September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಮ್ಮ ಮನೆ ಶಾಖೆಯ ವಾರ್ಷಿಕೋತ್ಸವ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಳ್ತಂಗಡಿ ತಾಲೂಕಿನ ಮೊದಲ ಯೋಗ ತರಗತಿ; ‘ನಮ್ಮ ಮನೆ’ ಶಾಖೆ ಗುರುವಾಯನಕೆರೆ ಇದರ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಮ್ಮ ಮನೆ ಹವ್ಯಕ ಭವನ ಗುರುವಾಯನಕೆರೆ ಇಲ್ಲಿ, ಆ.೨೪ ರಂದು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಸಂಚಾಲಕಿ ಸುಮಲತಾರವರು ವಹಿಸಿದರು.
ಮುಖ್ಯ ಅತಿಥಿಗಳಾಗಿ ನಮ್ಮ ಮನೆ, ಹವ್ಯಕ ಭವನ ಅಧ್ಯಕ್ಷ ಪರಮೇಶ್ವರ ಭಟ್ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಕೃಷ್ಣ ಭಟ್ ಕಾಂತಜೆ, ಅವರು ಶಾಖೆಯಲ್ಲಿ ನಿರಂತರ ಯೋಗ ನಡೆಸುತ್ತಾ ಇರುವ ಕಾರ್ಯವನ್ನು ಶ್ಲಾಘಿಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ಮಹಾನಗರ ಪ್ರಮುಖರು ಗೀತಾ ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಶಾಖೆಯ ಯೋಗಬಂಧುವಾದ ಶ್ರೀಮತಿ ಜಯಂತಿ ಮಾತನಾಡುತ್ತ ನಿರಂತರವಾಗಿ ಶಿಕ್ಷಕರಾಗಿ ಯೋಗ ಶಿಕ್ಷಣ ನೀಡುತ್ತಿರುವ ಶಿಕ್ಷಕರ ನಿಸ್ವಾರ್ಥ ಮನೋಭಾವವನ್ನು ಸ್ಮರಿಸುತ್ತಾ ಸದ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಗುರು-ಶಿಷ್ಯ ಸಂಬAಧದ ಬಗ್ಗೆ ಮಾತನಾಡಿದರು. ಸಂತೋಷ್ ಕುಮಾರ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಇದರ ಉಪ್ಪಿನಂಗಡಿ ನಗರ ಸಂಚಾಲಕರು ಇವರು ಮಾರ್ಗದರ್ಶನ ನೀಡುತ್ತಾ ಸಮಿತಿಯಿಂದ ಪಡೆದ ಸಂಸ್ಕಾರ ಮರೆಯದೆ ಹೇಗೆ ನಾವು ವಿನಯವಂತರಾಗಿ ನಡೆದುಕೊಳ್ಳಬೇಕೆಂಬ ಸೂಚನೆ ನೀಡಿದರು.
ಯೋಗಬಂಧುಗಳು ಹಾಗೂ ಯೋಗೇತರ ಬಂಧುಗಳಿಗಾಗಿ ಚಟುವಟಿಕೆಯುಕ್ತ ಆಟಗಳನ್ನು ಶಾಖೆಯ ಯೋಗ ಬಂಧುಗಳಾದ ಪ್ರೀತೇಶ್ ಹಾಗೂ ನಿತೇಶ್ ನಡೆಸಿಕೊಟ್ಟರು.


ಶಾಖೆಯ ಯೋಗ ಬಂಧುವಾದ ಶ್ರೀಮತಿ ಜಯಮಣಿ ಸ್ವಾಗತಿಸಿ, ಶಾಖಾ ಯೋಗ ಬಂಧುವಾದ ಗಿರೀಶ್ ವಾರ್ಷಿಕ ವರದಿಯನ್ನು ಮಂಡಿಸಿದರು, ಯೋಗ ಬಂಧುಗಳಾದ ವಿಜಯ್, ಸುಚಿತ್ರ, ವಿನಯ್, ಜಯಂತಿ ಹಾಗೂ ಪುರಂದರ ಇವರು ಅನಿಸಿಕೆಯನ್ನು ಹಂಚಿಕೊಂಡರು. ಶಾಖಾ ಶಿಕ್ಷಕರಾದ ದಯಾನಂದ ಪ್ರಾರ್ಥಿಸಿ, ಯೋಗಬಂಧು ಪ್ರಿಯ ವಂದಿಸಿದರು. ಶಿವಕುಮಾರ್ ಹಾಗೂ ಭಾರತಿ ನಿರೂಪಿಸಿದರು.
ಶಾಖೆಯ ಹಾಗೂ ನಗರದ ಇತರ ಶಾಖೆಗಳ ಯೋಗಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಶಾಖಾ ಯೋಗ ಬಂಧುಗಳಾದ ಗಿರೀಶ್ ಹಾಗೂ ದಮಯಂತಿಯವರ ನಿರೂಪಣೆಯಲ್ಲಿ ನೃತ್ಯ, ನಾಟಕ ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳು ಮೂಡಿ ಬಂತು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಹಾಗೂ ಮಂಗಳೂರು ಭಾಗದ ೮೮ ಯೋಗ ಬಂಧುಗಳು ಹಾಗೂ ೪೫ ಯೋಗೇತರ ಬಂಧುಗಳು ಸೇರಿ 133 ಮಂದಿ ಭಾಗವಹಿಸಿದ್ದರು.

Related posts

ಚಿಬಿದ್ರೆ – ಧರ್ಮಸ್ಥಳ ರಸ್ತೆಯಲ್ಲಿ ಬಿದ್ದ ಮರ : ಶೌರ್ಯ ವಿಪತ್ತು ಘಟಕದಿಂದ ತೆರವು

Suddi Udaya

ಅಕ್ಷರ ಕಲಿಸುವ ವಿದ್ಯಾ ದೇಗುಲಕ್ಕೆ ಖದೀಮರ ಕನ್ನ, ಕಣಿಯೂರಿನ ಪಿಲಿಗೂಡು ಶಾಲೆ ಬೀಗ ಒಡೆದು‌ ಕಳ್ಳತನ:

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಹಿಂದಿ ದಿವಸ್ ಆಚರಣೆ

Suddi Udaya

ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಸಿನ ಮನೆ ಶಿಶುಪಾಲನಾ ಕೇಂದ್ರ ಉದ್ಘಾಟನೆ

Suddi Udaya

ಉಜಿರೆ: ಅನುಗ್ರಹ ಶಾಲೆಯಲ್ಲಿ ರಸ್ತೆ ಸಂಚಾರ ಮತ್ತು ಸುರಕ್ಷಾ ಕ್ರಮದ ಬಗ್ಗೆ ಮಾಹಿತಿ ಕಾರ್‍ಯಗಾರ

Suddi Udaya

ವೇಣೂರು ಶ್ರೀ ಬಾಹುಬಲಿ ಬೆಟ್ಟದ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya
error: Content is protected !!