22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

2025-26 ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ

ಬೆಳ್ತಂಗಡಿ: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ನವೆಂಬರ್ 15 ರಿಂದ ಆರಂಭವಾಗಲಿದೆ. ಈ ಸಾಲಿನ ಕಂಬಳ ಕೂಟದ ಅಧಿಕೃತ ವೇಳಾಪಟ್ಟಿ ಸೆ.28ರಂದು ಪ್ರಕಟವಾಗಿದೆ. ಬೆಳ್ತಂಗಡಿ ತಾಲೂಕಿನ ನಡೆಯುವ ಜೋಡುಕರೆ ಕಂಬಳಗಳಾದ ಬಳ್ಳಮಂಜ ಶೇಷ-ನಾಗ, ಬಂಗಾಡಿ ಸೂರ್ಯ-ಚಂದ್ರ ಹಾಗೂ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಕಂಬಳ ನಡೆಯಲಿದೆ.

ಕಳೆದ ಬಾರಿ ವೇಳಾಪಟ್ಟಿ ಪ್ರಕಟವಾದಾಗ ಬೆಂಗಳೂರು ಮತ್ತು ಶಿವಮೊಗ್ಗ ಕಂಬಳಗಳ ಉಲ್ಲೇಖ ಮಾಡಲಾಗಿತ್ತು. ಆದರೆ ಕಾರಾಣಾಂತರಗಳಿಂದ ಕಂಬಳ ಕೂಟ ಆಯೋಜನೆ ಸಾಧ್ಯವಾಗಿರಲಿಲ್ಲ. ಈ ಬಾರಿಯೂ ರಾಜಧಾನಿ ಮತ್ತು ಶಿವಮೊಗ್ಗದಲ್ಲಿ ಕಂಬಳ ನಡೆಸುವ ಉಲ್ಲೇಖ ಮಾಡಲಾಗಿಲ್ಲ.

ವೇಳಾಪಟ್ಟಿ
ನವೆಂಬರ್ 15 – ಪಣಪಿಲ
ನವೆಂಬರ್ 22 – ಕೊಡಂಗೆ
ನವೆಂಬರ್ 29 – ಕಕ್ಕೆಪದವು
ಡಿಸೆಂಬರ್ 6 – ಹೊಕ್ಕಾಡಿ
ಡಿಸೆಂಬರ್ 7 – ಬಳ್ಳಮಂಜ
ಡಿಸೆಂಬರ್ 13 – ಬಾರಾಡಿ
ಡಿಸೆಂಬರ್ 20 – ಮುಲ್ಕಿ
ಡಿಸೆಂಬರ್ 27 – ಮಂಗಳೂರು
2026ರ ಜನವರಿ 3 – ಮಿಯ್ಯಾರು
ಜನವರಿ 10 – ನರಿಂಗಾಣ
ಜನವರಿ 17 – ಅಡ್ಡೆ
ಜನವರಿ 24 -ಮೂಡುಬಿದಿರೆ
ಜನವರಿ 31- ಐಕಳ
ಫೆಬ್ರವರಿ 7 – ಪುತ್ತೂರು
ಫೆಬ್ರವರಿ 14 – ಜಪ್ಪು
ಫೆಬ್ರವರಿ 21 – ವಾಮಂಜೂರು
ಫೆಬ್ರವರಿ 28 – ಎರ್ಮಾಳು
ಮಾರ್ಚ್ 7 – ಬಂಟ್ವಾಳ
ಮಾರ್ಚ್ 15 – ಬಂಗಾಡಿ
ಮಾರ್ಚ್ 21 – ವೇಣೂರು
ಮಾರ್ಚ್ 28 – ಉಪ್ಪಿನಂಗಡಿ
ಏಪ್ರಿಲ್ 4 – ಗುರುಪುರ
ಏಪ್ರಿಲ್ 11- ಬಳ್ಳುಂಜೆ


Related posts

ಎಂ ನಾರಾಯಣ ಬೇಗೂರ್ ರವರಿಗೆ ಶ್ರೀ ರಾಘವೇಂದ್ರ ಮಠದಲ್ಲಿ ಅಭಿನಂದನೆ

Suddi Udaya

ದ..ಕ. ಜಿಲ್ಲಾ ಕ.ಸಾ.ಪ. ವತಿಯಿಂದ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಅರಸ್ ಜನ್ಮದಿನಾಚರಣೆ

Suddi Udaya

ಸುಂದರ ಮಲೆಕುಡಿಯ ಕೈ ಬೆರಳು ತುಂಡರಿಸಿ ದೌರ್ಜನ್ಯ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ: ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ: ಅಕ್ಬರ್ ಬೆಳ್ತಂಗಡಿ

Suddi Udaya

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ವಿತರಣೆ :

Suddi Udaya

ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 56ನೇ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸವ

Suddi Udaya

ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಪದವಿ ಪ್ರದಾನ ಕಾರ್ಯಕ್ರಮ ಮತ್ತು ಮಾತಾ-ಪಿತಾಮಹರ (ಹಿರಿಯರ) ದಿನ ಆಚರಣೆ.

Suddi Udaya
error: Content is protected !!