22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಹದಗೆಟ್ಟ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆ: ಖಾಸಗಿ ಬಸ್ಸು ನೌಕರರ ಸಂಘದವರಿಂದ ಆಯ್ದ ಭಾಗದಲ್ಲಿ ಶ್ರಮದಾನದ ಮೂಲಕ ದುರಸ್ತಿ

ಬೆಳ್ತಂಗಡಿ; ಖಾಸಗಿ ಬಸ್ಸು ನೌಕರರ ಸಂಘ ಬೆಳ್ತಂಗಡಿ- ಉಪ್ಪಿನಂಗಡಿ ಇದರ ವತಿಯಿಂದ ಶ್ರಮದಾನ ಮಾಡುವ ಮೂಲಕ ತೀರಾ ನಾದುರಸ್ಥಿಯಲ್ಲಿರುವ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳನ್ನು ತಾತ್ಕಾಲಿಕವಾಗಿ ಖಾಸಗಿ ಬಸ್ಸು ನೌಕರರ ಸಂಘದವರಿಂದ ದುರಸ್ತಿ ಮಾಡಲಾಯಿತು.

ಸಂಘದ ಅಧ್ಯಕ್ಷ ಸಿದ್ದೀಕ್ ಕೆಂಪಿ ಅವರ ನೇತೃತ್ವದಲ್ಲಿ ನಡೆದ ಈ ಶ್ರಮದಾನದಲ್ಲಿ ಜೆಸಿಬಿ ಯಂತ್ರದ ಮೂಲಕ ರಸ್ತೆ ಗುಂಡಿ‌ ಹಾಗೂ‌ ಏರು‌ತಗ್ಗುಗಳನ್ನು ಸಮತಟ್ಟುಗೊಳಿಸಿ ತಾತ್ಕಾಲಿಕವಾಗಿ ಸರಾಗವಾಗಿ ಸಂಚರಿಸುವಂತೆ ಕ್ರಮ‌ವಹಿಸಲಾಯಿತು.

ಶ್ರಮದಾನದಲ್ಲಿ ಖಾಸಗಿ ಬಸ್ಸು ನೌಕರರ ಸಂಘದ ಪ್ರಮುಖರಾದ ಇಲ್ಯಾಸ್ ಕರಾಯ, ನಾರಾಯಣ, ಗಣೇಶ, ಜಯ, ಸಾದಿಕ್, ಕೆ‌ಎಸ್ ಅಬ್ದುಲ್ಲ, ಶಬೀರ್, ದಿನೇಶ್, ರಾಜೇಶ್, ಗಣೇಶ್ ಅಳಕೆ, ಬಾಬು, ಸತೀಶ್ ಕಾಮತ್, ಎಂ.ಕೆ ಮಠ, ದಿನೇಶ್ ಸಹಕರಿಸಿದರು. ತಂಡದ ಕಾರ್ಯವನ್ನು ಪ್ರಯಾಣಿಕರು ಕೊಂಡಾಡಿದರು.

Related posts

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಮತ್ತು ಯೋಧ ನಮನ ಕಾರ್ಯಕ್ರಮ

Suddi Udaya

ಬೌದ್ಧ ಮಹಾಸಭಾ ಮಾಲಾಡಿ ಇದರ ವತಿಯಿಂದ ಬುದ್ಧ ಪೂರ್ಣಿಮೆ ಆಚರಣೆ

Suddi Udaya

ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ

Suddi Udaya

ನಿಡ್ಲೆ: ನವೋದಯ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಮವಸ್ತ್ರ ವಿತರಣೆ

Suddi Udaya

ಮಡಂತ್ಯಾರು: ಶ್ರೀ ವೀರಾಂಜನೇಯ ಕ್ಷೇತ್ರ ರತ್ನಗಿರಿಯಲ್ಲಿ ಯೋಗ ತರಗತಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಮಡಂತ್ಯಾರು ವಲಯ ಭಜನಾ ಮಂಡಳಿಗಳ ಸಭೆ

Suddi Udaya
error: Content is protected !!