July 23, 2026
ರಾಜಕೀಯ

ಕೊಯ್ಯೂರು ಬಿಜೆಪಿಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮ

ಕೊಯ್ಯೂರು :ಭಾರತೀಯ ಜನತಾ ಪಾರ್ಟಿ ಕೊಯ್ಯೂರು ಶಕ್ತಿ ಮಂಡಲ ಇದರ ಅಭ್ಯಾಸ ವರ್ಗ ಕಾರ್ಯಕ್ರಮ ಸೆ 08 ರಂದು ಕೊಯ್ಯೂರಿನ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾ ಭವನದಲ್ಲಿ ನಡೆಯಿತು.ದಾಮೋದರ ಗೌಡ ಬೆರ್ಕೆ ಇವರು ಸ್ವಾಗತಿಸಿ,ಪಕ್ಷದ ಹಿರಿಯ ಕಾರ್ಯಕರ್ತರಾದ ಪ್ರಚಂಢಭಾನು ಭಟ್ ಪಾಂಬೇಲು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.. ಈ ವೇಳೆ ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯವರಾದ ಉಮೇಶ್ ಕುಲಾಲ್, ಕುವೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ ಹಾಗೂ ಶಕ್ತಿ ಕೇಂದ್ರ ಪ್ರಮುಖರಾದ ತಾರಾನಾಥ ಗೌಡ ಮೇಗಿನಬಜಿಲ ಇವರುಗಳು ಉಪಸ್ಥಿತರಿದ್ದರು.. ಮೂರು ಅವಧಿಗಳಲ್ಲಿ ನಡೆದ ಈ ಅಭ್ಯಾಸ ವರ್ಗವನ್ನ ಕ್ರಮವಾಗಿ ಯತೀಶ್ ಪಣೆಕ್ಕರ, ಮಹಾಬಲ ಗೌಡ ಬಂದಾರು ಹಾಗು ಸುಧಾಕರ್ ಲಾಯಿಲ ಇವರುಗಳು ನಡೆಸಿಕೊಟ್ಟರು..

ಅಭ್ಯಾಸ ವರ್ಗದ ಸಮಾರೂಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರು ಪಕ್ಷ ಬೆಳೆದು ಬಂದ ಹಾದಿಯ ಬಗ್ಗೆ ಸ್ಪೂರ್ತಿದಾಯಕ ಮಾತುಗಳೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ ವಸಂತಿ ಮಚ್ಚಿನ, ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾದ ಗೀತಾ ರಾಮಣ್ಣ ಗೌಡ, ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ದಯಾಮಣಿ ಮಲೆಬೆಟ್ಟು, ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿಯವರಾದ ಪ್ರಶಾಂತ್ ಪಾರೆಂಕಿ ಇವರುಗಳು ಉಪಸ್ಥಿತರಿದ್ದರು..

ಅಭ್ಯಾಸ ವರ್ಗದಲ್ಲಿ ಗ್ರಾ.ಪಂಚಾಯತ್ ಸದಸ್ಯರುಗಳು, ಕೊಯ್ಯೂರು ಸಹಕಾರಿ ಸಂಘದ ಬ್ಯಾಂಕ್ ನ ನಿರ್ದೇಶಕರುಗಳು, ಕೊಯ್ಯೂರು ಹಾಲು ಉತ್ಪಾದಕರ ಸಂಘದ ನಿರ್ದೇಶಕರುಗಳು, ಹಾಗೂ ನೂರಾರು ಕಾರ್ಯಕರ್ತರುಗಳು ಭಾಗಿಯಾಗಿದ್ದರು.. ಕಾರ್ಯಕ್ರಮವನ್ನು ಭರತ್ ಡೆಂಬುಗ ನಿರೂಪಿಸಿದರು..

Related posts

ಸುಹಾಸ್ ಶೆಟ್ಟಿ ಪ್ರಕರಣದೊಂದಿಗೆ ಉಳಿದ ಮೂರು ಕೊಲೆ ಪ್ರಕರಣಗಳನ್ನು ಎನ್.ಐ.ಎ (NIA) ಗೆ ಯಾಕೆ ನೀಡಿಲ್ಲ?: ಹರೀಶ್ ಕುಮಾರ್ ಪ್ರಶ್ನೆ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ನಡೆದ ಮಾಲಾಡಿ ಮತ್ತು ಸೋಣಂದೂರು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಅಭ್ಯಾಸ ವರ್ಗ

Suddi Udaya

ಅಸಂಘಟಿತ ಕಾರ್ಮಿಕ ನಗರ ಸಮಿತಿ & ಗ್ರಾಮೀಣ ಸಮಿತಿಯ ವತಿಯಿಂದ ಪದಾಧಿಕಾರಿಗಳ & ಕಾರ್ಯಕರ್ತರ ಸಮಲೋಚನೆ ಸಭೆ

Suddi Udaya

ಧರ್ಮಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ

Suddi Udaya

ಬೆಳ್ತಂಗಡಿ ನಗರ ಮಹಾಶಕ್ತಿ ಕೇಂದ್ರದಸಂಚಾಲಕರಾಗಿ ಸುನೀಲ್ ಬೆಳ್ತಂಗಡಿ, ಸಹಸಂಚಾಲಕರಾಗಿ ನಿತಿನ್

Suddi Udaya

ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಸತೀಶ್ ಕುಂಪಲ ಆಯ್ಕೆ

Suddi Udaya
error: Content is protected !!