22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿ

ಕನ್ಯಾಡಿ ಸೇವಾಭಾರತಿಯ ನೂತನ ಕಾರ್ಯಾಲಯದ ವಾಸ್ತುಪೂಜೆ ಹಾಗೂ ಪ್ರವೇಶ:

ಕನ್ಯಾಡಿ: ಸೇವಾಭಾರತಿ ಕಾರ್ಯಾಲಯದ ಸೇವಾನಿಕೇತನ ಹೊಸ ಕಟ್ಟಡದ ವಾಸ್ತುಪೂಜೆಯು ನವೆಂಬರ್ 27 ರಂದು ಭಕ್ತಿಭಾವದಿಂದ ನೆರವೇರಿತು. ಅದರ ಮುಂದುವರೆದ ಕಾರ್ಯಕ್ರಮವಾಗಿ ನವೆಂಬರ್ 28 ರಂದು ನವೀನ ಕಟ್ಟಡದಲ್ಲಿ ಕಾರ್ಯಾಲಯ ಪ್ರವೇಶ ಹಾಗೂ ಆಶ್ಲೇಷ ಬಲಿ ಪ್ರಧಾನವಾಗಿ ನಡೆಯಿತು. ಸಾಯಂಕಾಲ 6.00 ಗಂಟೆಗೆ ದುರ್ಗಾಪೂಜೆ ಜರುಗಿತು

ಈ ವಿಶೇಷ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್, ಅನೇಕ ಗಣ್ಯರು, ಸಮಾಜಸೇವಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಭಜನೆಯ ಮೂಲಕ ದೇವರ ಸ್ತುತಿ ಕಾರ್ಯಕ್ರಮಕ್ಕೆ ಭಕ್ತಿಪರ ವಾತಾವರಣದ ಸೊಬಗು ಹೆಚ್ಚಿಸಿತು.

ಹೊಸ ಕಟ್ಟಡದ ಆರಂಭದೊಂದಿಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಪುನಶ್ಚೇತನವನ್ನು ಪಡೆದುಕೊಂಡು ಸ್ವಾವಲಂಬನೆಯತ್ತ ಸಾಗುವಂತೆ ಹಾಗೂ ಸೇವಾಭಾರತಿಯ ವಿವಿಧ ಸೇವಾಚಟುವಟಿಕೆಗಳು ಈ ಹೊಸ ಕಟ್ಟಡದ ಮೂಲಕ ಮತ್ತಷ್ಟು ಸಕ್ರಿಯವಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

Related posts

ಅಳದಂಗಡಿ: ಆರ್ವಮ್ ಡ್ರೆಸ್ ಹೌಸ್ ನಲ್ಲಿ ದೀಪಾವಳಿ ಧಮಾಕ

Suddi Udaya

ಬೆಳ್ತಂಗಡಿ ತಹಶೀಲ್ದಾರ್ ಆಗಿ ಎಸ್.ಎನ್.ನರಗುಂದ ಅಧಿಕಾರ ಸ್ವೀಕಾರ: ಸುದ್ದಿ ಉದಯ ಪತ್ರಿಕೆ ನೀಡಿ ಸ್ವಾಗತ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಕಲ್ಮಂಜ ಸ. ಪ್ರೌ. ಶಾಲೆಗೆ ಶೌಚಾಲಯ ನಿರ್ಮಿಸಿ ಹಸ್ತಾಂತರ

Suddi Udaya

ಪಟ್ಟೂರಿನಲ್ಲಿ ಪೊಲೀಸರು ಜಪ್ತಿ ಮಾಡಿದ ಮನೆಗೆ ತಾಲೂಕು ಮುಸ್ಲಿಂ ಮುಖಂಡರ ಭೇಟಿ: ಸಂತ್ರಸ್ತೆ ಝೊಹರಾ ಕುಟುಂಬಸ್ಥರ ಜೊತೆ ಮಾತುಕತೆ

Suddi Udaya

‘ಮಕ್ಕಳಿಗೆ ಓದುವುದು ಎಷ್ಟು ಮಹತ್ವ’ ವಿಷಯದ ಕುರಿತು ಪದ್ಮಲತಾ ಮೋಹನ್ ನಿಡ್ಲೆಯವರಿಂದ ಉಪನ್ಯಾಸ

Suddi Udaya

ಉಜಿರೆ: ಶ್ರೀ ಧ.ಮಂ. ಅ. ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ವ್ಯಾಪಾರ ಮೇಳ

Suddi Udaya
error: Content is protected !!