22.6 C
ಪುತ್ತೂರು, ಬೆಳ್ತಂಗಡಿ
July 23, 2026
ಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಇಂಡಸ್ ಟವರ್ಸ್ ಕಾರ್ಮಿಕರ ನ್ಯಾಯಕ್ಕಾಗಿ ಭಾರತೀಯ ಮಜ್ದೂರು ಸಂಘದಿಂದ ದ.ಕ ಜಿಲ್ಲಾ ಸಂಸದರಿಗೆ ಮನವಿ

ಮಂಗಳೂರು: ಇಂಡಸ್ ಟವರ್ಸ್ ಲಿಮಿಟೆಡ್‌ನ ಒಪ್ಪಂದ ಆಧಾರಿತ ಕಂಪನಿಯಲ್ಲಿ ಹಲವು ತಿಂಗಳಿಂದ ವೇತನ, ಬೋನಸ್, ESI–PF ಹಾಗೂ ಇತರ ಕಾನೂನುಬದ್ಧ ಸವಲತ್ತುಗಳಿಂದ ವಂಚಿತರಾಗಿರುವ ಸುಮಾರು 150 ಗಿಂತ ಹೆಚ್ಚು ಕಾರ್ಮಿಕರ ಪರವಾಗಿ, ಭಾರತೀಯ ಮಜ್ದೂರು ಸಂಘ – ದಕ್ಷಿಣ ಕನ್ನಡ ಜಿಲ್ಲೆ ಇಂದು ಸಂಸದರ ಕಚೇರಿಗೆ ಭೇಟಿ ನೀಡಿ ಅವರ ಆಪ್ತ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.

ಕಾರ್ಮಿಕರ ಗಂಭೀರ ಸಮಸ್ಯೆಯನ್ನು ವಿವರಿಸಿದ ಮನವಿಯನ್ನು BMS ಜಿಲ್ಲಾ ಸಮಿತಿಯು ಅಧಿಕೃತವಾಗಿ ಸಲ್ಲಿಸಿದ್ದು, ಕಾರ್ಮಿಕರ ವೇತನ ಬಾಕಿ, ಹಕ್ಕು ಉಲ್ಲಂಘನೆಗಳು ಹಾಗೂ ಕಂಪನಿಯ ಅಪರಾಧ ನಿರ್ಲಕ್ಷ್ಯಗಳ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದೆ. ಮನವಿ ಸ್ವೀಕರಿಸಿದ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಾರ್ಮಿಕರ ಹಕ್ಕುಗಳನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಸಂಸದರಿಗೆ ಮನವರಿಕೆ ಮಾಡುತ್ತೇವೆ ಎಂದು ತಿಳಿದರು.

BMS ಜಿಲ್ಲಾ ತಂಡದಿಂದ ತಿಳಿಸಿರುವಂತೆ:“ಕಾರ್ಮಿಕರ ನ್ಯಾಯಕ್ಕಾಗಿ ಹೋರಾಡುವುದು ನಮ್ಮ ಸಂಘಟನೆಯ ನೈತಿಕ ಹಾಗೂ ಕಾನೂನುಬದ್ಧ ಕರ್ತವ್ಯ. ಇಂಡಸ್ ಟವರ್ಸ್ ಕಾರ್ಮಿಕರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಯಾವುದೇ ಪರಿಸ್ಥಿತಿಯಲ್ಲೂ ಸಹಿಸಲಿಕ್ಕಾಗದು. ನ್ಯಾಯ ಸಿಗುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ” ಎಂದು ತಿಳಿಸಿದ್ದಾರೆ.

ಮನವಿ ಸಲ್ಲಿಕೆಯಲ್ಲಿ BMS ಜಿಲ್ಲಾಧ್ಯಕ್ಷರಾದ ಅನಿಲ್ ಕುಮಾರ್ ಯು, BMS ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ ಉಜಿರೆ, ಜಿಲ್ಲಾ ಪ್ರಮುಖರಾದ ನಾರಾಯಣ ಪೂಜಾರಿ, ನವೀನ್ ಬಂಟ್ವಾಳ, BPTMS ಜಿಲ್ಲಾ ಅಧ್ಯಕ್ಷ ಯಶಪಾಲ್, ಕಾರ್ಯದರ್ಶಿ ಶಿವರಾಮ್ ಮತ್ತು BPTMS ಮಜ್ದೂರು ಸಂಘದ ನಾಯಕರೂ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಉಜಿರೆ: ಹದಿಹರೆಯದ ವಿದ್ಯಾರ್ಥಿನಿಯರಿಗೆ ಆರೋಗ್ಯ ಮಾಹಿತಿ

Suddi Udaya

ಕೊಕ್ಕಡ: ‘ಕೆಸರ್ದ ಕಂಡೊಡು ಒಂಜಿ ದಿನ’ ಕ್ರೀಡಾಕೂಟದಲ್ಲಿ ಕಿರಣ್ ಚಂದ್ರ ಡಿ ಪುಷ್ಪಗಿರಿಯವರಿಂದ ವೀಲ್ ಚೆಯರ್ ವಿತರಣೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಮಾಸ್ತಿ ಸಂಸ್ಮರಣ ಕಾರ್ಯಕ್ರಮ

Suddi Udaya

ಉಜಿರೆ ಸಂತ ಅಂತೋಣಿ ಚರ್ಚ್ ಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ನ್ಯಾಯತರ್ಪು ಸ್ವಸಹಾಯ ಸಂಘದ ಲಾಭಾಂಶ ವಿತರಣೆ

Suddi Udaya

ದಯಾ ವಿಶೇಷ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪೋಷಕರ ಸಭೆ

Suddi Udaya
error: Content is protected !!