23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

2025-26 ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ

ಬೆಳ್ತಂಗಡಿ: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ನವೆಂಬರ್ 15 ರಿಂದ ಆರಂಭವಾಗಲಿದೆ. ಈ ಸಾಲಿನ ಕಂಬಳ ಕೂಟದ ಅಧಿಕೃತ ವೇಳಾಪಟ್ಟಿ ಸೆ.28ರಂದು ಪ್ರಕಟವಾಗಿದೆ. ಬೆಳ್ತಂಗಡಿ ತಾಲೂಕಿನ ನಡೆಯುವ ಜೋಡುಕರೆ ಕಂಬಳಗಳಾದ ಬಳ್ಳಮಂಜ ಶೇಷ-ನಾಗ, ಬಂಗಾಡಿ ಸೂರ್ಯ-ಚಂದ್ರ ಹಾಗೂ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಕಂಬಳ ನಡೆಯಲಿದೆ.

ಕಳೆದ ಬಾರಿ ವೇಳಾಪಟ್ಟಿ ಪ್ರಕಟವಾದಾಗ ಬೆಂಗಳೂರು ಮತ್ತು ಶಿವಮೊಗ್ಗ ಕಂಬಳಗಳ ಉಲ್ಲೇಖ ಮಾಡಲಾಗಿತ್ತು. ಆದರೆ ಕಾರಾಣಾಂತರಗಳಿಂದ ಕಂಬಳ ಕೂಟ ಆಯೋಜನೆ ಸಾಧ್ಯವಾಗಿರಲಿಲ್ಲ. ಈ ಬಾರಿಯೂ ರಾಜಧಾನಿ ಮತ್ತು ಶಿವಮೊಗ್ಗದಲ್ಲಿ ಕಂಬಳ ನಡೆಸುವ ಉಲ್ಲೇಖ ಮಾಡಲಾಗಿಲ್ಲ.

ವೇಳಾಪಟ್ಟಿ
ನವೆಂಬರ್ 15 – ಪಣಪಿಲ
ನವೆಂಬರ್ 22 – ಕೊಡಂಗೆ
ನವೆಂಬರ್ 29 – ಕಕ್ಕೆಪದವು
ಡಿಸೆಂಬರ್ 6 – ಹೊಕ್ಕಾಡಿ
ಡಿಸೆಂಬರ್ 7 – ಬಳ್ಳಮಂಜ
ಡಿಸೆಂಬರ್ 13 – ಬಾರಾಡಿ
ಡಿಸೆಂಬರ್ 20 – ಮುಲ್ಕಿ
ಡಿಸೆಂಬರ್ 27 – ಮಂಗಳೂರು
2026ರ ಜನವರಿ 3 – ಮಿಯ್ಯಾರು
ಜನವರಿ 10 – ನರಿಂಗಾಣ
ಜನವರಿ 17 – ಅಡ್ಡೆ
ಜನವರಿ 24 -ಮೂಡುಬಿದಿರೆ
ಜನವರಿ 31- ಐಕಳ
ಫೆಬ್ರವರಿ 7 – ಪುತ್ತೂರು
ಫೆಬ್ರವರಿ 14 – ಜಪ್ಪು
ಫೆಬ್ರವರಿ 21 – ವಾಮಂಜೂರು
ಫೆಬ್ರವರಿ 28 – ಎರ್ಮಾಳು
ಮಾರ್ಚ್ 7 – ಬಂಟ್ವಾಳ
ಮಾರ್ಚ್ 15 – ಬಂಗಾಡಿ
ಮಾರ್ಚ್ 21 – ವೇಣೂರು
ಮಾರ್ಚ್ 28 – ಉಪ್ಪಿನಂಗಡಿ
ಏಪ್ರಿಲ್ 4 – ಗುರುಪುರ
ಏಪ್ರಿಲ್ 11- ಬಳ್ಳುಂಜೆ


Related posts

ಗುರುವಾಯನಕೆರೆ ಗೆಳೆಯರ ಬಳಗ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಲಾಯಿಲ: ನಾಟಿ ವೈದ್ಯ ಭೋಜ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಸ್ಥಳಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಯೂಟ್ಯೂಬರ್‌ಗಳ ಆರೋಗ್ಯ ವಿಚಾರಿಸಿದ ಬೆಳ್ತಂಗಡಿ ಡಿ.ಎಸ್.ಎಸ್(ಅಂಬೇಡ್ಕರ್‌ವಾದ) ನಿಯೋಗ

Suddi Udaya

ಪಾರೆಂಕಿಯಲ್ಲಿ ಮನೆಯ ಪಕ್ಕದ ತಡೆಗೋಡೆ ಕುಸಿತ

Suddi Udaya
error: Content is protected !!