July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೋರಂ ಕೊರತೆ ಹಾಗೂ ಅಧಿಕಾರಿಗಳು ಭಾಗವಹಿಸದ್ದರಿಂದ ಕೊಕ್ಕಡ ಗ್ರಾಮಸಭೆ ಮುಂದೂಡಿಕೆ

ಕೊಕ್ಕಡ: ಕೊಕ್ಕಡ ಗ್ರಾ.ಪಂ. ನ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಸೆ. 22ರಂದು ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಬೇಬಿರವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ರವರು ಭಾಗವಹಿಸಿದರು.

ಸ್ವಾಗತಿಸಿದ ನಂತರ ಪಿಡಿಒ ದೀಪಕ್ ರಾಜ್ ವರದಿಗೆ ಮುಂದಾದಾಗ ಗ್ರಾಮಸ್ಥರರಾದ ಲಕ್ಷ್ಮೀ ನಾರಾಯಣರವರು ಅಧಿಕಾರಿಗಳು ಸಭೆಗೆ ಹಾಜರಾಗದ ಬಗ್ಗೆ ಮಾತನಾಡಿ ಗ್ರಾಮಸಭೆಯಲ್ಲಿ ಅಧಿಕಾರಿಗಳು ಕಡಿಮೆ ಇರುವುದರಿಂದ ಗ್ರಾಮಸಭೆ ಮುಂದೂಡಿ ಎಂದರು.

ಮಾರ್ಗದರ್ಶಿ ಅಧಿಕಾರಿ ಈ ವೇಳೆ ಮಾತನಾಡಿ ಗ್ರಾಮ ಮಟ್ಟದ ಅಧಿಕಾರಿಗಳು ಇದ್ದು, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲು ಇರುವ ಕೆಲವು ಸಮಸ್ಯೆಗಳ ಬಗ್ಗೆ ತಿಳಿಸಿದರಾದರೂ ಹಾಗೂ ಕೆಲವು ಅಧಿಕಾರಿಗಳು ಬರುತ್ತಿದ್ದಾರೆ ಎಂದು ಹೇಳಿದರೂ ಕೇಳದ ಕೆಲ ಗ್ರಾಮಸ್ಥರು ಅಧಿಕಾರಿಗಳು ಬಂದ ಮೇಲೆಯೇ ಪ್ರಾರಂಭಿಸುವ ಎಂದರು. 12 ಗಂಟೆಯಾದರೂ ಅಧಿಕಾರಿಗಳು ಬರುವುದು ಕಾಣದಾದಾಗ ಕೆಲ ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಉತ್ತರಿಸಲು ಅಧಿಕಾರಿಗಳು ಇಲ್ಲದಿರುವುದರಿಂದ ಗ್ರಾಮಸಭೆ ಮುಂದೂಡಿ ಎಂದರು. ಕೆಲವರು ಬೇಕು-ಕೆಲವರು ಬೇಡ ಎಂಬ ಚರ್ಚೆ ನಡೆದು ಕೊನೆಗೆ ಪಿಡಿಒ ಗ್ರಾಮಸಭೆ ಮುಂದೂಡುವ ಬಗ್ಗೆ ಹೇಳಿದರು.

ಈ ವೇಳೆ ರಿಕ್ಷಾ ತಂಗುದಾಣದ ಕುರಿತು ರಿಕ್ಷಾ ಚಾಲಕ ಮಾಲಕರು ಪಿಡಿಒ ದೀಪಕ್ ರಾಜ್ ರಲ್ಲಿ ವಿಚಾರಿಸಿದಾಗ ಮಾತಿನ ಚಕಮಕಿ ನಡೆದು ಪಿಡಿಒ ಹೊರಟರು. ಮಾರ್ಗದರ್ಶಿ ಅಧಿಕಾರಿ ತಾಲೂಕು ಮುಖ್ಯಕಾರ್ಯನಿರ್ವಹಣಾಧಿಕಾರಿಯವರನ್ನು ಸಂಪರ್ಕಿಸಿದ ನಂತರ ಪಿಡಿಒ ಆಗಮಿಸಿದರಾದರೂ ಗ್ರಾಮಸಭೆ ನಡೆಸಲು ಗ್ರಾಮಸ್ಥರ ಕೋರಂ ಇಲ್ಲದ ಕಾರಣ ಮಾರ್ಗದರ್ಶಿ ಅಧಿಕಾರಿ ಗ್ರಾಮಸಭೆ ಮುಂದೂಡಿದರು.

ವೇದಿಕೆಯಲ್ಲಿ ನಿಯೋಜಿತ ಪಿಡಿಒ, ಉಪಾಧ್ಯಕ್ಷ ಪ್ರಭಾಕರ್, ಪಂ. ಸದಸ್ಯರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಗುರಿಪಳ್ಳ ಇಂದಬೆಟ್ಟುವಿಗೆ ಪರ್ಯಾಯ ರಸ್ತೆಯ ಮೂಲಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಅಂತರ್ ಕಾಲೇಜು ಭಾಷಣ ಮತ್ತು ಚರ್ಚಾ ಸ್ಪರ್ಧೆಯ ಬಹುಮಾನ ವಿತರಣೆ

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಎಕ್ಸಲೆಂಟ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹೊಸಂಗಡಿ ಗ್ರಾಮ ಪಂಚಾಯತಿಗೆ ಭೇಟಿ

Suddi Udaya

ಪತ್ರಕರ್ತ, ಭುವನೇಶ್ ಗೇರುಕಟ್ಟೆ ರವರಿಗೆ ಮಾತೃವಿಯೋಗ

Suddi Udaya
error: Content is protected !!