ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, 79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು..ಸಂಘದ ಹಿರಿಯ ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಪ್ರವೀಣ್ ರೈ ಸ್ವಾಗತಿಸಿ ಧ್ವಜಾರೋಹಣ ನಡೆಸಿ ಭಾರತ ದೇಶದ ಸೈನಿಕರ ಸೇವೆಯಿಂದ ನಾವು ಇಂದು ಊರಿನ ಜನರೆಲ್ಲ ಸೇರಿಕೊಂಡು ನಿರ್ಭಿತಿಯಿಂದ ಸದ್ಭಾವನೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಅತಿಥಿ ಜೆರೋಮ್ ಬ್ರಾಗ್ಸ್ ಮಾತನಾಡಿ ಹಿಂದೆ ನಾವು ಸ್ವತಂತ್ರರಾಗಿ ಇದ್ದ ಸಂಧರ್ಭ ನಮ್ಮೊಳಗಿನ ತಾರತಮ್ಯ ಮೇಲು ಕೀಳು, ಜಾತಿ ಮತ ಬೇರೆ ಬೇರೆ ಭಾಷೆ ಊರು ಎಂಬ ಬೇದ ಭಾವ ಇರುವುದನ್ನು ಅರಿತ ಬ್ರಿಟಿಷರು ನಮ್ಮನ್ನು ಸೋಲಿಸಿ ಸ್ವಾತಂತ್ರ್ಯಕಳೆದುಕೊಳ್ಳ ಬೇಕಾಯಿತು, ಸ್ವಾತಂತ್ರ ಸಿಕ್ಕಿದ ನಂತರ ನಾವು ಅದನ್ನು ಉಳಿಸ ಬೇಕಾದರೆ ಎಲ್ಲರೂ ಜಾತಿ ಮತ ಪಕ್ಷ ಮರೆತು ಒಗ್ಗಟ್ಟಾಗಿ ನಾವೆಲ್ಲರೂ ಓಂದೇ ಭಾರತೀಯರು ಎಂಬ ರಾಷ್ಟ್ರೀಯ ಭಾವನೆಯಿಂದ ಒಟ್ಟಾಗಿ ಜೀವನ ನಡೆಸಬೇಕು ಎಂಬುದಾಗಿ ಹೇಳಿದರು,

ಹಿರಿಯ ಸದಸ್ಯರಾದ ಉಮ್ಮರಬ್ಬ, ಅಣ್ಣಿ ಪೂಜಾರಿ ಚೀಮುಳ್ಳು ಅತಿಥಿಗಳಾಗಿ ಪಾಲ್ಗೊಂಡರು. ಸಂಘದ ಉಪಾಧ್ಯಕ್ಷ ಶಿವರಾಮ ನ್ಯಾಕ್, ನಿರ್ದೇಶಕರಾದ ರಾಜೇಶ್ ರೈ, ಪ್ರಸನ್ನ ಗೌಡ, ಪಾಶ್ವ೯ನಾಥ್ ಜೈನ್, ಶೇಷಪ್ಪ ಸಾಲಿಯಾನ್, ಮೋಹನ್ ಗೌಡ ಅಜಿರ, ಚಂದ್ರಶೇಖರ, ಅರುಣ ಬಂಗೇರ, ಶ್ರೀಮತಿ ಲಿಡಿಯಾ ಜೆರೋಮ್ ಬ್ರಾಗ್ಸ್, ಶ್ರೀಮತಿ ಸವಿತಾ ವೆಂಕಟೇಶ್ ಪೂಜಾರಿ, ತೆಕ್ಕಾರು ಪ್ರಾ.ಕ್ರ.ಪ.ಸ ಸಂಘದ ಮುಖ್ಯ ಕಾರ್ಯನಿರ್ವಹನಾಧಿಕಾರಿ ರಾಘವೇಂದ್ರ ಅಡಪ, ಶಾಖಾ ಮ್ಯಾನೇಜರ್ ಶಶಿಧರ ಅಡಪ, ಪ್ರಶಾಂತ್ ಪೈ, ಮೋನಪ್ಪ ಗೌಡ ಮನಿಲ, ಅಬೂಬಕ್ಕರ್ ಕಳೆಂಜಿ ಬೈಲ್, ಹಾಗೂ ಇತರ ಸದಸ್ಯರು, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಟಿ ವಂದಿಸಿದರು.

Related posts

ಜ.9: ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ: ವಿದ್ವಾಂಸರಿಂದ ವಿಚಾರಗೋಷ್ಠಿ

Suddi Udaya

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಪ್ರಾರಂಭ

Suddi Udaya

ಉಜಿರೆ ಕಾಶಿಬೆಟ್ಟು ಬಳಿ ಬೈಕ್ ಹಾಗೂ ಕಾರು ನಡುವೆ ಅಪಘಾತ: ಬೈಕ್ ಸವಾರರಿಗೆ ಗಂಭೀರ ಗಾಯ

Suddi Udaya

ಬೆಳ್ತಂಗಡಿ: ಅ.7 ರಂದು ವಿದ್ಯುತ್ ನಿಲುಗಡೆ

Suddi Udaya

ಅಳದಂಗಡಿಯಲ್ಲಿ ತೃಷಾ ಮೆಡಿಕಲ್ ಶುಭಾರಂಭ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಧ್ಯಾನ ತರಬೇತಿ

Suddi Udaya
error: Content is protected !!