22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ರೋಟರೀ ಕ್ಲಬ್ ನಿಂದ ರೂ. 40 ಲಕ್ಷ ಮೌಲ್ಯದ ಕೊಡುಗೆ

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರೊ ಪ್ರಕಾಶ ಪ್ರಭು ರವರ ಮುಂದಾಳತ್ವದಲ್ಲಿ, ಕ್ಯಾನ್ ಫಿನ್ ಹೋಮ್ ಲಿಮಿಟೆಡ್ ಹಾಗೂ ಬೆಂಗಳೂರು ರೋಟರಿ ಕ್ಲಬ್ ಇಂದಿರಾ ನಗರ ಇವರ ಸಹಕಾರದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿಲ್ಲೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಯಲು ಇಲ್ಲಿ ತಲಾ ರೂ.12 ಲಕ್ಷ ಮೌಲ್ಯದ ಅತ್ಯಾಧುನಿಕ ಶೌಚಾಲಯ ಮತ್ತು ಪ್ರಭಾಕರ ಭಟ್ ಕಲ್ಲಡ್ಕ ಇವರು ನಡೆಸುತ್ತಿರುವ ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಹೈಸ್ಕೂಲಿಗೆ 33 ಕಂಪ್ಯೂಟರ್ ಸಹಿತ ಸುಮಾರು 16.5 ಲಕ್ಷ ಮೌಲ್ಯದ ಕಂಪ್ಯೂಟರ್ ಲ್ಯಾಬ್ ನ್ನು ಹಸ್ತಾಂತರ ಮಾಡಲಾಯಿತು.

ಕ್ಯಾನ್ ಫಿನ್ ಹೋಮ್ಸನ ಡಿಜಿಎಮ್ ಪ್ರಶಾಂತ ಜೋಷಿಯವರು ಮೊದಲ ಎರಡು ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿದರು. ಕಂಪ್ಯೂಟರ್ ಲ್ಯಾಬ್ ಉದ್ಛಾಟನ ಕಾರ್ಯಕ್ರಮವನ್ನು ಪ್ರಭಾಕರ ಭಟ್ ಕಲ್ಲಡ್ಕ ರವರು ದೀಪ ಬೆಳಗಿಸಿ ಉದ್ಛಾಟನೆ ಮಾಡಿದರು. ಪ್ರಶಾಂತ ಜೋಷಿಯವರು AI ನಂತಹ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ ಕಂಪ್ಯೂಟರ್ ಗಳನ್ನು ಹಳ್ಳಿ ಶಾಲೆಗಳಿಗೆ ಒದಗಿಸುವುದರಿಂದ ಅವರು ಪೇಟೆ ಶಾಲೆಯ ಮಕ್ಕಳನ್ನೂ ಮೀರುವಂತ ಸಾಧನೆ ಮಾಡಲು ಶಕ್ತರು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ. ಎ ಜಯಕುಮಾರ್ ಶೆಟ್ಟಿ, ರೋಟರಿ ಕ್ಲಬ್ ಟ್ರಸ್ಟ ಅಧ್ಯಕ್ಷ ರೊ. ಶ್ರೀಕಾಂತ ಕಾಮತ್, ಕಾರ್ಯದರ್ಶಿ ಡಾ.ಎಮ್ ಎಮ್ ದಯಾಕರ್, ಸ್ಕಾಲರ್ ಶಿಪ್ ಮತ್ತು ಪ್ರಾಜೆಕ್ಟ ಚೆಯರ್ ಮ್ಯಾನ್ ರೊ.ಅಬುಬಕ್ಕರ್ ಯು. ಎಚ್, ಮಾಜಿ ಅಧ್ಯಕ್ಷರುಗಳಾದ ರೊ. ಪೂರಣ್ ವರ್ಮ, ಮೇಜರ್ ಜನರಲ್ ಎಂ ವಿ ಭಟ್, ಅನಂತ್ ಭಟ್ ಮಚ್ಚಿಮಲೆ, ಸದಸ್ಯರುಗಳಾದ ಸಂದೇಶ ರಾವ್, ಶ್ರೀಧರ್ ಕೆ ವಿ, ವಿದ್ಯಾಕುಮಾರ್, ಧನಂಜಯ್ ರಾವ್,ಡಾ ಶಶಿಧರ ಡೋಂಗ್ರೆ, ಶ್ರವಣ ಕಾಂತಾಜೆ, ಡಾ. ರಾಘವೇಂದ್ರ ಪಿದಮಲೆ ಭಾಗವಹಿಸಿದರು.

Related posts

ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ ಉದ್ಘಾಟನೆ

Suddi Udaya

ಅ.2 ರಂದು “ಪುರ್ಸ ಕಟ್ಟುನ ಇನಿ- ಕೋಡೆ – ಎಲ್ಲೆ” ಸಾಕ್ಷ ಚಿತ್ರ ಬಿಡುಗಡೆ

Suddi Udaya

ಮಿತ್ತಬಾಗಿಲು ಬಿ.ಕೆ ದೇವರಾಯರಿಗೆ ರೈತಪೀಠ ಪ್ರಶಸ್ತಿ

Suddi Udaya

ಕಾರಂದೂರು ಮನೆತನದ ಹಿರಿಯರು, ಪಡುಪಾಲ್ಟಾಲು ದಿ. ಪದ್ಮ ಪೂಜಾರಿಯವರ ಪತ್ನಿ ಶ್ರೀಮತಿ ಲಕ್ಷ್ಮೀ ನಿಧನ

Suddi Udaya

ವೇಣೂರು: ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

Suddi Udaya

ಕೊಲ್ಲಿ: ಶ್ರೀ ದುರ್ಗಾ ಬ್ಯೂಟಿಪಾರ್ಲರ್ ಶುಭಾರಂಭ

Suddi Udaya
error: Content is protected !!