23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, 79 ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು..ಸಂಘದ ಹಿರಿಯ ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಪ್ರವೀಣ್ ರೈ ಸ್ವಾಗತಿಸಿ ಧ್ವಜಾರೋಹಣ ನಡೆಸಿ ಭಾರತ ದೇಶದ ಸೈನಿಕರ ಸೇವೆಯಿಂದ ನಾವು ಇಂದು ಊರಿನ ಜನರೆಲ್ಲ ಸೇರಿಕೊಂಡು ನಿರ್ಭಿತಿಯಿಂದ ಸದ್ಭಾವನೆಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಅತಿಥಿ ಜೆರೋಮ್ ಬ್ರಾಗ್ಸ್ ಮಾತನಾಡಿ ಹಿಂದೆ ನಾವು ಸ್ವತಂತ್ರರಾಗಿ ಇದ್ದ ಸಂಧರ್ಭ ನಮ್ಮೊಳಗಿನ ತಾರತಮ್ಯ ಮೇಲು ಕೀಳು, ಜಾತಿ ಮತ ಬೇರೆ ಬೇರೆ ಭಾಷೆ ಊರು ಎಂಬ ಬೇದ ಭಾವ ಇರುವುದನ್ನು ಅರಿತ ಬ್ರಿಟಿಷರು ನಮ್ಮನ್ನು ಸೋಲಿಸಿ ಸ್ವಾತಂತ್ರ್ಯಕಳೆದುಕೊಳ್ಳ ಬೇಕಾಯಿತು, ಸ್ವಾತಂತ್ರ ಸಿಕ್ಕಿದ ನಂತರ ನಾವು ಅದನ್ನು ಉಳಿಸ ಬೇಕಾದರೆ ಎಲ್ಲರೂ ಜಾತಿ ಮತ ಪಕ್ಷ ಮರೆತು ಒಗ್ಗಟ್ಟಾಗಿ ನಾವೆಲ್ಲರೂ ಓಂದೇ ಭಾರತೀಯರು ಎಂಬ ರಾಷ್ಟ್ರೀಯ ಭಾವನೆಯಿಂದ ಒಟ್ಟಾಗಿ ಜೀವನ ನಡೆಸಬೇಕು ಎಂಬುದಾಗಿ ಹೇಳಿದರು,

ಹಿರಿಯ ಸದಸ್ಯರಾದ ಉಮ್ಮರಬ್ಬ, ಅಣ್ಣಿ ಪೂಜಾರಿ ಚೀಮುಳ್ಳು ಅತಿಥಿಗಳಾಗಿ ಪಾಲ್ಗೊಂಡರು. ಸಂಘದ ಉಪಾಧ್ಯಕ್ಷ ಶಿವರಾಮ ನ್ಯಾಕ್, ನಿರ್ದೇಶಕರಾದ ರಾಜೇಶ್ ರೈ, ಪ್ರಸನ್ನ ಗೌಡ, ಪಾಶ್ವ೯ನಾಥ್ ಜೈನ್, ಶೇಷಪ್ಪ ಸಾಲಿಯಾನ್, ಮೋಹನ್ ಗೌಡ ಅಜಿರ, ಚಂದ್ರಶೇಖರ, ಅರುಣ ಬಂಗೇರ, ಶ್ರೀಮತಿ ಲಿಡಿಯಾ ಜೆರೋಮ್ ಬ್ರಾಗ್ಸ್, ಶ್ರೀಮತಿ ಸವಿತಾ ವೆಂಕಟೇಶ್ ಪೂಜಾರಿ, ತೆಕ್ಕಾರು ಪ್ರಾ.ಕ್ರ.ಪ.ಸ ಸಂಘದ ಮುಖ್ಯ ಕಾರ್ಯನಿರ್ವಹನಾಧಿಕಾರಿ ರಾಘವೇಂದ್ರ ಅಡಪ, ಶಾಖಾ ಮ್ಯಾನೇಜರ್ ಶಶಿಧರ ಅಡಪ, ಪ್ರಶಾಂತ್ ಪೈ, ಮೋನಪ್ಪ ಗೌಡ ಮನಿಲ, ಅಬೂಬಕ್ಕರ್ ಕಳೆಂಜಿ ಬೈಲ್, ಹಾಗೂ ಇತರ ಸದಸ್ಯರು, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಟಿ ವಂದಿಸಿದರು.

Related posts

ಕೊಯ್ಯೂರು- ಗೇರುಕಟ್ಟೆ ಮೂಲಕ ಬೆಳ್ತಂಗಡಿಗೆ ಬಸ್ಸು ಸೌಕರ್ಯಕ್ಕೆ ಮನವಿ

Suddi Udaya

ಬೆಂಗಳೂರು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪೆನಿ ವತಿಯಿಂದ ನಾಳ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿ ವಿತರಣೆ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುಕ್ಕೇಡಿ ಶಾಲೆಗೆ ಪ್ರಶಸ್ತಿ

Suddi Udaya

ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ ಮತ್ತು ಸೇವಾಭಾರತಿಯಿಂದ 2025 ರ “ಸೇವಾ ಶ್ರೇಷ್ಠ” ಪುರಸ್ಕಾರ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜಾನುವಾರು ಸಾಗಾಟ ನಿಷೇಧದ ಆದೇಶ ವಾಪಸ್

Suddi Udaya
error: Content is protected !!