23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜಾತಿ ಗಣತಿ ಸಮೀಕ್ಷೆಯಲ್ಲಿ ಮೂಲ್ಯ – ಕುಂಬಾರ ಸಮುದಾಯದವರು ಜಾತಿ ಕಾಲಂನಲ್ಲಿ ಕುಂಬಾರ ಎಂದು ನಮೂದಿಸುವಂತೆ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದಿಂದ ಹೇಳಿಕೆ

ಬೆಳ್ತಂಗಡಿ: ಸೆ. ೨೨ ರಿಂದ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಸಾಮಾಜಿಕ ಶೈಕ್ಷಣಿಕ (ಜಾತಿ ಗಣತಿ) ಗಣತಿ ಕಾರ್ಯ ಪ್ರಾರಂಭವಾಗಿದ್ದು, ಬೆಳ್ತಂಗಡಿ ತಾಲೂಕಿನ ಮೂಲ್ಯ, ಕುಂಬಾರ ಸಮಾಜ ಬಂಧುಗಳು ಸಮೀಕ್ಷೆಯಲ್ಲಿ ಧರ್ಮ ಎಂಬಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಕುಂಬಾರ ಎಂದೂ, ಉಪಜಾತಿ ಕಾಲಂನಲ್ಲಿ ಮೂಲ್ಯ, ಕುಂಬಾರ ಎಂಬ ಉಪಜಾತಿಯನ್ನು ಬರೆಸುವಂತೆ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಹಾಗೂ ಕುಲಾಲ ಕುಂಬಾರ ಯುವ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.


ತಾಲೂಕಿನ ಮೂಲ್ಯ – ಕುಂಬಾರರು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಷ್ಟೇ ಅಲ್ಲದೆ ನಮ್ಮ ಬಹುಸಾಂಸ್ಕೃತಿಕ ಅಭ್ಯಾಸಗಳು, ಕುಲಕಸುಬಿನ ಹಿನ್ನೆಲೆ, ಜನಾಂಗದವರಾಗಿ ಇದುವರೆಗೆ ಪಡೆದಿರುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತದೆ. ಜೊತೆಗೆ ನಾವು ನೀಡುವ ಮಾಹಿತಿಯ ಆಧಾರದ ಮೇಲೆ ರಾಜ್ಯ ಸರ್ಕಾರ ನಮ್ಮ ಜನಾಂಗಕ್ಕೆ ಭವಿಷ್ಯದಲ್ಲಿ ನೀಡಬಹುದಾದ ಸಾಂವಿಧಾನಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಮೀಸಲಾತಿ, ಆಯವ್ಯಯದಲ್ಲಿ ನಿಗಧಿತ ಹಣ ಮೀಸಲಿಡುವುದು ಇವೆಲ್ಲದಕ್ಕೂ ಆಧಾರವಾಗಲಿದೆ. ನಾವು ಗಣತಿದಾರರು ಮನೆಗೆ ಬಂದಾಗ ನಾವು ನೀಡುವ ಮಾಹಿತಿ ನಮ್ಮ ಜನಾಂಗದ ಭವಿಷ್ಯವನ್ನು ನಿರ್ಧರಿಸುತ್ತದೆ.


ಸದ್ರಿ ಸಮೀಕ್ಷೆಯಲ್ಲಿ ಬರುವ ೬೦ ಪ್ರಶ್ನೆಗಳಲ್ಲಿ ೫೩ ಪ್ರಶ್ನೆಗಳು ಸಾಮಾನ್ಯ ಪ್ರಶ್ನೆಗಳಾಗಿದ್ದು, ನಿಮಗೆ ಅನ್ವಯಿಸಿದಂತೆ ತಿಳಿಸಿ. ಆದರೆ ಪ್ರಶ್ನೆ ೮, ೯, ೧೦, ೧೧, ೨೪, ೩೦, ೩೧ ಹಾಗೂ ೩೨ ನಮ್ಮ ಕುಲಕಸುಬು ಹಾಗೂ ನಮ್ಮ ಜಾತಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳಾಗಿವೆ. ಇವುಗಳಿಗೆ ಯೋಚನೆ ಮಾಡಿ ಸರಿಯಾದ ಹಾಗೂ ಸೂಕ್ತ ಉತ್ತರ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ಪತ್ರಿಕೆಯ ಆಳವಾದ ಅಧ್ಯಯನ ಹಾಗೂ ಹಿರಿಯರೊಡನೆ ಸಮಾಲೋಚನೆ ನಡೆಸಿದ ಬಳಿಕ ನಮ್ಮ ಮೂಲ್ಯ, ಕುಂಬಾರ ಜಾತಿಯ ಜನರು ಈ ಕೆಳಗಿನಂತೆ ಉತ್ತರ ನೀಡಲು ಸೂಚಿಸಲಾಗಿದೆ.
ಪ್ರಶ್ನೆ ೮: ಧರ್ಮ – ಹಿಂದೂ ಪ್ರಶ್ನೆ ೯: ಜಾತಿ – ಕುಂಬಾರ ಪ್ರಶ್ನೆ ೧೦: ಉಪಜಾತಿ – ನಮ್ಮ ಜಾತಿಯ ಹೆಸರನ್ನು ಬರೆಯಿರಿ. ಉದಾ: ಕುಂಬಾರ, ಮೂಲ್ಯ, ಕುಲಾಲ, ಚಕ್ರಶಾಲಿ, ಪ್ರಜಾಪತಿ, ಸಜ್ಜನ ಕುಂಬಾರ, ಒಡೆಯರ್, ಗುಣಗ ಇತ್ಯಾದಿಗಳಲ್ಲಿ ಒಂದನ್ನು ಬರೆಸಿ, ಪ್ರಶ್ನೆ ೧೧: ಜಾತಿಗೆ ಇರುವ ಇನ್ನಿತರ ಸಮಾನಾರ್ಥದ (ಪರ್ಯಾಯ) ಹೆಸರುಗಳು – ಕುಂಬಾರ, ಕುಲಾಲ, ಮೂಲ್ಯ, ಹಾಂಡ, ಕುಂಬಾರ ಶೆಟ್ಟಿ, ಶಾಲಿವಾಹನ ಕುಂಬಾರ, ಗುನಗ, ಗುಂಡ ಭಕ್ತ, ವಡೆಯರ್, ಪ್ರಜಾಪತಿ, ಮೊದಲಾದವುಗಳಲ್ಲಿ ತಮಗೆ ತಿಳಿದಿರುವಷ್ಟು ಹೆಸರುಗಳನ್ನು ಬರೆಸಿ.


ಪ್ರಶ್ನೆ ೨೪ (e): ಮೀಸಲಾತಿಯಿಂದ ಪಡೆದ ಇತರೆ ಸೌಲಭ್ಯಗಳು – ಸೌಲಭ್ಯಗಳನ್ನು ಪಡೆದಿದ್ದರೆ ಅದನ್ನು ಬರೆಸಿ ಇಲ್ಲದಿದ್ದರೆ ಯಾವುದೂ ಇಲ್ಲ ಎಂದು ಬರೆಸಿ. ಪ್ರಶ್ನೆ ೩೦: ನಿಮ್ಮ ಕುಟುಂಬದ ಕುಲ ಕಸುಬು – ೫೩ ರಲ್ಲಿ ನೀಡಿರುವ ಕುಂಬಾರರು/Poಣಣeಡಿs ಎಂದು ಬರೆಸಿ. ಪ್ರಶ್ನೆ ೩೧: ನಿಮ್ಮ ಕುಲ ಕಸುಬು ಮುಂದುವರೆದಿದೆಯೇ? – ನಿಮ್ಮ ಕುಟುಂಬದಲ್ಲಿ ಈಗಲೂ ಕುಂಬಾರಿಕೆಯನ್ನು ಮಾಡುತ್ತಿದ್ದರೆ ಹೌದು ಎಂದು ಬರೆಸಿ. ಇಲ್ಲದಿದ್ದರೆ ಇಲ್ಲ ಎಂದು ಬರೆಸಿ. ಪ್ರಶ್ನೆ ೩೨: ನಿಮ್ಮ ಕುಲ ಕಸುಬಿನಿಂದ ಬಂದ ಖಾಯಿಲೆಗಳು – ಯಾವುದೂ ಇಲ್ಲ ಎಂದು ಬರೆಸಿ. ಎಂದು ಸಂಘದ ಅಧ್ಯಕ್ಷ ಹರೀಶ್ ಕಾರಿಂಜ, ಕಾರ್ಯದರ್ಶಿ ಯತೀಶ್ ಸಿರಿಮಜಲ್ ಕಾರ್ಯದರ್ಶಿ, ಉಪಾಧ್ಯಕ್ಷರುಗಳಾದ ಹೆಚ್. ಪದ್ಮಕುಮಾರ್ ಮತ್ತು ಲೋಕೇಶ್ ಕುಲಾಲ್ ಹಾಗೂ ಯುವ ವೇದಿಕೆಯ ಗೌರವಾಧ್ಯಕ್ಷ ಉಮೇಶ್ ಕುಲಾಲ್, ಅಧ್ಯಕ್ಷ ಅವಿನಾಶ್ ಮಾಣೂರು, ಕಾರ್ಯದರ್ಶಿ ತಿಲಕ್ ರಾಜ್ ಕುಲಾಲ್, ಕಾರ್ಯದರ್ಶಿ ಪ್ರಕರಣೆಯಲ್ಲಿ ತಿಳಿಸಿದ್ದಾರೆ.

Related posts

ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಜೂ.1: ಬಿದಿರು ಸೊಸೈಟಿ ಆಫ್ ಇಂಡಿಯಾ, ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಸಹಕಾರದೊಂದಿಗೆ ಬಿದಿರು ಕೃಷಿ ಮಾಹಿತಿ ಸಭೆ

Suddi Udaya

ಅತ್ಯುತ್ತಮ ಸೇವೆಗೆ ಹೆಸರುವಾಸಿ ಗುರುವಾಯನಕೆರೆಯ ಹೋಟೆಲ್ ರೇಸ್ ಇನ್

Suddi Udaya

ಕೊಕ್ಕಡ: ರಿಕ್ಷಾ ಚಾಲಕ ನೇಣುಬಿಗಿದು ಆತ್ಮಹತ್ಯೆ

Suddi Udaya

ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ಹದಿನೇಳು ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷಾ ವಿದ್ಯಾರ್ಥಿವೇತನ

Suddi Udaya

ಅರಸಿನಮಕ್ಕಿ: ಅರಿಕೇಗುಡ್ಡೆ ಶ್ರೀ ವನದುರ್ಗ ಕ್ಷೇತ್ರದಲ್ಲಿ ವಿಷ್ಣು ಸಹಸ್ರನಾಮ ಪಠಣ ಪ್ರಾರಂಭ

Suddi Udaya
error: Content is protected !!