August 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ : 10 ತಿಂಗಳು ಕಳೆದರೂ ಕಾರ್ಮಿಕರಿಗೆ ಸಿಗದ ಕೂಲಿ, ಬಾಡಿಗೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಡಲಾಗಿದೆ ಎನ್ನಲಾದ ಪ್ರಕರಣದ ತನಿಖೆಗಾಗಿ ಎಸ್‌ಐಟಿ ಕಾರ್ಯಾಚರಣೆ ಮುಗಿದು 10 ತಿಂಗಳು ಕಳೆದರೂ ಅಲ್ಲಿ ದುಡಿದ ಕಾರ್ಮಿಕರಿಗೆ, ಜೆಸಿಬಿ ಒದಗಿಸಿದವರಿಗೆ ಹಣ ಪಾವತಿಯಾಗಿಲ್ಲ.ಬಿಲ್ ಪಾವತಿಗಾಗಿ ಅಲೆದಾಡುವಂತಾಗಿದೆ ಎಸ್‌ಐಟಿ 2025ರ ಜು. 28ರಂದು ಚಿನ್ನಯ್ಯನನ್ನು ಕರೆತಂದು ಸ್ಥಳ ಗುರುತಿಸಿತ್ತು. ಜು. 28ರಿಂದ ಆ. 13ರ ವರೆಗೆ ಪ್ರತಿದಿನ 10-12 ಕಾರ್ಮಿಕರು ಕೆಲಸ ಮಾಡಿದ್ದು, ಸುಮಾರು 80,000 ರೂ. ನೀಡಬೇಕಿದೆ.

ಜು. 29ರಿಂದ ಆ. 13ರವರೆಗೆ ಒಟ್ಟು 17 ಪಾಯಿಂಟ್‌ಗಳಲ್ಲಿ ಕಾರ್ಮಿಕರಿಂದ ಉತ್ಪನನ ನಡೆಸಲಾಗಿತ್ತು. ಜತೆಗೆ ಮಣ್ಣು ಅಗೆಯಲು ಜೆಸಿಬಿ ಬಳಸಲಾಗಿತ್ತು. 13 ಪಾಯಿಂಟ್‌ಗಳಲ್ಲಿ ಜೆಸಿಬಿ ಕೆಲಸ ಮಾಡಿತ್ತು. 13ನೇ ಪಾಯಿಂಟ್ ದೊಡ್ಡದಾಗಿ ಅಗೆದ ಕಾರಣ ಸಣ್ಣ -ದೊಡ್ಡ ಎರಡೂ ಜೆಸಿಬಿ ಬಳಸಲಾಗಿತ್ತು. ಹೆಚ್ಚಿನ ಕಾರ್ಯಾಚರಣೆಗೆ ಹೆಚ್ಚುವರಿ ಜೆಸಿಬಿಗಳನ್ನು ಕಾಯ್ದಿರಿಸಲಾಗಿತ್ತು. ಪ್ರಸ್ತುತ ಜೆಸಿಬಿ ಕೆಲಸ ಮಾಡಿದ ಗಂಟೆಗೆ ಮಾತ್ರ ಬಿಲ್ (71,500 ರೂ.) ಸಲ್ಲಿಸಲಾಗಿದೆ. ಶಾಮಿಯಾನ, ಹಾರೆ, ಪಿಕ್ಕಾಸು, ಕುಡಿಯುವ ನೀರು ಹಾಗೂ ವಾಹನ ಬಾಡಿಗೆ ಸಹಿತ ಒಟ್ಟು ಬಾಕಿ ಮೊತ್ತ 2 ಲಕ್ಷ ರೂ. ದಾಟಿದೆ.

ಎಸ್.ಐಟಿ ಸೂಚನೆಯಂತೆ ಧರ್ಮಸ್ಥಳ ಗ್ರಾಮ ಪಂಚಾಯತ್, ಕಾರ್ಮಿ ಕರನ್ನು ಹಾಗೂ ಜೆಸಿಬಿ ಒದಗಿಸಿತ್ತು. ನಿಯಮದಂತೆ ಪಂಚಾಯತ್ ನಿಧಿಯನ್ನು ಎಸ್ ಐಟಿ ಕೆಲಸಕ್ಕೆ ಬಳಸುವಂತಿಲ್ಲ ಎನ್ನಲಾಗಿದೆ. ಇತ್ತ ಎಸ್‌ಐಟಿ ಕಚೇರಿಗೆ ಹೋದರೆ ‘ಬಿಲ್ ಕಳುಹಿಸಲಾಗಿದೆ’ ಎಂಬ ಹಾರಿಕೆ ಉತ್ತರ ಸಿಗುತ್ತಿದೆ. ಇದರಿಂದ ಕಾರ್ಮಿಕರು ಮತ್ತಿತರರು ಬಾಕಿ ಬಿಲ್ ಅನ್ನು ಯಾರಲ್ಲಿ ಕೇಳುವುದು ಎನ್ನುವ ಗೊಂದಲಕ್ಕೆ ಸಿಲುಕಿದ್ದಾರೆ.

ಬಿಲ್‌ ಪಾವತಿ ಬಾಕಿ ಇರುವ ಬಗ್ಗೆ ನನಗೆ ಮಾಹಿತಿಯಿಲ್ಲ, ನಾವು ತನಿಖೆಯನ್ನಷ್ಟೇ ನಡೆಸುತ್ತೇವೆ. ಆದರೂ ಈ ವಿಷಯದ ಬಗ್ಗೆ ಪರಿಶೀಲಿಸುವೆ. – ಪ್ರಣಬ್ ಮೊಹಾಂತಿ, ಎಸ್‌ಐಟಿ ಮುಖ್ಯಸ್ಥರು

Related posts

ಬೆಳ್ತಂಗಡಿ ಮುಳಿಯದಲ್ಲಿ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ,ಮುದ್ದು ಮಕ್ಕಳಾಟವೇ ಕೃಷ್ಣ ಆಟ: ನೂರಾರು ಕೃಷ್ಣವೇಷ ಸ್ಪರ್ಧಿಗಳು ಭಾಗಿ,

Suddi Udaya

ಉಜಿರೆ: ಎಸ್.ಡಿ.ಎಂ ಪ ಪೂ ಕಾಲೇಜಿನಲ್ಲಿ ಆಟಿದ ಗೌಜಿ ಕಾರ್ಯಕ್ರಮ

Suddi Udaya

ಎ.20: ಸಿಬಿಕೆ ಕಪ್-2025 ಹೊನಲು ಬೆಳಕಿನ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟ

Suddi Udaya

ಮುಂಡಾಜೆ ಪ. ಪೂ. ಕಾಲೇಜಿನಲ್ಲಿ ಪೋಷಕರ ಸಭೆ

Suddi Udaya

ಉಜಿರೆ: ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜು ಎನ್ ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya

ಮಡಂತ್ಯಾರು: ಬಂಗೇರಕಟ್ಟೆ ನೆತ್ತರ ರಸ್ತೆಯ ದುರಸ್ತಿಯ ಬಗ್ಗೆ ಕಾಲ್ನಡಿಗೆಯಲ್ಲಿ ಪ್ರತಿಭಟನೆ

Suddi Udaya
error: Content is protected !!