July 23, 2026
Uncategorized

ಗುರುವಾಯನಕೆರೆ ಶ್ರೀ ಕೊಡಮಣಿತ್ತಾಯ ದೈವಸ್ಥಾನಅರಮನೆ ಬೆಟ್ಟ:ಸಿಂಹ ಸಂಕ್ರಮಣ ಹಾಗೂ ಶ್ರೀ ಕೊಡಮಣಿತ್ತಾಯ ದೈವದ ಸೋಣದ ಕೋಲ

ಗುರುವಾಯನಕೆರೆ: ಶ್ರೀ ಕೊಡಮಣಿತ್ತಾಯ ದೈವಸ್ಥಾನ
ಅರಮಲೆಬೆಟ್ಟ,ಗುರುವಾಯನಕೆರೆಯಲ್ಲಿ ಸಿಂಹ ಸಂಕ್ರಮಣ ಹಾಗೂ ಶ್ರೀ ಕೊಡಮಣಿತ್ತಾಯ ದೈವದ ಸೋಣದ ಕೋಲ ಆ.16 ಶನಿವಾರ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ 8ಕ್ಕೆ ಶ್ರೀ ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ತರಲಾಯಿತು. ಬಳಿಕ ತೋರಣ ಮುಹೂರ್ತ, ಗಣ ಹೋಮ, ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ನಡೆಯಿತು.

ನಂತರ ಕೊಡಮಣಿತ್ತಾಯ ದೈವದ ಸೋಣ ಕೋಲ ವೈಭವ ಪೂಣ೯ವಾಗಿ ಜರುಗಿತು. ಕಾಯ೯ಕ್ರಮದಲ್ಲಿ ಆನುವಂಶಿಕ ಆಡಳಿತ ಮೊಕೇಸರಾದ ಸುಖೇಶ್ ಕುಮಾ‌ರ್ ಕಡಂಬು, ಶಶಿಧರ ಶೆಟ್ಟಿ ಬರೋಡ, ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಲ| ದೇವದಾಸ್ ಶೆಟ್ಟಿ ಬದ್ಯಾರ್, ಆನಂದ ಶೆಟ್ಟಿ ವಾತ್ಸಲ್ಯ, ಸುನೀಶ್ ಕುಮಾರ್, ಜಯರಾಮ ಶೆಟ್ಟಿ ಪಡಂಗಡಿ, ಪುರಂದರ ಶೆಟ್ಟಿ ಪಾಡ್ಯಾರು, ರಾಜೇಶ್ ಶೆಟ್ಟಿ ನವಶಕ್ತಿ,

ಪ್ರದೀಪ್‌ ಕುಮಾ‌ರ್ ಶೆಟ್ಟಿ. ವಾತ್ಸಲ್ಯ , ಸೀತಾರಾಮ ಶೆಟ್ಟಿ ವೈಭವ, ಶಶಿಕಿರಣ್ ಜೈನ್, ವಸಂತ ಗೌಡ ವರಕಬೆ, ಪ್ರಕಾಶ್ ಜೈನ್ ಡೇವುಣಿ’, ಪ್ರಶಾಂತ್ ಶೆಟ್ಟಿ ಶಕ್ತಿನಗರ, ಪ್ರೇಮ್ ಶೆಟ್ಟಿ ಅನುಗ್ರಹ ಶಕ್ತಿನಗರ, ಪ್ರಸಾದ್ ಶೆಟ್ಟಿ ಬ್ರಾಮರಿ ಪಿಲಿಚಾಮುಂಡಿ ಕಲ್ಲು, ಶ್ರೀಮತಿ ಜಯಂತಿ ಮಲ್ಲಿ ಸುಧೆಕಾರ್, ನಾಗರಾಜ್ ಶೆಟ್ಟಿ ಬಾಬುಗುಡ್ಡೆ ಮಂಗಳೂರು, ಸತ್ಯಶಂಕರ್ ಭಟ್ ಮಂಜುಶ್ರೀ ನಿಲಯ,
ಶ್ರೀಮತಿ ಪ್ರಿಯಾ ಹೆಗ್ಡೆ ಪ್ರಕೃತಿ ಶಕ್ತಿನಗರ,ದಿನೇಶ್ ಶೆಟ್ಟಿ ಪೂನಾ,ಹಾಗೂ
ಅಪಾರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ಕೊಡಮಣಿತ್ತಾಯ ದೈವದ ಗಂಧಪ್ರಸಾದ ಹಾಗೂ ಅನ್ನ ಸಂತರ್ಪಣೆ ಸ್ವೀಕರಿಸಿ ದೈವದ ಅನುಗ್ರಹಕ್ಕೆ ಪಾತ್ರರಾದರು.
ಶ್ರೀಮತಿ ಕಾಶಿ ಶೆಟ್ಟಿ ಮತ್ತು ಮಕ್ಕಳು, ನವಶಕ್ತಿ ಗುರುವಾಯನಕೆರೆ ಇವರಿಂದ ಮಹಾ ಅನ್ನದಾನದ ಸೇವೆ ನಡೆಯಿತು.

Related posts

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಶಿಬಿರ

Suddi Udaya

ಉಜಿರೆ: ಎಸ್.ಡಿ.ಟಿ.ಯು ಚಾಲಕ ಹಾಗೂ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ವೇಣೂರು: ಶ್ರೀ ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ಮಾಜಿ ಕಾರ್ಯದರ್ಶಿ, ಮಾರಗುತ್ತು ಯಂ. ವಿಜಯರಾಜ ಅಧಿಕಾರಿ ನಿಧನ

Suddi Udaya

ಧರ್ಮಸ್ಥಳ: 26ನೇ ವರ್ಷದ ‘ಭಜನಾ ತರಬೇತಿ ಕಮ್ಮಟ’ ಕಾರ್ಯಾಗಾರದ ಉಪನ್ಯಾಸ ಸರಣಿ ಕಾರ್ಯಕ್ರಮ

Suddi Udaya

ಸ್ತುತಿರವರ ಹುಟ್ಟುಹಬ್ಬದ ಪ್ರಯುಕ್ತ ಉರುಂಬಿದೊಟ್ಟು ಅಂಗನವಾಡಿಯ ಸುತ್ತ ಗಿಡಗಂಟಿಗಳ ಸ್ವಚ್ಛತೆ ಹಾಗೂ ತೆಂಗಿನ ಗಿಡ ನೆಡುವ ಮೂಲಕ ಆಚರಣೆ

Suddi Udaya

ಎ.13 ರಿಂದ ಶ್ರೀ ಕ್ಷೇತ್ರ ಎನೋ೯ಡಿ ನೇಮೋತ್ಸವ ಆರಂಭ: ಎ.19 : ಧರ್ಮ ದೈವ ಅಣ್ಣಪ್ಪ ಸ್ವಾಮಿ , ಗಡಿ ಮೊಗೇರ ದೈವ ಗಳಾದ ಶ್ರೀ ಮುದ್ದ ಕಳಲ,, ದೇವಿ ಸ್ವರೂಪಿಣಿ ಶ್ರೀ ತನ್ನಿ ಮಾನಿಗ, ಸ್ವಾಮಿ ಕೊರಗಜ್ಜ ಹಾಗೂ ಎರ್ನೋ ಡಿ ಗುಳಿಗ ದೈವದ ನೇಮೋ ತ್ಸವ

Suddi Udaya
error: Content is protected !!