23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳಿಯ ಗ್ರಾ.ಪಂ. ನಿಂದ ಯಶಸ್ವಿ ಮಾದರಿ ಜನ ಸ್ನೇಹಿ ಆಧಾರ್ ಕ್ಯಾಂಪ್ & ಅಂಚೆ ಜನ ಸಂಪರ್ಕ ಅಭಿಯಾನ

ಕಳಿಯ ಗ್ರಾಮ ಪಂಚಾಯತ್ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ನಾಗರೀಕ ಬಂಧುಗಳ ಸದುಪಯೋಗಕ್ಕಾಗಿ ಆಧಾರ್ ತಿದ್ದುಪಡಿ, ಹತ್ತು ವರ್ಷಗಳ ಅಪ್ಡೇಟ್, ಹದಿನೆಂಟು ವರ್ಷದ ಕೆಳಗಿನ ಹೊಸ ಆಧಾರ್ ಕಾರ್ಡ್, ವಿಳಾಸ ಬದಲಾವಣೆ ಇತ್ಯಾದಿಗಳ ಕ್ಯಾಂಪ್ ಎರಡು ದಿನ ನಡೆಸಲಾಗಿ ಸುಮಾರು ನೂರಕ್ಕೂ ಹೆಚ್ಚು ಮಂದಿಯು ಪ್ರಯೋಜನ ಪಡೆದುಕೊಂಡರು. ಜೊತೆಗೆ ಅಂಚೆ ಇಲಾಖೆಯ ವಿಶಿಷ್ಟ ಪ್ರಜಾ ಸ್ನೇಹಿ ಆರೋಗ್ಯ ವಿಮೆ, ಜೀವ ವಿಮೆ, ಸುಕನ್ಯಾ ಯೋಜನೆಯ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ ನಾಗರೀಕರ ಭಾಗವಹಿಸುವಿಕೆಯಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮದ ಉದ್ಘಾಟನೆ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್ ಮೆದಿನ ನೆರವೇರಿಸಿದರು. ಉಪಾಧ್ಯಕ್ಷೆ ಶ್ರೀಮತಿ ಇಂದಿರಾ, ಗ್ರಾ.ಪಂ. ಸದಸ್ಯರಾದ ವಿಜಯ ಕುಮಾರ್, ಕೆ.ಎಮ್. ಅಬ್ದುಲ್ ಕರೀಮ್, ಹರೀಶ್ ಕುಮಾರ್, ಸುಧಾಕರ ಮಜಲು, ಲತೀಫ್ ಭಾಗವಹಿಸಿದರು.
ಅಂಚೆ ಇಲಾಖೆ ಪುತ್ತೂರು ಅಧಿಕಾರಿ ಗುರುಪ್ರಸಾದ್, ಅಂಚೆ ವಿಭಾಗ ಬೆಳ್ತಂಗಡಿ ಮೇಲ್ವಿಚಾರಕಿ ವಿಮಲ, ಕುವೆಟ್ಟು ಎ.ಬಿ.ಜೆ.ಎಮ್ ಕೆ ಸುಂದರ ಸಾಲಿಯಾನ್, ಶಿರ್ತಾಡಿ ಎ.ಬಿ.ಜೆ.ಎಮ್ ಹರ್ಷಿತ, ಕೊಯ್ಯೂರು ಅಂಚೆ ಪಾಲಕರು ಸಂತೃಪ್ತಿ ಅಂಚೆ ಇಲಾಖಾ ವತಿಯಿಂದ ಭಾಗವಹಿಸಿದರು.


ಕಳಿಯ ಗ್ರಾಮ ಪಂಚಾಯತ್ ಪ್ರಭಾರ ಪಿ.ಡಿ.ಓ ಕುಂಞ ಕೆ ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ರವಿ ಹೆಚ್ ವಂದಿಸಿದರು. ಸಿಬ್ಬಂದಿಯವರಾದ ಶ್ರೀಮತಿ ಸುಚಿತ್ರ, ಸುರೇಶ್ ಕುಮಾರ್, ಶ್ರೀಮತಿ ಪ್ರಮೀಳಾ, ಶ್ರೀಮತಿ ನಂದಿನಿ P ರೈ, ಶ್ರೀಮತಿ ಶಶಿಕಲಾ ಸಹಕರಿಸಿದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಕಿರಣ್‌ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಅಮಿತಾನಂದ ಹೆಗ್ಡೆ

Suddi Udaya

ನಿಡ್ಲೆಯಲ್ಲಿ ಸಂವಿಧಾನ ಜಾಗೃತಿ ಜಾಥ

Suddi Udaya

ಕಲ್ಮಂಜ 88 ನೇ ವಾರ್ಡಿನ ಬಿಜೆಪಿ ಪದಾಧಿಕಾರಿಗಳ ಆಯ್ಕೆ

Suddi Udaya

ರಾಷ್ಟ್ರ ಮಟ್ಟದ ಸ್ಕ್ವೇಯ್ ಮಾರ್ಷಲ್ ಆರ್ಟ್ಸ್ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿ ಯತೀಂದ್ರ ರಿಗೆ ಕಂಚಿನ ಪದಕ

Suddi Udaya

ನಿಡ್ಲೆ ಹಾಗೂ ಪಟ್ರಮೆಯಲ್ಲಿ ಕಾಡಾನೆ ಪ್ರತ್ಯಕ್ಷ

Suddi Udaya

ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ವರ್ಗಾವಣೆ

Suddi Udaya
error: Content is protected !!