25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಮ್ಮ ಮನೆ ಶಾಖೆಯ ವಾರ್ಷಿಕೋತ್ಸವ

ಗುರುವಾಯನಕೆರೆ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಳ್ತಂಗಡಿ ತಾಲೂಕಿನ ಮೊದಲ ಯೋಗ ತರಗತಿ; ‘ನಮ್ಮ ಮನೆ’ ಶಾಖೆ ಗುರುವಾಯನಕೆರೆ ಇದರ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಮ್ಮ ಮನೆ ಹವ್ಯಕ ಭವನ ಗುರುವಾಯನಕೆರೆ ಇಲ್ಲಿ, ಆ.೨೪ ರಂದು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಸಂಚಾಲಕಿ ಸುಮಲತಾರವರು ವಹಿಸಿದರು.
ಮುಖ್ಯ ಅತಿಥಿಗಳಾಗಿ ನಮ್ಮ ಮನೆ, ಹವ್ಯಕ ಭವನ ಅಧ್ಯಕ್ಷ ಪರಮೇಶ್ವರ ಭಟ್ ಶುಭ ಹಾರೈಸಿದರು. ನಿಕಟಪೂರ್ವ ಅಧ್ಯಕ್ಷ ಕೃಷ್ಣ ಭಟ್ ಕಾಂತಜೆ, ಅವರು ಶಾಖೆಯಲ್ಲಿ ನಿರಂತರ ಯೋಗ ನಡೆಸುತ್ತಾ ಇರುವ ಕಾರ್ಯವನ್ನು ಶ್ಲಾಘಿಸಿದರು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮಂಗಳೂರು ಮಹಾನಗರ ಪ್ರಮುಖರು ಗೀತಾ ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಶಾಖೆಯ ಯೋಗಬಂಧುವಾದ ಶ್ರೀಮತಿ ಜಯಂತಿ ಮಾತನಾಡುತ್ತ ನಿರಂತರವಾಗಿ ಶಿಕ್ಷಕರಾಗಿ ಯೋಗ ಶಿಕ್ಷಣ ನೀಡುತ್ತಿರುವ ಶಿಕ್ಷಕರ ನಿಸ್ವಾರ್ಥ ಮನೋಭಾವವನ್ನು ಸ್ಮರಿಸುತ್ತಾ ಸದ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಗುರು-ಶಿಷ್ಯ ಸಂಬAಧದ ಬಗ್ಗೆ ಮಾತನಾಡಿದರು. ಸಂತೋಷ್ ಕುಮಾರ್, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಇದರ ಉಪ್ಪಿನಂಗಡಿ ನಗರ ಸಂಚಾಲಕರು ಇವರು ಮಾರ್ಗದರ್ಶನ ನೀಡುತ್ತಾ ಸಮಿತಿಯಿಂದ ಪಡೆದ ಸಂಸ್ಕಾರ ಮರೆಯದೆ ಹೇಗೆ ನಾವು ವಿನಯವಂತರಾಗಿ ನಡೆದುಕೊಳ್ಳಬೇಕೆಂಬ ಸೂಚನೆ ನೀಡಿದರು.
ಯೋಗಬಂಧುಗಳು ಹಾಗೂ ಯೋಗೇತರ ಬಂಧುಗಳಿಗಾಗಿ ಚಟುವಟಿಕೆಯುಕ್ತ ಆಟಗಳನ್ನು ಶಾಖೆಯ ಯೋಗ ಬಂಧುಗಳಾದ ಪ್ರೀತೇಶ್ ಹಾಗೂ ನಿತೇಶ್ ನಡೆಸಿಕೊಟ್ಟರು.


ಶಾಖೆಯ ಯೋಗ ಬಂಧುವಾದ ಶ್ರೀಮತಿ ಜಯಮಣಿ ಸ್ವಾಗತಿಸಿ, ಶಾಖಾ ಯೋಗ ಬಂಧುವಾದ ಗಿರೀಶ್ ವಾರ್ಷಿಕ ವರದಿಯನ್ನು ಮಂಡಿಸಿದರು, ಯೋಗ ಬಂಧುಗಳಾದ ವಿಜಯ್, ಸುಚಿತ್ರ, ವಿನಯ್, ಜಯಂತಿ ಹಾಗೂ ಪುರಂದರ ಇವರು ಅನಿಸಿಕೆಯನ್ನು ಹಂಚಿಕೊಂಡರು. ಶಾಖಾ ಶಿಕ್ಷಕರಾದ ದಯಾನಂದ ಪ್ರಾರ್ಥಿಸಿ, ಯೋಗಬಂಧು ಪ್ರಿಯ ವಂದಿಸಿದರು. ಶಿವಕುಮಾರ್ ಹಾಗೂ ಭಾರತಿ ನಿರೂಪಿಸಿದರು.
ಶಾಖೆಯ ಹಾಗೂ ನಗರದ ಇತರ ಶಾಖೆಗಳ ಯೋಗಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಶಾಖಾ ಯೋಗ ಬಂಧುಗಳಾದ ಗಿರೀಶ್ ಹಾಗೂ ದಮಯಂತಿಯವರ ನಿರೂಪಣೆಯಲ್ಲಿ ನೃತ್ಯ, ನಾಟಕ ಹಾಗೂ ಇತರ ಮನರಂಜನಾ ಕಾರ್ಯಕ್ರಮಗಳು ಮೂಡಿ ಬಂತು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಹಾಗೂ ಮಂಗಳೂರು ಭಾಗದ ೮೮ ಯೋಗ ಬಂಧುಗಳು ಹಾಗೂ ೪೫ ಯೋಗೇತರ ಬಂಧುಗಳು ಸೇರಿ 133 ಮಂದಿ ಭಾಗವಹಿಸಿದ್ದರು.

Related posts

ಓಡೀಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಎ.19-26: ಪಾರಸ್‌ ಪೃಥ್ವಿ ಜುವೆಲ್ಸ್‌ನಲ್ಲಿ ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣಗಳ ಮೇಲೆ ವಿಶೇಷ ಕೊಡುಗೆ

Suddi Udaya

ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣವನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಯಲ್ಲಿ ಎಸ್.ಡಿ.ಪಿ.ಐ ಆಗ್ರಹ

Suddi Udaya

ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನದ ಸ್ವಾಗತ ಗೋಪುರ ಉದ್ಘಾಟನೆ

Suddi Udaya

ಬೆಳ್ತಂಗಡಿ ಮಾತೃಶ್ರೀ ಟೆಕ್ಸ್ ಟೈಲ್ಸ್ ನಲ್ಲಿ ಆಷಾಢ ಆಟಿ ಸೇಲ್, ಗ್ರಾಹಕರಿಂದ ಉತ್ತಮ‌ ಪ್ರತಿಕ್ರಿಯೆ

Suddi Udaya

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಂದ ಡಾ.ಹೆಗ್ಗಡೆ ಹಾಗೂ ಕನ್ಯಾಡಿ ಶ್ರೀ ಭೇಟಿ

Suddi Udaya
error: Content is protected !!