July 23, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಕರುನಾಡು Got ಟ್ಯಾಲೆಂಟ್ ರಿಯಾಲಿಟಿ ಶೋ ಗೆ ಆಯ್ಕೆಯಾದ ಉಜಿರೆಯ ಹಿಪ್-ಬಾಯ್ಸ್ ನೃತ್ಯ ತಂಡ

ಉಜಿರೆ: ಕರ್ನಾಟಕದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವ, ಎನ್.ಪಿ ಪ್ರೊಡಕ್ಷನ್ ನಲ್ಲಿ ಸ್ಪಂದನ ಟಿ.ವಿ. ಪ್ರಸ್ತುತಪಡಿಸುವ ರಾಜ್ಯದ ಅತೀ ದೊಡ್ಡ ಮಲ್ಟಿ ಟ್ಯಾಲೆಂಟ್ ರಿಯಾಲಿಟಿ ಶೋ ಕರುನಾಡು Got ಟ್ಯಾಲೆಂಟ್ ನ ಸೀಸನ್ 2 ಕ್ಕೆ ಉಜಿರೆಯ ಹಿಪ್-ಬಾಯ್ಸ್ ಡಾನ್ಸ್ ಕ್ರೀವ್ ತಂಡವು ಆಯ್ಕೆಯಾಗುವ ಮೂಲಕ ಸ್ಥಳೀಯ ಹೆಗ್ಗಳಿಕೆಯನ್ನು ಹೆಚ್ಚಿಸಿದೆ.

ಇತ್ತೀಚೆಗೆ ನಡೆದ ಮೆಗಾ ಆಡಿಷನ್‌ನಲ್ಲಿ ಈ ತಂಡದ ಪ್ರದರ್ಶನ ತೀರ್ಪುಗಾರರ ಮೆಚ್ಚುಗೆ ಗಳಿಸಿದೆ.ಡಿ.6ರಂದು ನಡೆದ ಮೆಗಾ ಆಡಿಷನ್‌ನಲ್ಲಿ HIPBOYZ ಡಾನ್ಸ್ ಕ್ರೀವ್‌ನ ನೃತ್ಯಗಾರ್ತಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ತಂಡದಲ್ಲಿ ಸನ್ಮಿತಾ ಕುಕ್ಕಾವು, ಆಂಜೆಲಿನ್ ಡಿಸೋಜಾ, ದೀಕ್ಷಾ, ಧನ್ವಿ ಭಂಡಾರಿ, ಆಪ್ತ, ಅನ್ವಿತಾ, ರೇಖಾ, ಮನ್ವಿತಾ ಪ್ರಭು, ಧೃತಿ ಮತ್ತು ಸಮನ್ವಿ ಸೇರಿ ಒಟ್ಟು ಹತ್ತು ಪ್ರತಿಭಾವಂತ ನೃತ್ಯಗಾರ್ತಿಯರು ಭಾಗವಹಿಸಿದ್ದರು.

ಅವರ ಆಕರ್ಷಕ ನೃತ್ಯವು ಎಲ್ಲರ ಗಮನ ಸೆಳೆಯಿತು.ತಂಡದ ಈ ಯಶಸ್ಸಿಗೆ ಉಜಿರೆಯ ನೃತ್ಯ ಗುರುಗಳಾದ ಸಹನ್ ಎಮ್.ಎಸ್. ಉಜಿರೆ ಅವರು ಕಾರಣಕರ್ತರಾಗಿದ್ದಾರೆ. ಅವರ ಸೃಜನಾತ್ಮಕ ನೃತ್ಯ ಸಂಯೋಜನೆ ಮತ್ತು ಮಾರ್ಗದರ್ಶನದಲ್ಲಿ ಈ ತಂಡವು ರಿಯಾಲಿಟಿ ಶೋನ ಎರಡನೇ ಹಂತಕ್ಕೆ ಆಯ್ಕೆಯಾಗಿದೆ. ಕರ್ನಾಟಕದ ಪ್ರತಿಷ್ಠಿತ ವೇದಿಕೆಯಲ್ಲಿ ಉಜಿರೆಯ ಪ್ರತಿಭೆಗಳು ಪ್ರಕಾಶಿಸಲು ಸಹನ್ ಅವರ ಪರಿಶ್ರಮ ಬೆನ್ನೆಲುಬಾಗಿದೆ.

Related posts

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ: ಮಡಂತ್ಯಾರು ನಗರದಲ್ಲಿ ಆದ್ದೂರಿಯ ಮೆರವಣಿಗೆ, ಸಾಧಕ 72 ಮಂದಿಗೆ ಕೃಷಿ ಸಿಂಧೂರ ಪ್ರಶಸ್ತಿ ಹಾಗೂ 86ಮಂದಿ ಸಾಧಕರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ

Suddi Udaya

22ನೇ ಮಹಿಳಾ ಆಲ್ ಇಂಡಿಯಾ ಇಂಟರ್ ಝೋನಲ್ ನೆಟ್ಬಾಲ್ ಪಂದ್ಯಾಟ: ಎಸ್ ಡಿ ಎಂ ಕಾಲೇಜಿನ 2 ಕ್ರೀಡಾಪಟುಗಳಿಗೆ ಬೆಳ್ಳಿ ಪದಕ

Suddi Udaya

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ “ಸರಿಗಮಪ ” ವಿನ್ನರ್ ಚನ್ನಪ್ಪ ಭೇಟಿ

Suddi Udaya

ಮೇ. 16 : ತುರ್ತು ಕಾಮಗಾರಿ ಪ್ರಯುಕ್ತ ನಾನಾ ಕಡೆಗಳಲ್ಲಿ ವಿದ್ಯುತ್ ಕಡಿತ

Suddi Udaya

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ತುಳು ಭಾಷಣ ಸ್ಪರ್ಧೆ: ಬೆಳಾಲು ಪ್ರೌಢಶಾಲೆಯ ಕು. ಕೀರ್ತನಾ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಗುರುವಾಯನಕೆರೆ: ಅಗಲಿದ ದಿ| ನಾರಾಯಣ ಆಚಾರ್ಯ ರವರ ಮನೆಗೆ ಶಾಸಕ ಹರೀಶ್ ಪೂಂಜ ಹಾಗೂ ಎಂಎಲ್ಸಿ ಅಭ್ಯರ್ಥಿ ಕಿಶೋರ್ ಕುಮಾರ್ ಭೇಟಿ, ಸಾಂತ್ವಾನ

Suddi Udaya
error: Content is protected !!