September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕುವೆಟ್ಟು: ಸ.ಉ.ಹಿ.ಪ್ರಾ.ಶಾಲೆ ಕುವೆಟ್ಟು ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಎಸ್‌ ಡಿ ಎಂ ಸಿ ಅಧ್ಯಕ್ಷ ಸಿರಾಜ್ ಚಿಲಿಂಬಿ ಧ್ವಜಾರೋಹಣ ಮಾಡಿದರು.


ನಂತರ ಬ್ಯಾಂಡ್ ಸೆಟ್ ನೊಂದಿಗೆ ಪ್ರಭಾತ್ ಬೇರಿಯನ್ನು ಮಾಡಲಾಯಿತು. ಸಿರಾಜ್ ಎಂ ಚಿಲಿಂಬಿ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಎಸ್ ಶೆಟ್ಟಿ, ಉಪಾಧ್ಯಕ್ಷರಾದ ಗಣೇಶ್, ಸದಸ್ಯರುಗಳಾದ ಶ್ರೀಮತಿ ಶಾಲಿನಿ, ಶ್ರೀಮತಿ ಅಮೀನಾ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ಲಾವಣ್ಯ ಶೆಟ್ಟಿ ಅರ್ಕಜೆ, ದಾನಿಗಳಾದ ಶಂಸುಲ್ ಉಲಾಮಾ ಕ್ರಿಯಾ ಸಮಿತಿ ಮದ್ದಡ್ಕ ಇದರ ಗೌರವಾಧ್ಯಕ್ಷ ಎಂ ಎ ಅಬ್ದುಲ್ ಖಾದರ್, ಉಪಾಧ್ಯಕ್ಷರಾದ ರಿಜ್ವಾನ್, ಕೊಡುಗೆ ದಾನಿಗಳಾದ ಸಾಜಿದ್ ಮದ್ದಡ್ಕ, ಉಪೇಂದ್ರ ಆಚಾರ್ಯ, ಧನಂಜಯ ಕುಮಾರ್ ಆಲಂದಿಲ, ಶಾಲಾ ಮುಖ್ಯ ಶಿಕ್ಷಕ ಭಾಸ್ಕರ್, ಶಾಲಾ ನಾಯಕಿ ರಾಯಿಶ, ಎಸ್ ಡಿ ಎಂ ಸಿ ಸದಸ್ಯರು, ಧ.ಗ್ರಾ.ಯೋ. ಸೇವಾನಿರತೆ ಶ್ರೀಮತಿ ಜಾನಕಿ ಎಸ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಂದ್ರಹಾಸ ಕೇದೆ ಮನೆ ಹಾಗೂ ಮುರಳಿಧರ ಕೇದಳಿಕೆ ಇವರು ನೀಡಿದ ಕಲಿಕೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೂತನ ಶಾಲಾ ವಿದ್ಯಾರ್ಥಿಗಳಿಗೆ ಐ.ಡಿ, ಟೈ, ಬೆಲ್ಟ್ ವಿತರಣೆ ಕಾರ್ಯಕ್ರಮ ಜರುಗಿತು. ಸಹ ಶಿಕ್ಷಕಿ ಶ್ರೀಮತಿ ಧವಲಾ ಎ ಕಾರ್ಯಕ್ರಮ ನಿರೂಪಿಸಿ , ಹಿರಿಯ ಶಿಕ್ಷಕಿ ಫಿಲೋಮಿನ ಲೋಬೋ ವಂದಿಸಿದರು‌. ಅಧ್ಯಾಪಕ ವೃಂದ ಸಹಕರಿಸಿದರು.

Related posts

ಪಾದಾಯಾತ್ರಿಗಳಿಗೆ ಕಲ್ಮಂಜದ ಮದಿಮಾಲಕಟ್ಟೆಯ ಜಾನಕಿ ಮತ್ತು ಮಕ್ಕಳಿಂದ ಅನ್ನದಾನ ಸೇವೆ

Suddi Udaya

ವೇಣೂರು: ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣ ಕಳವು

Suddi Udaya

ಮಚ್ಚಿನ: ಕುಕ್ಕಿಲದಲ್ಲಿ ಗುಡ್ಡ ಕುಸಿದು ಮನೆ ಹಾಗೂ ಹಟ್ಟಿಗೆ ಸಂಪೂರ್ಣ ಹಾನಿ

Suddi Udaya

Carotid body tumor ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಮರೋಡಿಯ ಯುವಕ: ಶಸ್ತ್ರಚಿಕಿತ್ಸೆಗೆ ಬರೋಬ್ಬರಿ ರೂ. 8 ಲಕ್ಷದ ಅವಶ್ಯಕತೆ, ಬಡಕುಟುಂಬ ಸಹೃದಯ ದಾನಿಗಳ ಸಹಕಾರವನ್ನು ಎದುರು ನೋಡುತ್ತಿದೆ

Suddi Udaya

ನಾಲ್ಕೂರು : ಕಾಂಗ್ರೆಸ್ ಕಾರ್ಯಕರ್ತರು ಹಲವು ಮಂದಿ ಬಿಜೆಪಿ ಸೇರ್ಪಡೆ

Suddi Udaya

ಬಳಂಜ: ಸನಾತನ ಸಂಸ್ಥೆಯಿಂದ ವಿಶೇಷ ಪ್ರವಚನ

Suddi Udaya
error: Content is protected !!