23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಹಾಗೂ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಸಹಯೋಗದಲ್ಲಿ “ರೋಟಾಲಯ ಸಂಗೀತ ಸ್ಪರ್ಧೆ”

ಬೆಳ್ತಂಗಡಿ : ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಇವರ ಸಹಯೋಗದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಭಾವಗೀತೆ ಮತ್ತ ದೇಶಭಕ್ತಿ ಸಮೂಹ ಗೀತೆಗಳ “ರೋಟಾಲಯ ಸಂಗೀತ ಸ್ಪರ್ಧೆ”ಯ ಉದ್ಘಾಟನೆಯನ್ನು ರೋಟರಿ ಕ್ಲಭ್ ನ ಅಸಿಸ್ಟೆಂಟ್ ಗವರ್ನರ್ ಡಾ. ಎ. ಜೆ ಶೆಟ್ಟಿ ಮತ್ತು ಲಯನ್ಸ್ ಕ್ಲಬ್ ಪೂರ್ವ ಪ್ರಾಂತ್ಯಾಧ್ಯಕ್ಷ ರಾಜು ಶೆಟ್ಟಿಯವರು ಜಂಟಿಯಾಗಿ ನಿರ್ವಹಿಸಿದರು.

ಮುಖ್ಯ ಅತಿಥಿಯಾಗಿ ಶಿವಾನಂದ, ರೋಟರಿ ಅಧ್ಯಕ್ಷ ಪ್ರೊ. ಪ್ರಕಾಶ ಪ್ರಭು, ಕಾರ್ಯದರ್ಶಿ ಡಾ.ಎಂ.ಎಂ ದಯಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಲ। ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಲಿಯೋ ಕ್ಲಬ್ ಅಧ್ಯಕ್ಷೆ ಡಾ ಭಾಷಿನಿ, ಲ।ವಸಂತ ಶೆಟ್ಟಿ ಶ್ರದ್ದಾ, ಲ।ಧರಣೇಂದ್ರ ಕುಮಾರ್ ,ಲ| ರಾಮಕೃಷ್ಣ, ಲಯನ್ ಉಮೇಶ್ ಶೆಟ್ಟಿ , ಲಯನ್ ರವೀಂದ್ರ ಶೆಟ್ಟಿ, ಲಯನ್ ನಾಣ್ಯಪ್ಪ ನಾಯ್ಕ, ಲ| ಸುಂದರಿ, ಲಿಯೋ ಅಭಿಜ್ಞಾ, ರೊ. ತ್ರಿವಿಕ್ರಮ ಹೆಬ್ಬಾರ್, ರೊ.ಡಾ ಶಶಿಕಾಂತ ಡೋಂಗ್ರೆ, ರೊ.ಅನಂತ ಭಟ್ ಮಚ್ಚಿಮಲೆ, ರೊ. ಅರವಿಂದ ಕಾರಂತ, ಆ್ಯನ್ ಗೀತಾ ಪ್ರಭು ಭಾಗವಹಿಸಿದರು.

ಬಹುಮಾನಿತರ ವಿವರಃ-
ಎ. ವಿಭಾಗ ಭಾವಗೀತೆ ಪ್ರಥಮ ಸನ್ನಿಧಿ, ಎಸ್ ಡಿ ಎಂ ಸಿಬಿಎಸ್ಸಿ ಉಜಿರೆ, ದ್ವಿತೀಯ ಅಂಜಲಿ, ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಬೆಳ್ತಂಗಡಿ,
ದೇಶಭಕ್ತಿ ಸಮೂಹ ಗಾಯನ- ಪ್ರಥಮ-ಎಸ್ ಡಿ ಎಂ ಸಿಬಿಎಸ್ಸಿ ಉಜಿರೆ, ದ್ವಿತೀಯ ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಬೆಳ್ತಂಗಡಿ.
ಬಿ ವಿಭಾಗ- ಭಾವಗೀತೆ ಪ್ರಥಮ ಪ್ರಾಪ್ತಿ ಪಿ ಶೆಟ್ಟಿ, ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಧರ್ಮಸ್ಥಳ, ದ್ವಿತೀಯ ಸ್ವಸ್ತಿ ಶ್ರೀ ಹೆಬ್ಬಾರ, ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಸಿಬಿಎಸ್ಸಿ ಉಜಿರೆ, ದೇಶಭಕ್ತಿ ಸಮೂಹ ಗಾಯನ – ಪ್ರಥಮ ಎಸ್ ಡಿ ಎಂ ಕನ್ನಡ ಮಿಡಿಯಂ ಹೈಸ್ಕೂಲ್ ಧರ್ಮಸ್ಥಳ, ದ್ವಿತೀಯ ಕೆ.ಪಿ.ಎಸ್ ಪುಂಜಾಲಕಟ್ಟೆ


ಲ। ವಸಂತ, ಲ। ಧರಣೇಂದ್ರ ಕುಮಾರ್, ಲ। ಅಮಿತಾನಂದ ಶೆಟ್ಟಿಯವರು ನಿರೂಪಣೆ ಮಾಡಿದರು. ತೀರ್ಪುಗಾರರಾಗಿ, ಪ್ರಶಾಂತ ಬಾಳಿಗ, ಸುಬ್ರಹ್ಮಣ್ಯ, ಜನಾರ್ದನ ತೋಳ್ಪಡಿತ್ತಾಯ, ಅಯ್ಯಪ್ಪ ಪ್ರಭು ಸಹಕರಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಮಾಶಾಸನ ವಿತರಣೆ

Suddi Udaya

ಕಾಪಿನಡ್ಕ ಆಟೋ ಚಾಲಕ- ಮಾಲಕ ಸಂಘದ ಮಾಜಿ ಅಧ್ಯಕ್ಷ ಸುಂದರ ದಾಸ್ ನಿಧನ

Suddi Udaya

ಚಾರಣಕ್ಕೆ ಮೊಬೈಲ್ ಆ್ಯಪ್, ಗೈಡ್ ಕಡ್ಡಾಯ-ಚಾರಣಿಗರ ಸುರಕ್ಷತೆಗೆ ಮಾರ್ಗದರ್ಶಿ ಬಿಡುಗಡೆ

Suddi Udaya

ತೋಟತ್ತಾಡಿ: ಬಾಬು ಗೌಡ ನೇಣುಬಿಗಿದು ಆತ್ಮಹತ್ಯೆ

Suddi Udaya

ಪ್ರತಿಭಾ ಕಾರಂಜಿ: ರಕ್ತೇಶ್ವರಿಪದವು ಶಾಲೆಗೆ ಸಮಗ್ರ ಪ್ರಶಸ್ತಿ

Suddi Udaya

ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ

Suddi Udaya
error: Content is protected !!