22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಡ್ಡಂದಡ್ಕ ನೂರುಲ್ ಹುಧಾ ಜುಮ್ಮಾ ಮಸೀದಿಯಲ್ಲಿ ಮೂಲಭೂತ ಸೌಕರ್ಯಗಳ ಲೋಕಾರ್ಪಣೆ

ವೇಣೂರು: ಪಡ್ಡoದಡ್ಕದ ಕೇಂದ್ರ ಮಸೀದಿಯಲ್ಲಿ ವಿವಿಧ ಮೂಲಭೂತ ಸೌವಲತ್ತುಗಳನ್ನು ಸೆ.12 ರಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ ಯವರ ಅಧ್ಯಕ್ಷತೆಯಲ್ಲಿ ಲೋಕಾರ್ಪಣೆ ಮಾಡಲಾಯಿತು.

ಸುಸಜ್ಜಿತವಾದ ನವೀಕೃತ ಹೌಲ್ (ವಝು ಖಾನ)ನ್ನು ತ್ವಯಿಬಾ ಎಜುಕೇಷನಲ್ ಸೆಂಟರ್ ( ಪಟ್ಟಾಡಿ ) ಮೂಡಬಿದ್ರಿ ಚೇರ್ಮೆನ್ ಸಯ್ಯದ್ ಅಬ್ದುಲ್ ರಹಿಮಾನ್ ಸಾದಾತ್ ತಂಗಳ್ ಬಾಲರವಿ ನೆರವೇರಿಸಿದರು .ನವೀಕೃತ ಮದರಸವನ್ನು ಪ್ರಿನ್ಸಿಪಾಲ್ ದಾರುಸ್ಸಲಾಮ್ ದಾವ ಕಾಲೇಜು ಬೆಳ್ತಂಗಡಿಯ ತ್ವಾಹ ತಂಗಳ್ ನೆರವೇರಿಸಿದರು. ಮಸೀದಿ ಕಚೇರಿಯನ್ನು ಮುಂಬೈನ( ಎಂಪೈರ್ ವಿಸ್ತ ಇನ್ಫ್ರಾ )ಉದ್ಯಮಿ ಮೊಹಮ್ಮದ್ ಮುಸ್ತಫಾ ನೆರವೇರಿಸಿದರು. ಮಸೀದಿ ಖತೀಬ್ ಕಲಂದರ್ ಶಾಫಿ ಬಾಖವಿ ಖಾಮಿಲ್ ಅಲ್ ಮನ್ನಾನಿ ಕರಾಯ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅಥಿತಿಗಳಾಗಿ ಉದ್ಯಮಿ ಹಾಗೂ ಡಿಡಿ ಸಮೂಹ ಸಂಸ್ಥೆಗಳ ಚೇರ್ಮನ್ ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಮಸೀದಿ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಯು.ಕೆ ಮೊಹಮ್ಮದ್ ಹಾಜಿ ,ಮೂಡಬಿದ್ರಿ ಅಲ್ ಮಫಾಝ ಕಾಲೇಜಿನ ಪ್ರಿನ್ಸಿಪಾಲ್ ಪಿಪಿ ಅಹ್ಮದ್ ಸಖಾಫಿ ,ಬೆಳ್ತಂಗಡಿ ಕೇಂದ್ರ ಲ್ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ,ಪತ್ರಕರ್ತ ಜನಾಬ್ ಎಚ್ ಮಹಮ್ಮದ್ ವೇಣೂರು ಶುಭ ಹಾರೈಸಿದರು. ಪ್ರಮುಖರಾದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ,ಕೋಶಾಧಿಕಾರಿ ಪಿಜೆ ಮಹಮೂದ್ ಲೆಕ್ಕ ಪರಿಶೋಧಕ ಇದ್ರೀಸ್ ಪುಲಾಬೆ, ಜೊತೆ ಕಾರ್ಯದರ್ಶಿ ಅಬ್ದು ಸಲಾಂ ಕೇಶವ ನಗರ, ಸದಸ್ಯರಾದ ಅಶ್ರಫ್ ಗಾಂಧಿ ನಗರ ,ಅಶ್ರಫ್ ಕಿರೋಡಿ ,ಯುಕೆ ಇರ್ಫಾನ್ ಪೆರಿಂಜೆ & ಶಾಂತಿ ನಗರ ಮದರಸ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.


ಪ್ರಮುಖ ದಾನಿಗಳಾದ ಸಾರ ಇಬ್ರಾಹಿಂ ಟ್ರಸ್ಟ್ ನ ಪರವಾಗಿ ಅಕ್ಬರ್ ಪೆರಿಂಜೆ ,ಯುಕೆ ಮೊಹಮ್ಮದ್ ಹಾಜಿ ಹಾಗು ಮೊಹಮ್ಮದ್ ಮುಸ್ತಫಾ ರವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಮೊಹಮ್ಮದ್ ಶಾಫಿ ಸ್ವಾಗತಿಸಿದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ ವಂದಿಸಿದರು.

Related posts

ಫೆ.2-7: ಬೆಳ್ತಂಗಡಿಯಲ್ಲಿ ಮಹಾ ಸೀರೆ ಮೇಳ ವಿಶೇಷ ರಿಯಾಯಿತಿಯೊಂದಿಗೆ ವಿವಿಧ ವಿನ್ಯಾಸವುಳ್ಳ ಸೀರೆಗಳು ಲಭ್ಯ

Suddi Udaya

ಯುವ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ನ ಉಪಾಧ್ಯಕ್ಷರಾಗಿ ಯತೀಶ್ ಯಕ್ಷ ಧರ್ಮಸ್ಥಳ ನೇಮಕ

Suddi Udaya

ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಎಸ್‌ಡಿಪಿಐ ಮುಖಂಡರ ನಿಯೋಗ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರಿಗೆ ಬಳಂಜ ಬಿಲ್ಲವ ಸಂಘದಿಂದ ಗೌರವಾರ್ಪಣೆ

Suddi Udaya

ಅಳದಂಗಡಿ ಗ್ರಾಮ ಸಭೆ: ಅಂಗಡಿ ಬಾಡಿಗೆ ಬಾಕಿದಾರರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಮುಂಡಾಜೆ: ಸೈಂಟ್ ಮೇರಿಸ್ ಚರ್ಚ್ ನಲ್ಲಿ ಗುಡ್ ಫ್ರೈಡೆ ಆಚರಣೆ

Suddi Udaya
error: Content is protected !!