22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೋರಂ ಕೊರತೆ ಹಾಗೂ ಅಧಿಕಾರಿಗಳು ಭಾಗವಹಿಸದ್ದರಿಂದ ಕೊಕ್ಕಡ ಗ್ರಾಮಸಭೆ ಮುಂದೂಡಿಕೆ

ಕೊಕ್ಕಡ: ಕೊಕ್ಕಡ ಗ್ರಾ.ಪಂ. ನ 2025-26 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಸೆ. 22ರಂದು ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ಬೇಬಿರವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ರವರು ಭಾಗವಹಿಸಿದರು.

ಸ್ವಾಗತಿಸಿದ ನಂತರ ಪಿಡಿಒ ದೀಪಕ್ ರಾಜ್ ವರದಿಗೆ ಮುಂದಾದಾಗ ಗ್ರಾಮಸ್ಥರರಾದ ಲಕ್ಷ್ಮೀ ನಾರಾಯಣರವರು ಅಧಿಕಾರಿಗಳು ಸಭೆಗೆ ಹಾಜರಾಗದ ಬಗ್ಗೆ ಮಾತನಾಡಿ ಗ್ರಾಮಸಭೆಯಲ್ಲಿ ಅಧಿಕಾರಿಗಳು ಕಡಿಮೆ ಇರುವುದರಿಂದ ಗ್ರಾಮಸಭೆ ಮುಂದೂಡಿ ಎಂದರು.

ಮಾರ್ಗದರ್ಶಿ ಅಧಿಕಾರಿ ಈ ವೇಳೆ ಮಾತನಾಡಿ ಗ್ರಾಮ ಮಟ್ಟದ ಅಧಿಕಾರಿಗಳು ಇದ್ದು, ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲು ಇರುವ ಕೆಲವು ಸಮಸ್ಯೆಗಳ ಬಗ್ಗೆ ತಿಳಿಸಿದರಾದರೂ ಹಾಗೂ ಕೆಲವು ಅಧಿಕಾರಿಗಳು ಬರುತ್ತಿದ್ದಾರೆ ಎಂದು ಹೇಳಿದರೂ ಕೇಳದ ಕೆಲ ಗ್ರಾಮಸ್ಥರು ಅಧಿಕಾರಿಗಳು ಬಂದ ಮೇಲೆಯೇ ಪ್ರಾರಂಭಿಸುವ ಎಂದರು. 12 ಗಂಟೆಯಾದರೂ ಅಧಿಕಾರಿಗಳು ಬರುವುದು ಕಾಣದಾದಾಗ ಕೆಲ ಗ್ರಾಮಸ್ಥರು ತಮ್ಮ ಸಮಸ್ಯೆಗಳಿಗೆ ಉತ್ತರಿಸಲು ಅಧಿಕಾರಿಗಳು ಇಲ್ಲದಿರುವುದರಿಂದ ಗ್ರಾಮಸಭೆ ಮುಂದೂಡಿ ಎಂದರು. ಕೆಲವರು ಬೇಕು-ಕೆಲವರು ಬೇಡ ಎಂಬ ಚರ್ಚೆ ನಡೆದು ಕೊನೆಗೆ ಪಿಡಿಒ ಗ್ರಾಮಸಭೆ ಮುಂದೂಡುವ ಬಗ್ಗೆ ಹೇಳಿದರು.

ಈ ವೇಳೆ ರಿಕ್ಷಾ ತಂಗುದಾಣದ ಕುರಿತು ರಿಕ್ಷಾ ಚಾಲಕ ಮಾಲಕರು ಪಿಡಿಒ ದೀಪಕ್ ರಾಜ್ ರಲ್ಲಿ ವಿಚಾರಿಸಿದಾಗ ಮಾತಿನ ಚಕಮಕಿ ನಡೆದು ಪಿಡಿಒ ಹೊರಟರು. ಮಾರ್ಗದರ್ಶಿ ಅಧಿಕಾರಿ ತಾಲೂಕು ಮುಖ್ಯಕಾರ್ಯನಿರ್ವಹಣಾಧಿಕಾರಿಯವರನ್ನು ಸಂಪರ್ಕಿಸಿದ ನಂತರ ಪಿಡಿಒ ಆಗಮಿಸಿದರಾದರೂ ಗ್ರಾಮಸಭೆ ನಡೆಸಲು ಗ್ರಾಮಸ್ಥರ ಕೋರಂ ಇಲ್ಲದ ಕಾರಣ ಮಾರ್ಗದರ್ಶಿ ಅಧಿಕಾರಿ ಗ್ರಾಮಸಭೆ ಮುಂದೂಡಿದರು.

ವೇದಿಕೆಯಲ್ಲಿ ನಿಯೋಜಿತ ಪಿಡಿಒ, ಉಪಾಧ್ಯಕ್ಷ ಪ್ರಭಾಕರ್, ಪಂ. ಸದಸ್ಯರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಉಜಿರೆ ಸಹಿಪ್ರಾ ಶಾಲೆ ಹಳೇಪೇಟೆಗೆ ಗ್ರೀನ್ ಬೋರ್ಡ್ ಹಸ್ತಾಂತರ

Suddi Udaya

ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 12 ವರ್ಷ : ಲಾಯಿಲ ಶಕ್ತಿಕೇಂದ್ರ ವತಿಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಮೂಡುಕೋಡಿ ಮುಂಡೇಲು ನಿವಾಸಿ ಪೂವಪ್ಪ ಮೂಲ್ಯ ನಿಧನ

Suddi Udaya

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವಿಚಂದ್ರ ಬಿ ಸಾಲಿಯಾನ್ ಇವರಿಗೆ ಕಲಾರತ್ನ ಗೌರವ ಪುರಸ್ಕಾರ

Suddi Udaya

ಭಟ್ಕಳ ಕರಿಕಲ್ ಧ್ಯಾನ ಮಂದಿರದ ಪ್ರತಿಷ್ಠಾಪನಾ ವರ್ಧಂತಿ ಉತ್ಸವ

Suddi Udaya

ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ವಿಶೇಷ ಕೌಶಲ್ಯ ತರಬೇತಿ “ಐಸ್ ಬ್ರೇಕಿಂಗ್ ಸೆಷನ್” ಕಾರ್ಯಾಗಾರ

Suddi Udaya
error: Content is protected !!