30.7 C
ಪುತ್ತೂರು, ಬೆಳ್ತಂಗಡಿ
April 24, 2026
ಸಂಘ-ಸಂಸ್ಥೆಗಳು

ಬೆಳ್ತಂಗಡಿ ರೋಟರಿ ಸಮುದಾಯ ದಳದ ಪದಗ್ರಹಣ

ಬೆಳ್ತಂಗಡಿ ಬೆಳ್ತಂಗಡಿ ರೋಟರಿ ಸಂಸ್ಥೆಯಡಿಯಲ್ಲಿ ಆರ್.ಸಿ.ಸಿ. ಮುಂಡಾಜೆ, ಆರ್.ಸಿ.ಸಿ. ಕಕ್ಕಿಂಜೆಯ ಆರ್.ಸಿ.ಸಿ ಕಲ್ಮಂಜ ಮತ್ತು ಆರ್.ಸಿ.ಸಿ. ನೆರಿಯ ಹೀಗೆ ನಾಲ್ಕು ಆರ್.ಸಿ.ಸಿ ಸಮುದಾಯ ದಳಗಳ ಪದಗ್ರಹಣ ಕಾರ್ಯಕ್ರಮವು ಸೆ.೨೦ ರಂದು ನಡೆಯಲಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಪ್ರಭು ತಿಳಿಸಿದ್ದಾರೆ.


ಅವರು ಕಾಶಿಬೆಟ್ಟು ಅರಳಿ ರೋಟರಿ ಭವನದಲ್ಲಿ ಸೆ. ೧೭ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸಮುದಾಯ ದಳಗಳ ಪದಗ್ರಹಣ ಕಾರ್ಯಕ್ರಮವನ್ನು ಸೆ.೨೦ ರಂದು ಸಂಜೆ ೪ ಗಂಟೆಗೆ ಮುಂಡಾಜೆಯ ಪರಶುರಾಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದು, ಪದಗ್ರಹಣ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್‌ನ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಎ.ಜೆ. ಶೆಟ್ಟಿ ಯವರು ನೆರವೇರಿಸುತ್ತಾರೆ ಎಂದು ಹೇಳಿದರು.
ಮುಂಡಾಜೆ ಆರ್.ಸಿ.ಸಿ. ತಂಡದ ಅಧ್ಯಕ್ಷರಾಗಿ ಪಿ.ಸಿ ಸೆಬೆಸ್ಟಿಯನ್, ಕಾರ್ಯದರ್ಶಿಯಾಗಿ ರಾಕೇಶ್ ಮತ್ತು ಕೋಶಾಧಿಕಾರಿಯಾಗಿ ರಂಗನಾಥ ಹೆಬ್ಬಾರ್ ರವರು ಅಧಿಕಾರ ಸ್ವೀಕರಿಸಲಿದ್ದಾರೆ. ಅದೇ ರೀತಿ ಆರ್.ಸಿ.ಸಿ. ಕಕ್ಕಿಂಜೆ ಇದರ ಅಧ್ಯಕ್ಷರಾಗಿ ಶ್ರೀಮತಿ ಶಾರದ ಎ, ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಗೌಡ, ಕೋಶಾಧಿಕಾರಿಯಾಗಿ ಪ್ರಾನ್ಸಿಸ್ ವಿ.ಪಿ, ಆರ್.ಸಿ.ಸಿ ಕಲ್ಮಂಜ ಇದರ ಅಧ್ಯಕ್ಷರಾಗಿ ನಾಗೇಶ್ ಕಲ್ಮಂಜ, ಕಾರ್ಯದರ್ಶಿಯಾಗಿ ದಿನೇಶ್ ಗೌಡ ಬನದ ಬೈಲು, ಕೋಶಾಧಿಕಾರಿಯಾಗಿ ಡಿ. ಜಯಂತ್ ರಾವ್ ಕಲ್ಮಂಜ, ಆರ್.ಸಿ.ಸಿ ನೆರಿಯ ಇದರ ಅಧ್ಯಕ್ಷರಾಗಿ ಪಿ.ಕೆ. ರಾಜನ್, ಕಾರ್ಯದರ್ಶಿಯಾಗಿ ಬಿ.ಎಮ್. ಶರೀಫ್ ಹಾಗೂ ಕೋಶಾಧಿಕಾರಿಯಾಗಿ ಎಮ್. ಬಾಲಕೃಷ್ಣ ಗೌಡ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ನಾರಾಯಣ ಭಿಡೆ, ಆರ್.ಸಿ.ಸಿ. ಮುಂಡಾಜೆಯ ಅಧ್ಯಕ್ಷ ಪಿ.ಸಿ.ಸೆಬಾಸ್ಟಿಯನ್, ಕಾರ್ಯದರ್ಶಿ ರಾಕೇಶ್, ಕೋಶಾಧಿಕಾರಿ ರಂಗನಾಥ್ ಹೆಬ್ಬಾರ್, ಆರ್.ಸಿ.ಸಿ. ಕಕ್ಕಿಂಜೆ ಅಧ್ಯಕ್ಷೆ ಶ್ರೀಮತಿ ಶಾರದ ಎ, ಕಾರ್ಯದರ್ಶಿ ಗೋಪಾಲಕೃಷ್ಣ ಗೌಡ, ಕೋಶಾಧಿಕಾರಿ ವರ್ಗೀಸ್ ವಿ.ಪಿ., ಆರ್.ಸಿ.ಸಿ ಕಲ್ಮಂಜ ಅಧ್ಯಕ್ಷ ನಾಗೇಶ್ ಕಲ್ಮಂಜ, ಕಾರ್ಯದರ್ಶಿ ದಿನೇಶ್ ಗೌಡ ಬನದಬೈಲು, ಕೋಶಾಧಿಕಾರಿ ಡಿ.ಜಯಂತ್ ರಾವ್ ಕಲ್ಮಂಜ ಉಪಸ್ಥಿತರಿದ್ದರು.

Related posts

ಮಹಿಳಾ ವೃಂದ ಬೆಳ್ತಂಗಡಿ ಮತ್ತು ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಡೆಂಗ್ಯೂ ಜ್ವರದ ಮಾಹಿತಿ ಮತ್ತು ಜಾಗೃತಿ ಹಾಗೂ ಕಾರ್ಗಿಲ್ ವಿಜಯ ದಿವಸ್ ಆಚರಣೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಶ್ರಮದಾನ

Suddi Udaya

ದ.ಕ. ಸಹಕಾರಿ ಹಾಲು ಒಕ್ಕೂಟದಿಂದ ನಂದಿನಿ ಪ್ರಿಮಿಯಮ್ ಪ್ರೊಬಯಾಟಿಕ್ ಮೊಸರು ಬಿಡುಗಡೆ

Suddi Udaya

ನ.20: ಚಾರ್ಮಾಡಿಯಲ್ಲಿ ಸಹಕಾರ ಸಪ್ತಾಹ ಸಮಾರೋಪ

Suddi Udaya

ಉಜಿರೆ: ರಾ.ಹಿಂ.ಜಾ. ವೇದಿಕೆ ಆಶ್ರಯದಲ್ಲಿ ತಿರುಪತಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ

Suddi Udaya

ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ನೇತೃತ್ವದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ

Suddi Udaya
error: Content is protected !!