26.5 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೋಳ್ಯೂರು ರಾಮಚಂದ್ರ ರಾಯರ ಮನೆಯಲ್ಲಿ ಯಕ್ಷಭಾರತಿಯಿಂದ ತಾಳಮದ್ದಳೆ

ಬೆಳ್ತಂಗಡಿ: ಯಕ್ಷಭಾರತಿ ಕನ್ಯಾಡಿ ಬೆಳ್ತಂಗಡಿ ಸಂಸ್ಥೆಯ ವತಿಯಿಂದ ಇನ್ನಂಜೆಯಲ್ಲಿರುವ ಕೋಳ್ಯೂರು ಕಾಂಪೌಂಡ್ ನಲ್ಲಿ ಕೋಳ್ಯೂರು ರಾಮಚಂದ್ರ ರಾಯರ 94ನೇ ಜನುಮ ದಿನದ ಅಂಗವಾಗಿ ತಾಳಮದ್ದಳೆ ಪ್ರಸಂಗ: ಶರಸೇತು ಬಂಧನ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ದಿವಾಕರ ಆಚಾರ್ಯ ಧರ್ಮಸ್ಥಳ, ಮಹೇಶ ಕನ್ಯಾಡಿ ಚೆಂಡೆ ಮದ್ದಳೆಯಲ್ಲಿ ವಾಸುದೇವ ಆಚಾರ್ಯ ಉಜಿರೆ, ರಂಜಿತ್ ಪಾಠ್ಕರ್ ಅಜೆಕಾರು ಸಹಕರಿಸಿದರು.
ಮುಮ್ಮೇಳದಲ್ಲಿ ಅರ್ಜುನನಾಗಿ ಹರಿದಾಸ ಗಾಂಭೀರ ಧರ್ಮಸ್ಥಳ, ಹನುಮಂತನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ವೃದ್ಧ ವಿಪ್ರನಾಗಿ ಶಶಿಧರ ಕನ್ಯಾಡಿ, ಶ್ರೀರಾಮನಾಗಿ ಕೋಳ್ಯೂರು ರಾಮಚಂದ್ರ ರಾಯರು ಪಾತ್ರ ನಿರ್ವಹಿಸಿದರು. ಯಕ್ಷಭಾರತಿಯ ಖಾಯಂ ಆಹ್ವಾನಿತ ಸದಸ್ಯರಾದ ಕಶ್ಯಪ್ ಕನ್ಯಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು.
ತಂಡದ ಪ್ರತಿ ಸದಸ್ಯರನ್ನು ಶಾಲು, ಫಲಪುಷ್ಪ, ಸ್ಮರಣಿಕೆ ನೀಡಿ ಮನೆಯವರು ಗೌರವಿಸಿದರು.

ತನ್ನ ಅದ್ಭುತ ಪ್ರತಿಭಾ ಸಾಮರ್ಥ್ಯ, ಪರಿಶ್ರಮದಿಂದ ರಂಗಸ್ಥಳದ ಬೆಳಕಾಗಿ ಅಚ್ಚಳಿಯದೇ ದಾಖಲಾದ ಶ್ರೀ ಕೋಳ್ಯೂರು ರಾಮಚಂದ್ರ ರಾಯರು ವೇಷಧಾರಿಯಾಗಿ, ಅರ್ಥಧಾರಿಯಾಗಿ ಸುಮಾರು ಏಳು ದಶಕದ ಸುದೀರ್ಘ ಅವಧಿಯಲ್ಲಿ ರಂಗದಲ್ಲಿ ಮೆರೆದ ಹಾಗೂ ಸ್ತ್ರೀ ವೇಷಗಳಿಗೆ ಮಾದರಿ ಸದೃಶರಾಗಿರುವ ಶ್ರೀಯುತರ 94 ನೇ ಜನುಮ ದಿನವನ್ನು ಮನೆಯವರು ಬಂಧು ಮಿತ್ರರೊಂದಿಗೆ ಸ್ವಗೃಹದಲ್ಲಿ ಆಚರಿಸಿಕೊಂಡರು. ಈ ಶುಭ ಸಂದರ್ಭದಲ್ಲಿ ಬಹುತೇಕ ಅವರ ಶಿಷ್ಯರೇ ಇರುವ ಯಕ್ಷಭಾರತಿ ತಂಡದಿಂದ ತಾಳಮದ್ದಳೆ ಪ್ರಸ್ತುತಿಯಾಗಿರುವುದು ಆಚರಣೆಗೆ ಮೆರುಗು ನೀಡಿತು.

Related posts

ಇಂದಬೆಟ್ಟು : ಮಾತೃಶ್ರೀ ಮುಗೇರ ಸೇವಾ ಸಂಘದಿಂದ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ ರೋಟರಿ ಕುಟುಂಬ ಸಮ್ಮಿಲನದಲ್ಲಿ ರೋಟರಿ ಕ್ಲಬ್ ಸಾಧನೆಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಂದ ಶ್ಲಾಘನೆ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ಸಂಸ್ಥೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ಸಂಘ ಪರಿವಾರದ ಹಿರಿಯ ಕಾರ್ಯಕರ್ತ ಕನ್ಯಾಡಿ ಬಿ ಸುಬ್ರಹ್ಮಣ್ಯ ರಾವ್ ನಿಧನ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜು ಎದುರು ಸ್ಕೂಟಿ ಮತ್ತು ಗೂಡ್ಸ್ ಲಾರಿ ಡಿಕ್ಕಿ

Suddi Udaya

ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಕಾರ್ಯಕಾರಿ ಸಮಿತಿಯ ಸಹಮಿಲನ

Suddi Udaya
error: Content is protected !!