September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ರಮ್ಯಾ 1ಗ್ರಾಂ ಗೋಲ್ಡ್, ಫ್ಯಾನ್ಸಿ ಮತ್ತು ಫೂಟ್ ವೇ‌ರ್ ನೂತನ ಶೋರೂಮ್ ಶುಭಾರಂಭ

ಉಜಿರೆ: ಇಲ್ಲಿಯ ಕಾಲೇಜು ರಸ್ತೆ ಶಾರ್ವರಿ ಕಾಂಪ್ಲೆಕ್ಸ್ ನಲ್ಲಿ ಮಹಾವೀರ ಸಿಲ್ಕ್ ಬಳಿ ರಮ್ಯಾ 1ಗ್ರಾಂ ಗೋಲ್ಡ್, ಫ್ಯಾನ್ಸಿ ಮತ್ತು ಫೂಟ್ ವೇ‌ರ್ ನೂತನ ಶೋ ರೂಂ ನ. 28ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರಾದ ಶರತ್ ಕೃಷ್ಣ ಪಡುವೆಟ್ನಾಯರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲೀಕ ಕೆ. ಮೋಹನ್ ಕುಮಾರ್,ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷ ಪ್ರಕಾಶ್ ಪ್ರಭು, ಉಜಿರೆ ಮೊಹಿಯ್ಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಉಜಿರೆ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್, ಉದ್ಯಮಿ ಪ್ರವೀಣ್ ಫೆರ್ನಾಂಡಿಸ್‌ ಹಳ್ಳಿಮನೆ, ಸೌತಡ್ಕ ನೈಮಿಷ ವೆಂಚರ್ಸ್ ಉದ್ಯಮಿ ಬಾಲಕೃಷ್ಣ, ಉಜಿರೆ ಗಣೇಶ್ ಆಯಿಲ್ ಮಿಲ್ ಮಾಲಕ ನಾಗರಾಜ್ ಕಾಮತ್, ತೋಟತ್ತಾಡಿ ಎಸ್ ಎನ್ ಡಿ ಪಿ ಅಧ್ಯಕ್ಷ ಸುರೇಶ್‌ ಎಂ. ಎನ್., ಹಿರಿಯರಾದ ವಾಸು ಪೂಜಾರಿ ಮರ್ವದಡಿ,ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳೀರ್ ಬಲಿಪ, ಪ್ರಮಖರಾದ ಚಿದಾನಂದ ಇಡ್ಯ,ಪ್ರಭಾಕರ ಜೈನ್ ಮಹಾವೀರ ಸಿಲ್ಕ್, ವಸಂತ ಶೆಟ್ಟಿ ಶ್ರದ್ದಾ,ಅನಿಲ್ ಕುಮಾರ್ ಅಕ್ಷರ ಪ್ರಿಂಟರ್ಸ್,ರವೀಂದ್ರ ಶೆಟ್ಟಿ ಬಳಂಜ,ವಿಶ್ವ ಭಂಡಾರಿ,ವಿಜಯ ನಿಡಿಗಲ್, ನಾಗರಾಜ್ ಕಾಮತ್ ,ಜೇಸಿ ಆಶಾ ಪ್ರಶಾಂತ್, ಉದ್ಯಮಿ ಪ್ರಶಾಂತ್ ಬೆಳ್ತಂಗಡಿ, ಪ್ರಶಾಂತ್ ಲಾಯಿಲ, ಗಣೇಶ್ ಕಕ್ಕಿಂಜೆ, ಗಣ್ಯರು ಹಿತೈಷಿಗಳು, ಗ್ರಾಹಕರು, ಕುಟುಂಬ ವರ್ಗದವರು ಹಾಜರಿದ್ದು ಶುಭಹಾರೈಸಿದರು.

ಮಾಲಕರಾದ ಬಿಚಿತ್ರಾ ಮತ್ತು ಪ್ರಸಾದ್ ಬಿ.ಎಸ್. ಗಣ್ಯರನ್ನು ಸ್ವಾಗತಿಸಿ, ಗೌರವಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿ, ಪ್ರಸಾದ್ ಬಿ. ಎಸ್. ವಂದಿಸಿದರು.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ವಿವಿಧ ಕ್ಷೇತ್ರದ ಮಹಿಳಾ ಸಾಧಕರಿಗೆ ಸನ್ಮಾನ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಮಿತ್ತಬಾಗಿಲು ಗ್ರಾ.ಪಂ. ಮಾಜಿ ಸದಸ್ಯೆ ನಂದಾರು ನಿಧನ

Suddi Udaya

ಎ.30-ಮೇ.3: ಮಾನ್ಯ ಸತ್ಯಚಾವಡಿ ತರವಾಡು ಮನೆಯ ಗೃಹಪ್ರವೇಶ: ಸ್ಥಳ ದೇವತಾ ಸಾನಿಧ್ಯಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಚಪ್ಪರ ಮೂಹೂರ್ತ

Suddi Udaya

ನವೀನ್ ನೆರಿಯ ವಿರುದ್ದ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣ‌ ವಜಾಗೊಳಿಸಿದ ಹೈಕೋರ್ಟ್

Suddi Udaya

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಪ್ರಾಪ್ತಿ ಎಂ ಗೌಡರಿಗೆ ಸನ್ಮಾನ

Suddi Udaya
error: Content is protected !!