September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅರಸಿನಮಕ್ಕಿ ಶಿವಾನಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಮಹಾಸಭೆ

ಅರಸಿನಮಕ್ಕಿ : ಶಿವಾನಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಅರಸಿನಮಕ್ಕಿ ಇದರ ಮಹಾಸಭೆಯನ್ನು ಸೆ.17 ರಂದು ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಪ್ರತಿಮ ರವರ ಅಧ್ಯಕ್ಷತೆಯಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾ ಶ್ರೀ ಹಾಗೂ ತಾಲೂಕು ಬ್ಲಾಕ್ ಮ್ಯಾನೇಜರ್ ನಿತೇಶ್ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಸಮೃದ್ಧಿ ಸಂಘದ ಸದಸ್ಯರು ಪ್ರಾರ್ಥನೆ ಮಾಡಿದರು ಹೇಮಲತಾ ಸ್ವಾಗತಿಸಿದರು. ಪಂಚಾಯಿತಿನ ಅಧ್ಯಕ್ಷೆ ಶ್ರೀಮತಿ ಗಾಯತ್ರಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಜಯರಾಜ, ಪಂಚಾಯಿತಿ ಸದಸ್ಯರಾದ ಶ್ರೀಮತಿ ಸೌಮ್ಯ ತುಳುಪುಳೆ ಹಾಗೂ ಒಕ್ಕೂಟದ ಕಾರ್ಯದರ್ಶಿಯಾದ ಶ್ರೀಮತಿ ಆಶಾ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಸೇರಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನೀತಾ ರವರು 2024-25 ರ ವಾರ್ಷಿಕ ವರದಿ ಮಂಡನೆ ಮಾಡಿದರು.ಕು ಅಮಿತಾ 2024-25 ಖರ್ಚು ವೆಚ್ಚ ಹಾಗೂ ಆಸ್ತಿ ಜವಾಬ್ದಾರಿ ಯನ್ನು ಮಂಡಿಸಿದರು. ತಾಲೂಕಿನ ಬ್ಲಾಕ್ ಮ್ಯಾನೇಜರ್ ನಿತೇಶ್ ಮಾತಾಡಿ ಒಕ್ಕೂಟ ರಚನೆ, ರಿಜಿಸ್ಟ್ರೇಷಣೆ PMFME, PMSBY, PMJJBY, ಉದ್ಯಮ ಕಾರ್ಡ್ FSSI, ಅಕ್ಕ ಕೆಫೆ, ಅಕ್ಕ ಟ್ರಕ್ ಕಾಫಿ ಕ್ಯೂಸ್ ವೈಯಕ್ತಿಕ ಬ್ಯಾಂಕ್ ಲೋನ್ ನ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ವೀಣಾ ಶ್ರೀ ಮಾತಾಡಿ ಕೌಶಲ್ಯಾಭಿವೃದ್ಧಿಯ ಬಗ್ಗೆ ಒಕ್ಕೂಟದ ಮಹಾಸಭೆ ಬಗ್ಗೆ ಸಂಘದ ಅಧ್ಯಕ್ಷ ಕಾರ್ಯದರ್ಶಿ ಜವಾಬ್ದಾರಿಯ ಬಗ್ಗೆ ಒಕ್ಕೂಟ ಪದಾಧಿಕಾರಿಗಳ ಬದಲಾವಣೆ ಮಾಡಿ ಒಕ್ಕೂಟ ರಚನೆ ಮಾಡಿದರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತಾಡಿ ಸ್ವಚ್ಛತಾ ಆಂದೋಲನ ಪ್ರತಿ ವಾರ್ಡ್ ಗಳಲ್ಲಿ, ಮನೆಗಳಲ್ಲಿ ಮಾಡುವ ಬಗ್ಗೆ ಹೇಳಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಅರಸಿನಮಕ್ಕಿ ಬ್ಯಾಂಕಿನ ಸಿಬ್ಬಂದಿಯಾದ ವಂದನ್ ಅವರು ವೈಯುಕ್ತಿಕ ಲೋನಿನ ಬಗ್ಗೆ, PMJJY, PMJJBY, APY ಬಗ್ಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸದಸ್ಯರಿಗೆ ನೀಡಿದರು.

PHCO ಯಾದ ಪುಟ್ಟಮ್ಮ ಸಿಸ್ಟರ್ ಅವರು ಪೌಷ್ಟಿಕ ಆಹಾರಗಳ ಬಗ್ಗೆ ಸ್ವಚ್ಛತೆಯ ಬಗ್ಗೆ ಹೆಣ್ಣು ಮಕ್ಕಳ ದೌರ್ಜನ್ಯದ ಬಗ್ಗೆ ಲಿಂಗತ್ವದ ಬಗ್ಗೆ ಒಕ್ಕೂಟದ ಸದಸ್ಯರಿಗೆ ಮಾಹಿತಿ ನೀಡಿದರು. ಆ ಸಂದರ್ಭದಲ್ಲಿ ಹತ್ಯಡ್ಕ ಗ್ರಾಮದ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಕವಿತಾ ಶ್ರೀಮತಿ ಸರೋಜಿನಿ ಶ್ರೀಮತಿ ಪಾರ್ವತಿ CHO ಗಳಾದ ಅಂಬಳಿ ಜೋಕಬೋ ಮತ್ತು ಮಿನಿ ಉಪಸಿತರಿದ್ದು ಉಪಸ್ಥಿತರಿದ್ದ ಸದಸ್ಯರ ಶುಗರ್ ಟೆಸ್ಟ್ ಬಿಪಿ ಟೆಸ್ಟ್ ಮಾಡಿಸಿದರು ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞಾವಿಧಿಯನ್ನು ವಾದಿಸಲಾಯಿತು ಸಭೆಯಲ್ಲಿ ಸಂಜೀವಿನಿ ಗೀತೆಯನ್ನು ಹಾಡಲಾಯಿತು . ಒಕ್ಕೂಟದ ಅಧ್ಯಕ್ಷರು ಕಾರ್ಯದರ್ಶಿ ಭಾಗವಹಿಸದರು. ಬಿಸಿ ಸಖಿ ರೇವತಿ ನಿರೂಪಣೆ ಮಾಡಿದರು. ಕೃಷಿ ಉದ್ಯೋಗ ಸಖಿ ಯಾದ ಗೀತಾ ಇವರ ಧನ್ಯವಾದವಿತ್ತರು.

Related posts

ಧರ್ಮಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ

Suddi Udaya

ಬೊಂಟ್ರೋಟ್ಟುಗುತ್ತು: ಪ್ರತಾಪಸಿಂಹ ನಾಯಕ್ ರವರಿಂದ ಹೈಮಾಸ್ಕ್ ದೀಪದ ಉದ್ಘಾಟನೆ

Suddi Udaya

ಕುಕ್ಕೇಡಿ: ಪಂಡಿಜೆ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಮತ್ತು ಸ್ವಚ್ಚತಾ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಪಾದಯಾತ್ರಿಗಳ ಸೇವೆಗಾಗಿ ಉಚಿತ ವೈದ್ಯಕೀಯ ಶಿಬಿರಗಳ ಉದ್ಘಾಟನೆ

Suddi Udaya

ಚಾರ್ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಉನ್ನತೀಕರಣ ಅಭಿವೃದ್ಧಿ ಕಾಮಗಾರಿಗೆ ರೂ. 20 ಲಕ್ಷ ಅನುದಾನ ಮಂಜೂರು: ರಕ್ಷಿತ್ ಶಿವರಾಂ ರವರಿಗೆ ಅಭಿನಂದನೆ

Suddi Udaya

ಶಿಶಿಲ ಗ್ರಾ.ಪಂ. ಅಧ್ಯಕ್ಷರಾಗಿ ಸುಧೀನ್, ಉಪಾಧ್ಯಕ್ಷರಾಗಿ ಯತೀಶ್ ಆಯ್ಕೆ

Suddi Udaya
error: Content is protected !!