September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ: ಶ್ರೀ ಧ.ಮಂ. ಕಾಲೇಜಿನ ಸಂಸ್ಕೃತ ಮತ್ತು ಗಣಿತ ವಿಭಾಗದ ಜಂಟಿ ಆಯೋಗದಲ್ಲಿ “ಗಣಿತ ಸಂಸ್ಕೃತ ಸಂಗಮ “

ಉಜಿರೆ: ಭಾರತದ ಜ್ಞಾನ ಸಂಪತ್ತು ವಿಶಿಷ್ಟವಾದದ್ದು. ಇದನ್ನು ಅರಿತು ನಾವೆಲ್ಲರೂ ಜ್ಞಾನಿಗಳಾಗೋಣ ಎಂದು ಎಸ್.ಡಿ. ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಹೇಳಿದರು.

ಶ್ರೀ ಧ.ಮಂ. ಕಾಲೇಜಿನ ಸಂಸ್ಕೃತ ಮತ್ತು ಗಣಿತ ವಿಭಾಗದ ಜಂಟಿ ಆಯೋಗದಲ್ಲಿ ” ಗಣಿತ ಸಂಸ್ಕೃತ ಸಂಗಮ ” ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಜ್ಞಾನ ಪರಂಪರೆ ತನ್ನ ಆದಿಯಿಂದಲೂ ಜಗತ್ತಿನ ಏಳಿಗೆಗೆ ವಿಶಿಷ್ಠ ವಾದ ಮೌಲ್ಯಯುತ ಸಂಪತ್ತ್ತನ್ನು ನೀಡುತ್ತಾ ಬಂದಿದೆ. ಇದನ್ನು ಕಂಡ ವಿವಿಧ ದೇಶಗಳು ಭಾರತದ ಮೇಲೆ ದಾಳಿಮಾಡುತ್ತಾ ತಮ್ಮ ಪಾಶ್ಚಾತ್ಯ ಸಂಸ್ಕೃತಿಯನ್ನು ಸ್ಥಾಪಿಸಿದ್ದಾರೆ ಎಂದರು.

ಶಾಸ್ತ್ರಗಳ ನಡುವೆ ಸೇತುವೆ ನಿರ್ಮಾಣದ ಅಗತ್ಯವಿದೆ. ಈ ಅಗತ್ಯವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಪೂರೈಸಿದೆ.
ಇದ್ಕಕೆ ಅನುಗುಣವಾಗಿ ಇಂದಿನ ಈ ಕಾರ್ಯಾಗಾರ ಉಪಯುಕ್ತವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಮಾತನಾಡಿ ‘ಐ ಕೆ ಎಸ್ ಶಿಕ್ಷಣ ರೀತಿ ತಿಳಿಯುವುದರಿಂದ ದೇಶಕ್ಕೆ ಜನರಿಗೆ ಉಪಯೋಗವಾಗಲಿದೆ. ನಾವು ಕಾಣುವ ಪ್ರತಿ ವಿಷಯದಲ್ಲೂ ಭಾರತೀಯ ಜ್ಞಾನ ಪರಂಪರೆ ಅಡಗಿದೆ. ಇದನ್ನು ನಾವು ಗ್ರಹಿಸೋಣ ಎಂದು ಅಧ್ಯಕ್ಷೀಯ ನುಡಿಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಇರ್ವರು ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಶ್ರೀಪತಿ ಕಲ್ಲೂರಾಯ ( ಅಧ್ಯಕ್ಷರು ವಿವೇಕಾನಂದ ಕಾಲೇಜು ಪುತ್ತೂರು ) ಮತ್ತು ಡಾ. ಸುರೇಶ್ ಬಾಬು ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಸಿಬಿಐಟಿ ಹೈದ್ರಾಬಾದ್ ಇವರಿಗೆ ಗೌರವಿಸಲಾಯಿತು.

ಕಾಲೇಜಿನ ಆಡಳಿತ ಕುಲಸಚಿವ ಡಾ. ಶ್ರೀಧರ್ ಎನ್ ಭಟ್ ಸ್ವಾಗತಿಸಿ, ಗಣಿತ ವಿಭಾಗದ ಮುಖ್ಯಸ್ಥ ಬಿ ಗಣೇಶ್ ನಾಯಕ್ ವಂದಿಸಿದರು.

Related posts

ವಿಕಲಚೇತನರ ಇಲಾಖೆ ರಾಜ್ಯ ಆಯುಕ್ತೆ ಲತಾ ಕುಮಾರಿ (ಐ.ಎ.ಎಸ್) ಧರ್ಮಸ್ಥಳ ಭೇಟಿ

Suddi Udaya

ಜೇಸಿಐ ಕೊಕ್ಕಡ ಕಪಿಲಾ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಳೆಂಜ ಸಂಘಪರಿವಾರದ ಕಾರ್ಯಕರ್ತರಿಂದ ಮನೆ ನಿರ್ಮಾಣ

Suddi Udaya

ಬೆಳ್ತಂಗಡಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರಿಂದ ಆಶೀರ್ವಾದ ಪಡೆದ ಹರೀಶ್ ಪೂಂಜ

Suddi Udaya

ಸಿದ್ದಕಟ್ಟೆ ಕೊಡಂಗೆ ಕಂಬಳದ ವತಿಯಿಂದ ಎಕ್ಸೆಲ್ ಕಾಲೇಜ್ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್‌ ರವರಿಗೆ ಸನ್ಮಾನ

Suddi Udaya

ಸಿಯೋನ್ ಆಶ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

Suddi Udaya
error: Content is protected !!