23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಸದ್ಭಾವನಾ ದಿನ ಆಚರಣೆ

ಉಜಿರೆ: ಭಾರತದ ಅತ್ಯಂತ ಕಿರಿಯ ಪ್ರಧಾನಿ ಎನಿಸಿದ ಹಾಗೂ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ದಿ.ರಾಜೀವ್ ಗಾಂಧಿಯವರ ಜನ್ಮ ಜಯಂತಿಯ ಪ್ರಯುಕ್ತ ನಡೆಸಲ್ಪಡುವ ಸದ್ಭಾವನಾ ದಿನಾಚರಣೆಯನ್ನು ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಸರ್ವ ಧರ್ಮ ಪ್ರಾರ್ಥನೆಯನ್ನು ನೆರವೇರಿಸುವ ಮೂಲಕ ವಿನೂತನವಾಗಿ ಆಚರಿಸಲಾಯಿತು.

ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್. ಬಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾರುವುದೇ ಭಾರತದ ಅಸ್ಮಿತೆ. ಸರ್ವ ಧರ್ಮಗಳಲ್ಲಿಯೂ ಸದ್ಭಾವನೆಯನ್ನು ಮೂಡಿಸುವುದರ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ಸಂಘರ್ಷಗಳನ್ನು ತಡೆಯಬಹುದು. ಶಾಂತಿ ಸೌಹಾರ್ಧತೆಗಳು ಒಂದು ದೇಶದ ಅಭಿವೃದ್ಧಿಗೆ ರಹದಾರಿಯಾಗುತ್ತದೆಯೇ ಹೊರತು ದ್ವೇಷ ಸಂಘರ್ಷಗಳಿಂದ ಸಾಧ್ಯವಿಲ್ಲ ಎಂದರು.

ವಿದ್ಯಾರ್ಥಿಗಳಾದ ಧರೇಶ್ ಹಿಂದೂ ಧರ್ಮದ ,ಅಫೀಫಾ ಇಸ್ಲಾಂ ಧರ್ಮದ,ನಿಜಾ ಕ್ರೈಸ್ತ ಧರ್ಮದ, ಪವಿತ್ರಾ ಜೈನ್, ಜೈನ ಧರ್ಮದ ಮತ್ತು ಲಿಖಿತಾ ಬೌದ್ಧ ಧರ್ಮದ ಪ್ರಾರ್ಥನೆ ಹಾಗೂ ಸಂದೇಶವನ್ನು ಸಾರಿದರು. ಮಹಾತ್ಮಾ ಗಾಂಧಿಯವರ ಪ್ರಿಯ ಭಜನೆ ರಘುಪತಿ ರಾಘವ ರಾಜಾರಾಮ್ ಅನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿ ಹಾಡಿದರು.

ವಿದ್ಯಾರ್ಥಿ ಪ್ರಣವ್ ಕೃಷ್ಣ ಭಟ್ ಸ್ವಾಗತಿಸಿ, ನಿರ್ವಹಿಸಿದರು ಶ್ರೀಲಕ್ಷ್ಮಿ ವಂದಿಸಿದರು. ಕಾಲೇಜಿನ ಕಲಾ ವಿಭಾಗದ ಸಂಘ ವ್ಯುತ್ಪತ್ತಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ದಿವ್ಯಾ ಕುಮಾರಿ, ಶ್ಯಾಮಿಲ ಹಾಗೂ ಡಾ. ಸಾಜಿದ ಉಪಸ್ಥಿತರಿದ್ದು ಸಹಕರಿಸಿದರು.

Related posts

ತಾಳೆ ಬೆಳೆ ಪ್ರದೇಶ ವಿಸ್ತರಣೆ: ಅರ್ಜಿ ಆಹ್ವಾನ

Suddi Udaya

ಕಜಕೆ, ಎಳನೀರು , ಕಕ್ಕಿಂಜೆ ಶಾಲಾ ಮತಗಟ್ಟೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಭೇಟಿ

Suddi Udaya

ಬೆಳ್ತಂಗಡಿ ಆದಿನಾಥ್ ಬಜಾಜ್‌ನಲ್ಲಿ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ

Suddi Udaya

ಬೆಳಾಲು: ನೋಣಯ್ಯ ಗೌಡ ನಿಧನ

Suddi Udaya

ಉಜಿರೆ ಅನುಗ್ರಹ ಆಂ.ಮಾ. ಶಾಲೆಯಲ್ಲಿ ಕಬ್ಸ್, ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಚಿಂತನಾ ದಿನಾಚರಣೆ

Suddi Udaya

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವ; ಮೇ 30: ಕುತ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ

Suddi Udaya
error: Content is protected !!