July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕರಂಬಾರು: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ‌ ಉತ್ಸವ

ಬೆಳ್ತಂಗಡಿ: ಪ್ರಬಲ ಸಂಕಲ್ಪ ಶಕ್ತಿ ಇದ್ದರೆ ಮಹಾನ್ ಕಾರ್ಯಗಳು ನಡೆಯುತ್ತವೆ. ಇದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ನಿದರ್ಶನ ಎಂದು ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತೆ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯ ಹೇಳಿದರು.
ಅವರು ಕರಂಬಾರು ಜ್ಞಾನೇಶ್ವರಿ ಭಜನಾ‌ಮಂದಿರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ‌ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾl ಹೆಡಗೇವಾರರ ಸಂಕಲ್ಪ ಶಕ್ತಿ ಅದ್ಭುತವಾದದ್ದು. ಸಂಘದ ಸ್ಥಾಪನೆಯಿಂದ ಹಿಂದುತ್ವಕ್ಕೆ ಬಲ ಬಂದಿದೆ. ವಿಶ್ವಗುರು ಆಗಲು ನಮ್ಮ ಸಮಾಜಕ್ಕೆ ಸಾಧ್ಯ. ದೇಶ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದರು.
ಸಂಘದ ಜಿಲ್ಲಾ ಸಹಕಾರ್ಯವಾಹಕ ಸುಜಿತ್ ಕುಂಡಡ್ಕ ಬೌದ್ಧಿಕ್ ಮಾಡಿ ಸಂಘಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ, ಕುಟುಂಬ ನೀತಿಯ ಪಾಲನೆ, ನಾಗರಿಕ ಶಿಷ್ಟಾಚಾರ, ಸ್ವದೇಶಿ ವಸ್ತುಗಳ ಉಪಯೋಗದಂತಹ ಪಂಚಪರಿವರ್ತನೆಗೆ ನಾವೆಲ್ಲ ಮುಂದಡಿಯಿಡಬೇಕು ಎಂದರು.

ಸಂಘ ಶತಾಬ್ದಿಯ ಹಿನ್ನಲೆಯಲ್ಲಿ ಬಳಂಜ ಮಂಡಲದ ತೆಂಕಕಾರಂದೂರು, ಕರಂಬಾರು, ಶಿರ್ಲಾಲು, ನಾಲ್ಕೂರು, ಬಳಂಜ ಗ್ರಾಮದ ನೂರೈವತ್ತಕ್ಕೂ ಹೆಚ್ಚು ಸ್ವಯಂಸೇವಕರು ಗಣವೇಶಧಾರಿಗಳಾಗಿ ಭಾಗವಹಿಸಿದ್ದರು.

Related posts

ಉಜಿರೆ ರಬ್ಬರ್ ಸೊಸೈಟಿ ಮಹಾಸಭೆ: ರೂ. 24 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ. 9 ಡಿವಿಡೆಂಟ್

Suddi Udaya

ಸುಲ್ಕೇರಿ ಗ್ರಾಮದ ನಾಲ್ಕು ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

Suddi Udaya

ಬಳಂಜ:ಪಿಯುಸಿಯಲ್ಲಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ಟಾಪರ್ ಅನುಪ್ರಿಯರವರಿಗೆ ಸನ್ಮಾನ

Suddi Udaya

ಎಸ್‌ಡಿಎಂ ಪ.ಪೂ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾಟ

Suddi Udaya

ಕಬಡ್ಡಿ ಪಂದ್ಯಾಟ: ತೋಟತ್ತಾಡಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪೃಥ್ವಿನಿ ಶೆಟ್ಟಿಗೆ ಆಲ್ ರೌಂಡರ್ ಪ್ರಶಸ್ತಿ

Suddi Udaya

ನೆರಿಯ: ಮುಚ್ಚಿರಾಲಿ ಎಂಬಲ್ಲಿ ಅಪಾಯದ ಅಂಚಿನಲ್ಲಿರುವ ಕಾಲುಸಂಕ : ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಫಾರೆಸ್ಟರ್ ಹಾಗೂ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ : ಮರವನ್ನು ತೆರವುಗೊಳಿಸುವುದಾಗಿ ಭರವಸೆ

Suddi Udaya
error: Content is protected !!