ ಮಚ್ಚಿಮಲೆ, ರೊ. ಅರವಿಂದ ಕಾರಂತ, ಆ್ಯನ್ ಗೀತಾ ಪ್ರಭು ಭಾಗವಹಿಸಿದರು.











