September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ: ಶಾಂತಿವನದಲ್ಲಿ 79ನೇ ಸ್ವಾತಂತ್ರ‍್ಯೋತ್ಸವದ ಭಾವೈಕ್ಯ ಉತ್ಸವ

ಧರ್ಮಸ್ಥಳ: ಶಾಂತಿವನದಲ್ಲಿ 79ನೇ ಸ್ವಾತಂತ್ರ‍್ಯೋತ್ಸವವನ್ನು ಹರ್ಷೋಲ್ಲಾಸದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿರ್ಮಲ್ ಕುಮಾರ್ ಅವರು ಸ್ವಾತಂತ್ರ‍್ಯದ ಮಹತ್ವ ಹಾಗೂ ತ್ರಿವರ್ಣ ಧ್ವಜದ ಸಂಕೇತಾರ್ಥಗಳನ್ನು ಮನದಟ್ಟುಗೊಳಿಸಿದರು. ಅವರು, ಧ್ವಜದ ಪ್ರತಿಯೊಂದು ಬಣ್ಣವು ದೇಶದ ಏಕತೆ, ಶಾಂತಿ ಹಾಗೂ ಧೈರ್ಯವನ್ನು ಪ್ರತಿನಿಧಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ವಹಿಸಿದ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತಾಯ ಅವರು, ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಸ್ವಾತಂತ್ರ‍್ಯಸೇನಾನಿಗಳ ತ್ಯಾಗ, ಶೌರ್ಯ ಹಾಗೂ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು. “ಸ್ವಾತಂತ್ರ‍್ಯ ನಮಗೆ ದೊರಕಿದ್ದು ಅನೇಕ ಹೋರಾಟ, ಬಲಿದಾನ ಮತ್ತು ತ್ಯಾಗಗಳ ಫಲ” ಎಂದು ಅವರು ಹೇಳಿದರು.

ಕಾರ್ಯಕ್ರಮಕ್ಕೆ ಸ್ವಾಗತ ಭಾಷಣವನ್ನು ಶಾಂತಿವನದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ ಅವರು ನೆರವೇರಿಸಿದರು.
ಶಾಂತಿವನದ ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ. ಬಿಂದು ಧನ್ಯವಾದವಿತ್ತರು

ಈ ಸಂದರ್ಭದಲ್ಲಿ ಶಾಂತಿವನದ ಆಡಳಿತಾಧಿಕಾರಿ ಜಗನ್ನಾಥ್ , ಆಸ್ಪತ್ರೆಯ ವ್ಯವಸ್ಥಾಪಕ ಸ್ವಸ್ತಿಕ್ ಅವರು ಸಿಬ್ಬಂದಿವರ್ಗದವರು, ಸಾಧಕರು, ವೈದ್ಯರು, ವೈದ್ಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮವು ದೇಶಭಕ್ತಿಯ ಹಾಡುಗಳು ಹಾಗೂ ಧ್ವಜಾರೋಹಣ ನೆರವೇರಿತು.

Related posts

ಉಜಿರೆ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಅಂತರ್ ಕಾಲೇಜು ಭಾಷಣ ಮತ್ತು ಚರ್ಚಾ ಸ್ಪರ್ಧೆಯ ಬಹುಮಾನ ವಿತರಣೆ

Suddi Udaya

ಸಮಾಜ ಸೇವಾಟ್ರಸ್ಟ್ ನ ಸಂಸ್ಥಾಪಕ ರವಿ ಕಕ್ಕೆಪದವು ರವರ ಮಾಗದರ್ಶನದಲ್ಲಿ ಕುಮಾರಧಾರದಿಂದ ಕಾಶಿಕಟ್ಟೆಯವರೆಗೆ ಸ್ವಚ್ಛತಾ ಕಾರ್ಯ

Suddi Udaya

ವಿದ್ಯುತ್ ಪೂರೈಕೆಯಲ್ಲಿ ಗ್ರಾಹಕರಿಗೆ ಮೆಸ್ಕಾಂ ಉತ್ತಮ ಸೇವೆ ನೀಡುತ್ತಿದೆ:ಕುತ್ಲೂರು- ಕಕ್ಕಿಂಜೆ,ಇಂದಬೆಟ್ಟು,ನಿನ್ನಿಕಲ್ಲು ಪ್ರದೇಶದಲ್ಲಿ ಹೊಸ ಸಬ್ ಸ್ಟೇಷನ್ ನಿರ್ಮಾಣ:ತಾಲೂಕಿಗೆ ಹೆಚ್ಚುವರಿ 1000 ಟ್ರಾನ್ಸ್ಪಾರ್ಮರ್ ಗಳ ಅಗತ್ಯವಿದೆ:ಪತ್ರಿಕಾಗೋಷ್ಠಿಯಲ್ಲಿ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿಕೆ

Suddi Udaya

ಬೆಳ್ತಂಗಡಿ: ಮಗುವಿನ ನೆರವಿಗಾಗಿ ರಾಜಕೇಸರಿ ಸೇವಾ ಟ್ರಸ್ಟ್ ನಿಂದ ಪೆನ್ನು ಮಾರಾಟ

Suddi Udaya

ಜು.2: ಪೆರಾಡಿ ಪ್ರಾ.ಕೃ.ಪ. ಸ. ಸಂಘ, ಫ್ರೆಂಡ್ಸ್ ಕ್ಲಬ್ ಹೊಸಂಗಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಶಿಬಿರ, ಉಚಿತ ದಂತ ಚಿಕಿತ್ಸಾ ಶಿಬಿರ ಹಾಗೂ ರಕ್ತದಾನ ಶಿಬಿರ

Suddi Udaya
error: Content is protected !!