22.6 C
ಪುತ್ತೂರು, ಬೆಳ್ತಂಗಡಿ
July 23, 2026
ಕ್ರೀಡಾ ಸುದ್ದಿರಾಜ್ಯ ಸುದ್ದಿವರದಿ

ಕೊಂಕನ್ ಬೆಲ್ಸ್ ಕ್ರೀಡಾ ಕೂಟ – ಚಾಂಪಿಯನ್‌ಶಿಪ್ ಚಾಲೆಂಜ್

ಬೆಳ್ತಂಗಡಿ: ಕೊಂಕನ್ ಬೆಲ್ಸ್, ದುಬಾಯ್ – 2011ರಲ್ಲಿ ಸ್ಥಾಪಿತವಾದ ಬೆಳ್ತಂಗಡಿ ವರಾಡೊ ಅಸೋಸಿಯೇಷನ್, ತನ್ನ ಮೂರನೇ ಕ್ರೀಡಾಕೂಟ – ಚಾಂಪಿಯನ್‌ಶಿಪ್ ಚಾಲೆಂಜ್ 2025 ಅನ್ನು ಅ.12ರಂದು ಅಲ್ ಮನಾರ ಸ್ಪೋರ್ಟ್ಸ್ ಹಾಲ್, ದುಬಾಯ್ ಇಲ್ಲಿ ಆಯೋಜಿಸಿತು. ಈ ಅದ್ದೂರಿ ಕಾರ್ಯಕ್ರಮದಲ್ಲಿ ಯುಎಇಯಿಂದ ಬಂದ 500 ಕ್ಕೂ ಹೆಚ್ಚು ಪ್ರೇಕ್ಷಕರು, ಆಟಗಾರರು ಮತ್ತು ಅಭಿಮಾನಿಗಳು ಉತ್ಸಾಹಭರಿತವಾಗಿ ಭಾಗವಹಿಸಿದರು.

ಕಾರ್ಯಕ್ರಮವು ಶುಭಾರಂಭ ಸಮಾರಂಭದೊಂದಿಗೆ ಆರಂಭಗೊಂಡಿತು. ಮಾಜಿ ಅಧ್ಯಕ್ಷ ರೋಷನ್ ಪಿಂಟೋ ಸ್ವಾಗತಿಸಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ, ಯುಎಇಯಲ್ಲಿ ನೆಲೆಸಿರುವ ಕರ್ನಾಟಕದ ಮೂವರು ಗಣ್ಯ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಿದ ಸೇವೆ, ದಾನಶೀಲತೆ, ಸಾಂಸ್ಕೃತಿಕ ಏಕತೆಯ ಪ್ರೋತ್ಸಾಹ ಮತ್ತು ಸಮುದಾಯದ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ‘ಸೇವಾ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಫಾ. ವಾಲ್ಟರ್ ಡಿ’ಮೆಲ್ಲೊ, ಬೆಳ್ತಂಗಡಿ ಪರಿಷ್ ಪಾದ್ರಿ ಮತ್ತು ವಾಲ್ಟರ್ ನಂದಳಿಕೆ, ದೈಜಿಜಿವರ್ಲ್ಡ್ ಮೀಡಿಯಾ (ಭಾರತ/ಯುಎಇ) ಸಂಸ್ಥಾಪಕರು ಉಪಸ್ಥಿತರಿದ್ದರು.ಉದ್ಘಾಟನಾ ಸಮಾರಂಭವು ಕರ್ನಾಟಕ ರಾಜ್ಯ ಮಟ್ಟದ ಕ್ರೀಡಾಪಟುರಾದ ನೆಲ್ಸನ್ ಪಿಂಟೊ ಅವರ ನೇತೃತ್ವದಲ್ಲಿ ನಡೆದ ಶಪಥ ವಾಚನದೊಂದಿಗೆ ಸಂಪನ್ನವಾಯಿತು. ನ್ಯಾಯ ನಿರ್ಣಯ ಮತ್ತು ತೀರ್ಪುಗಾರಿಕೆಯನ್ನು ನೋಯೆಲ್ ಅಲ್ಮೈಡಾ ವಹಿಸಿದ್ದರು.ಕ್ರೀಡಾ ಕೂಟದ ಸಮಾರೋಪದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ವಾಲ್ಟರ್ ಪೆರೇರಾ (ಪ್ಯಾಟ್ರನ್/ಪೋಶಕರು, ಕೊಂಕನ್ ಬೆಲ್ಸ್) ಅವರೊಂದಿಗೆ ರೆಮಿಜಿಯಸ್ ಡಿಸೋಜಾ (ಸ್ಥಾಪಕ ಅಧ್ಯಕ್ಷರು), ರೆಜಿನಾಲ್ಡ್ ಡಿಸೋಜಾ (ಹಿಂದಿನ ಅಧ್ಯಕ್ಷರು), ರೋಷನ್ ಪಿಂಟೊ (ಹಿಂದಿನ ಅಧ್ಯಕ್ಷರು) ಮತ್ತು ಶ್ರೀ ಸುನಿಲ್ ರೊಡ್ರಿಗ್ಸ್ (ಪ್ರಸ್ತುತ ಅಧ್ಯಕ್ಷರು) ಪ್ರಶಸ್ತಿಗಳನ್ನು ವಿತರಿಸಿದರು.ದಿನದ ಕೊನೆಯಲ್ಲಿ ರೆಮಿಜಿಯಸ್ ಡಿಸೋಜಾ ಅವರ ಧನ್ಯವಾದ ಭಾಷಣದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಪ್ರಜ್ವಲ್ ಡಿಸೋಜಾ (ಉಜಿರೆ/ದುಬೈ) ಕಾರ್ಯಕ್ರಮವನ್ನು ನಿರ್ವಹಿಸಿದರು ಮತ್ತು ಅರ್ಚನಾ ಹಾಗೂ ಅಶ್ರಫ್ ದಿನದವಿಡೀ ಚುರುಕಾದ ಕಾಮೆಂಟ್ರಿ ನೀಡಿದರು.ಕೊಂಕನ್ ಬೆಲ್ಸ್ ಚಾಂಪಿಯನ್‌ಶಿಪ್ ಚಾಲೆಂಜ್ 2025 ಕಾರ್ಯಕ್ರಮವು ಏಕತೆ, ಸಂಸ್ಕೃತಿ ಮತ್ತು ಕ್ರೀಡಾಸ್ಫೂರ್ತಿಯ ನಿಜವಾದ ಮೆರಗು ತೋರಿಸಿದ್ದು, ಎಲ್ಲರ ಮನಗಳಲ್ಲಿ ಸ್ಮರಣೀಯ ಕ್ಷಣಗಳನ್ನು ಉಳಿಸಿತು.

Related posts

ಬೆಳಾಲು ಶ್ರೀರಾಮ ಶಾಖೆ ವತಿಯಿಂದ ಕೊಲ್ಪಾಡಿ ಸುಬ್ರಮಣ್ಯೇಶ್ವರ ಮಕ್ಕಳ ಭಜನಾ ತಂಡಕ್ಕೆ ಧನಸಹಾಯ

Suddi Udaya

ರೆಖ್ಯ : ಮರದ ಕೊಂಬೆ ಮುರಿದು ಬಿದ್ದು ಮನೆಯ ಛಾವಣಿಗೆ ಹಾನಿ: ಶಿರಾಡಿ ಗ್ರಾಮ ವಿಕಾಸ ತಂಡ ಹಾಗೂ ಕೊಕ್ಕಡ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ದುರಸ್ತಿ ಕಾರ್ಯ

Suddi Udaya

ಚಾರ್ಮಾಡಿ ಕತ್ತರಿಗುಡ್ಡೆ ರಸ್ತೆ ಕಾಂಕ್ರಿಟೀಕರಣಗೊಳಿಸಿ ಅಭಿವೃದ್ಧಿಗೊಳಿಸಲು ಆಗ್ರಹಿಸಿ ಎಸ್ ಡಿ ಪಿ ಐ ಮನವಿ

Suddi Udaya

ಕಡಿರುದ್ಯಾವರ: ಕಾನರ್ಪ ನಿವಾಸಿ ಶ್ರೀನಿವಾಸ ಪ್ರಭು ನಿಧನ

Suddi Udaya

ಜನಜಾಗೃತಿ ತಾಲೂಕು ವೇದಿಕೆಯ ಪದಾಧಿಕಾರಿಗಳ ಕೋರ್ ಕಮಿಟಿ ಸಭೆ

Suddi Udaya

ವೇಣೂರು ಟೈಲರ್ ಅಸೋಸಿಯೇಷನ್ ನ ಸಮಿತಿಯ ಪದಾಧಿಕಾರಿಗಳು ಹಾಗೂ ಊರವರ ಸಹಕಾರದೊಂದಿಗೆ ಧನಸಹಾಯ ಹಸ್ತಾಂತರ

Suddi Udaya
error: Content is protected !!