ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಪವರ್ ಆನ್ ಸಂಸ್ಥೆಯಿಂದ ಉದ್ಯಮದೊಂದಿಗೆ ಸಮಾಜಮುಖಿ ಸೇವೆ:

ಬೆಳ್ತಂಗಡಿ:ಬೆಳ್ತಂಗಡಿಯಲ್ಲಿ ಕಳೆದ 10 ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಒಳ್ಳೆಯ ಸೇವೆ ನೀಡುತ್ತಿರುವ ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಸ್ಕೀಮ್ವನ ಸೀಸನ್ 6ರ ಯಶಸ್ವಿ ಮುಕ್ತಾಯದೊಂದಿಗೆ ಮತ್ತೆ ಸೀಸನ್ 7 ರ ಜೊತೆಗೆ ನಿಮ್ಮಮುಂದೆ ಬರಲಿದ್ದೇವೆ ಎಂದು ಪವರ್ ಆನ್ ಸಂಸ್ಥೆಯ ಮಾಲಕರಾದ ಶೀತಲ್ ಜೈನ್ ತಿಳಿಸಿದರು.

ನಮ್ಮ ಸಂಸ್ಥೆಯ ಮಹತ್ತರವಾದ ಆಶಯವನ್ನು ನಿಮಗೆ ಹೇಳಲೇಬೇಕು ನಾವು ಯಾವ ಯೋಜನೆಯನ್ನು ಶುರು ಮಾಡಿದರೂ ಅದನ್ನು ಮಧ್ಯದಲ್ಲಿ ನಿಲ್ಲಿಸುವಂತಹ ಯಾವುದೇ ಯೋಚನೆ ನಮ್ಮಲ್ಲಿಲ್ಲ ಮತ್ತು ಹಾಗೆ ಯಾವತ್ತೂ ಆಗೋದಿಲ್ಲ.ಪ್ರತೀ ಸೀಸನನ್ನು ಗ್ರಾಹಕರ ಸಂಪೂರ್ಣ ವಿಶ್ವಾಸದೊಂದಿಗೆ, ನಿಗದಿತ ರೀತಿಯಲ್ಲಿ ಮುಗಿಸಿ, ಮತ್ತೆ ಹೊಸ ಯೋಜನೆಯನ್ನು ಆರಂಭಿಸುತ್ತಿದ್ದೇವೆ. ಅವಧಿ ಹೆಚ್ಚಾಯಿತು, ದೊಡ್ಡ ದೊಡ್ಡ ಬಹುಮಾನ ಇಲ್ಲ ಅಂತ ನಿಮ್ಮಲ್ಲೊಂದು ಪ್ರಶ್ನೆ ಇರಬಹುದು. ಆದರೆ ಬೆಳ್ತಂಗಡಿ ಮತ್ತು ಗ್ರಾಮೀಣ ಭಾಗದ ಜನರ ನಿಜವಾದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು,ಭಾಗವಹಿಸುವ ಸದಸ್ಯರ ಸಂಖ್ಯೆಯನ್ನು ನೋಡಿ ನಮ್ಮ ಯೋಜನೆಯಲ್ಲಿ ಬಹುಮಾನಗಳನ್ನು ನಿಗದಿ ಪಡಿಸುತ್ತೇವೆ. ಪ್ಲಾಟ್, ಕಾರ್ ಗಳಂತಹ ದೊಡ್ಡ ಗಿಫ್ಟ್ ಇಡುವುದಿಲ್ಲ ಅದಕ್ಕೆ ಕಾರಣ- ಈ ರೀತಿಯ ದೊಡ್ಡ ಗಿಫ್ಟ್ ಗಳು ಕೇವಲ ಒಬ್ಬರಿಗೆ ಹಂಚಿ ಹೋಗುವುದೇ ಆಗಿದೆ. ಹಾಗಾಗಿ, ಅದೇ ಮೌಲ್ಯದ ಬೇರೆ ಗುಣಮಟ್ಟದ ವಸ್ತುಗಳನ್ನು ಹೆಚ್ಚಿನ ಜನರಿಗೆ ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡುವುದೇ ನಮ್ಮಗುರಿಯಾಗಿದೆ ಎಂದವರು ತಿಳಿಸಿದ್ದಾರೆ.

ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ಸಾಮಾನ್ಯ ಕುಟುಂಬಗಳುಗೂ ಉಪಯೋಗವಾಗುವಂತಹ ಯೋಜನೆಯನ್ನು ರೂಪಿಸುತ್ತೇವೆ. ಜನಸಾಮಾನ್ಯರಿಗೆ ಯಾವುದೇ ಒತ್ತಡವಿಲ್ಲದೆ ಸೇರಬಹುದಾದ ಹಾಗೂ ನಮ್ಮಿಂದ ಮುಂದುವರಿಸಿಕೊಂಡು ಹೋಗಬಹುದಾದ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ನಮ್ಮ ಉದ್ದೇಶ – ಹೆಚ್ಚು ಜನ ಭಾಗವಹಿಸಬೇಕು, ಪ್ರತಿಯೊಬ್ಬರೂ ಗೆಲ್ಲುವ ಅವಕಾಶ ಹೊಂದಿರಬೇಕು! ಆದ್ದರಿಂದ ಸೀಸನ್ 7 ರಲ್ಲಿ ಕೂಡ ಹಾಗೇಯೇ ಯೋಚಿಸಿದ್ದೇವೆ. ಜನರ ವಿಶ್ವಾಸವೇ ಪವರ್ ಆನ್ ನ ಶಕ್ತಿ. ನಾವು ಆರಂಬಿಸುತ್ತಿರುವ ಲಕ್ಕಿ ಸ್ಟಾರ್ ಸ್ಕೀಂ ಸೀಸನ್ 7-ನಿಮಗಾಗಿ, ನಿಮ್ಮ ಮನೆಯ ಸಂತೋಷಕ್ಕಾಗಿ, ನಿಮ್ಮ ವಿಶ್ವಾಸಕ್ಕೆ ನಮ್ಮಸೇವೆ ಎಂದು ಶೀತಲ್ ಜೈನ್ ತಿಳಿಸಿದರು.

Related posts

ಸೌಜನ್ಯಳಿಗೆ ನ್ಯಾಯ ಸಿಗಲೆಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಶಾಸಕ ಹರೀಶ್ ಪೂಂಜರಿಂದ ಕುತ್ಯಾರು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

ವೀರಶೈವ ಲಿಂಗಾಯತ ಸಂಘದ ವಾರ್ಷಿಕೋತ್ಸವ – ಸಾಧಕರಿಗೆ-ನಿವೃತ್ತರಿಗೆ ಸನ್ಮಾನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ – ಪದಗ್ರಹಣ ಸಮಾರಂಭ

Suddi Udaya

ತೆಂಕಕಾರಂದೂರು: ಕಾರು ಹಾಗೂ ಬೈಕ್ ನಡುವೆ ಅಪಘಾತ

Suddi Udaya

ನವೀನ್ ನೆರಿಯ ವಿರುದ್ದ ದಾಖಲಾಗಿದ್ದ ದ್ವೇಷ ಭಾಷಣ ಪ್ರಕರಣ‌ ವಜಾಗೊಳಿಸಿದ ಹೈಕೋರ್ಟ್

Suddi Udaya

ಶಿಶಿಲ ಸ.ಹಿ.ಪ್ರಾ. ಶಾಲಾ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ವತಿಯಿಂದ ರೂ.1.50ಲಕ್ಷ ಸಹಾಯಧನ

Suddi Udaya

ರಕ್ತೇಶ್ವರಿ ಪದವು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಾಗವೇಣಿ ಕೆ.ಎಸ್. ರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!