September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಜೀವ ಬೆದರಿಕೆ ಆರೋಪ : ಕೆ.ಎನ್ ಗೌಡರಿಂದ ಠಾಣೆಗೆ ದೂರು

ಬೆಳ್ತಂಗಡಿ: ನಾಳ ದೇವಾಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ. ಅವರು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ, ಕಳಿಯ ಗ್ರಾಮದ `ದೇವಿ ಕೃಪಾ’ ಪೆಲತ್ತಳಿಕೆ ನಿವಾಸಿ, ಉದಯವಾಣಿ ವರದಿಗಾರ ಕೆ.ಎನ್. ಗೌಡ ಅವರು ಡಿ.10ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಡಿ.3ರಂದು ನಾಳ ದೇವಸ್ಥಾನದಲ್ಲಿ ನಡೆದ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ 2027ನೇ ವರ್ಷದಲ್ಲಿ ನಡೆಸಲು ಉದ್ದೇಶಿಸಿರುವ ಸಾರ್ವಜನಿಕ ಮತ್ತು ಭಕ್ತರ ಸಭೆಯಲ್ಲಿ ಊರಿನ ಭಕ್ತನಾಗಿ ಹಾಗೂ ಪತ್ರಿಕೆ ವರದಿಗಾರನಾಗಿ ಭಾಗವಹಿಸಿರುತ್ತೇನೆ. ಅದರಂತೆಯೇ ಅ ದಿನ ಸಭೆಯಲ್ಲಿ ನಡೆದಿರುವ ವಿಷಯವನ್ನು ಅಧರಿಸಿ ನೈಜ ವರದಿಯನ್ನು ಕಳುಹಿಸಿ ಕೊಟ್ಟಿದ್ದು, ಅದು ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಪತ್ರಿಕೆಯಲ್ಲಿ ಬಂದ ಬಳಿಕ ಡಿ.9 ರಂದು ಶ್ರೀ ಕ್ಷೇತ್ರದ ವಾಟ್ಸಫ್ ಗ್ರೂಪ್‌ನಿಂದ ನನ್ನ ಮೊಬೈಲ್ ಸಂಖ್ಯೆಯನ್ನು ರಿಮೂವ್ ಮಾಡಿದ್ದನ್ನು ವಿಚಾರಿಸಿದಾಗ ಮೊಬೈಲ್ ಪೋನ್ ಮೂಲಕ ಅವಾಚ್ಯ ಶಬ್ದಗಳಲ್ಲಿ ನಿಂದನೆ ಮಾಡಿ, ವಾಯ್ಸ್ ರೆಕಾರ್ಡ್ ಕಳುಹಿಸಿ, ನನ್ನ ಪತ್ನಿ, ಮಗಳ ವಿಷಯ ಪ್ರಸ್ತಾಪಿಸಿ ಜೀವ ಬೆದರಿಕೆ ಹಾಕಿರುವುದಾಗಿ ಕೆ.ಎನ್ ಗೌಡ ದೂರಿನಲ್ಲಿ ಆರೋಪಿಸಿದ್ದಾರೆ.

Related posts

ಬಂಗೇರ ಬ್ರಿಗೇಡ್ ಮಾಲಾಡಿ ಪಂಚಾಯತ್ ವ್ಯಾಪ್ತಿಯ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಜೆರಾಲ್ಡ್ ಮೋರಸ್, ಪ್ರ. ಕಾರ್ಯದರ್ಶಿಯಾಗಿ ಪ್ರಶಾಂತ್ ಆಯ್ಕೆ

Suddi Udaya

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಹೆಗ್ಗಡೆ ಭಾಗಿ

Suddi Udaya

ಕುಂಭಶ್ರೀ ಪಿಯು ಕಾಲೇಜಿನಿಂದ “ಆಸರೆ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ – 2026” ಯಶಸ್ವಿ ಆಯೋಜನೆ

Suddi Udaya

ತಿಮರೋಡಿ ವಿರುದ್ದ ಅಕ್ರಮ ಶಸ್ತ್ರಾಸ್ತ್ರ ಪ್ರಕರಣ; ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ

Suddi Udaya

ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ‘ಮಾನ್ಸೂನ್ ಸೇಲ್’ – ಚಿನ್ನದ ಆಭರಣಗಳು 0%, VA/ಮೇಕಿಂಗ್ ನಲ್ಲಿ 100% ರಿಯಾಯಿತಿ

Suddi Udaya

ಮುಂಡಾಜೆ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮ

Suddi Udaya
error: Content is protected !!