22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಳಿಯ ಗ್ರಾ.ಪಂ. ನಿಂದ ಯಶಸ್ವಿ ಮಾದರಿ ಜನ ಸ್ನೇಹಿ ಆಧಾರ್ ಕ್ಯಾಂಪ್ & ಅಂಚೆ ಜನ ಸಂಪರ್ಕ ಅಭಿಯಾನ

ಕಳಿಯ ಗ್ರಾಮ ಪಂಚಾಯತ್ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ನಾಗರೀಕ ಬಂಧುಗಳ ಸದುಪಯೋಗಕ್ಕಾಗಿ ಆಧಾರ್ ತಿದ್ದುಪಡಿ, ಹತ್ತು ವರ್ಷಗಳ ಅಪ್ಡೇಟ್, ಹದಿನೆಂಟು ವರ್ಷದ ಕೆಳಗಿನ ಹೊಸ ಆಧಾರ್ ಕಾರ್ಡ್, ವಿಳಾಸ ಬದಲಾವಣೆ ಇತ್ಯಾದಿಗಳ ಕ್ಯಾಂಪ್ ಎರಡು ದಿನ ನಡೆಸಲಾಗಿ ಸುಮಾರು ನೂರಕ್ಕೂ ಹೆಚ್ಚು ಮಂದಿಯು ಪ್ರಯೋಜನ ಪಡೆದುಕೊಂಡರು. ಜೊತೆಗೆ ಅಂಚೆ ಇಲಾಖೆಯ ವಿಶಿಷ್ಟ ಪ್ರಜಾ ಸ್ನೇಹಿ ಆರೋಗ್ಯ ವಿಮೆ, ಜೀವ ವಿಮೆ, ಸುಕನ್ಯಾ ಯೋಜನೆಯ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ ನಾಗರೀಕರ ಭಾಗವಹಿಸುವಿಕೆಯಲ್ಲಿ ಯಶಸ್ವಿಯಾಯಿತು.

ಕಾರ್ಯಕ್ರಮದ ಉದ್ಘಾಟನೆ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್ ಮೆದಿನ ನೆರವೇರಿಸಿದರು. ಉಪಾಧ್ಯಕ್ಷೆ ಶ್ರೀಮತಿ ಇಂದಿರಾ, ಗ್ರಾ.ಪಂ. ಸದಸ್ಯರಾದ ವಿಜಯ ಕುಮಾರ್, ಕೆ.ಎಮ್. ಅಬ್ದುಲ್ ಕರೀಮ್, ಹರೀಶ್ ಕುಮಾರ್, ಸುಧಾಕರ ಮಜಲು, ಲತೀಫ್ ಭಾಗವಹಿಸಿದರು.
ಅಂಚೆ ಇಲಾಖೆ ಪುತ್ತೂರು ಅಧಿಕಾರಿ ಗುರುಪ್ರಸಾದ್, ಅಂಚೆ ವಿಭಾಗ ಬೆಳ್ತಂಗಡಿ ಮೇಲ್ವಿಚಾರಕಿ ವಿಮಲ, ಕುವೆಟ್ಟು ಎ.ಬಿ.ಜೆ.ಎಮ್ ಕೆ ಸುಂದರ ಸಾಲಿಯಾನ್, ಶಿರ್ತಾಡಿ ಎ.ಬಿ.ಜೆ.ಎಮ್ ಹರ್ಷಿತ, ಕೊಯ್ಯೂರು ಅಂಚೆ ಪಾಲಕರು ಸಂತೃಪ್ತಿ ಅಂಚೆ ಇಲಾಖಾ ವತಿಯಿಂದ ಭಾಗವಹಿಸಿದರು.


ಕಳಿಯ ಗ್ರಾಮ ಪಂಚಾಯತ್ ಪ್ರಭಾರ ಪಿ.ಡಿ.ಓ ಕುಂಞ ಕೆ ಸ್ವಾಗತಿಸಿ, ನಿರೂಪಿಸಿದರು. ಸಿಬ್ಬಂದಿ ರವಿ ಹೆಚ್ ವಂದಿಸಿದರು. ಸಿಬ್ಬಂದಿಯವರಾದ ಶ್ರೀಮತಿ ಸುಚಿತ್ರ, ಸುರೇಶ್ ಕುಮಾರ್, ಶ್ರೀಮತಿ ಪ್ರಮೀಳಾ, ಶ್ರೀಮತಿ ನಂದಿನಿ P ರೈ, ಶ್ರೀಮತಿ ಶಶಿಕಲಾ ಸಹಕರಿಸಿದರು.

Related posts

ಕಲ್ಮಂಜದಲ್ಲಿ ಬಿಜೆಪಿ ಕಾರ್ಯಕರ್ತರ‌ ವಿಜಯೋತ್ಸವ

Suddi Udaya

ಮುಂಡಾಜೆ ಮತಗಟ್ಟೆ 74 ರಲ್ಲಿ ಕೈ ಕೊಟ್ಟ ಮತಯಂತ್ರ

Suddi Udaya

ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ. ಕಾಶಿಪಟ್ಣರಿಗೆ ಹುಟ್ಟೂರ ಅಭಿನಂದನೆ

Suddi Udaya

ಕೊಕ್ಕಡ: ಹಳ್ಳಿಂಗೇರಿ ಜನವಸತಿ ಪ್ರದೇಶದ ನಿತೇಶ್ ರವರ ಮನೆಗೆ ಸಿಡಿಲು ಬಡಿದು ಹಾನಿ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ವೈದಾಧಿಕಾರಿ ಡಾ. ಚಂದ್ರಕಾಂತ್ ವರ್ಗಾವಣೆ

Suddi Udaya

ಮಾಜಿ ಶಾಸಕ ವಸಂತ ಬಂಗೇರರ ಅಗಲುವಿಕೆಗೆ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಹರೀಶ್ ಎಳನೀರ್ ಸಂತಾಪ

Suddi Udaya
error: Content is protected !!