ಧರ್ಮಸ್ಥಳ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ವತಿಯಿಂದ ಸೆ. 7 ರಂದು ಸಚಿನ್ ಇಂಚರ ಇವರ ಅಧ್ಯಕ್ಷತೆಯಲ್ಲಿ 171ನೇ ವರ್ಷದ ಗುರು ಜಯಂತಿಯನ್ನು ಆಚರಣೆ ಮಾಡಲಾಯಿತು.
ಬೆಳಗ್ಗೆ ಗುರುಪೂಜೆಯ ಬಳಿಕ ಭಜನಾ ಕಾರ್ಯ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್. ಎನ್. ಡಿ. ಪಿ. ಉಪಾಧ್ಯಕ್ಷ ಸಚಿನ್ ಇಂಚರ, ಸ್ಥಾಪಕ ಅಧ್ಯಕ್ಷ ರಾಜನ್ ಪೋಸೊಳಿಕೆ, ಕಾರ್ಯದರ್ಶಿ ಸ್ಮಿತೇಶ್ ಎನ್, ಮಾಜಿ ಅಧ್ಯಕ್ಷರು ಬಾಲಕೃಷ್ಣ, ಹಿರಿಯ ಸದಸ್ಯರಾದ ಸೋಮನಾಥ್ , ಶಶಿಧರ್ , ಸತೀಶ್, ಅರುಣ್, ಮೋಹನ್, ರಾಜೀವ್, ಮಹಿಳಾ ಸದಸ್ಯರಾದ ಶ್ರೀಮತಿ ಉಷ, ಶ್ರೀಮತಿ ಪುಷ್ಪ, ಹಾಗೂ ಸಂಘದ ಇನ್ನಿತರ ಮಹನೀಯರು ಸದಸ್ಯರು, ಮಕ್ಕಳು, ಇನ್ನಿತರರು ಉಪಸ್ಥಿತರಿದ್ದರು.













