
ಅಳದಂಗಡಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸೇವಾ ಭಾರತಿ ಕನ್ಯಾಡಿ ಇವರ ಸೇವಾ ಕಾರ್ಯಕ್ಕೆ ರೂ 10 ಸಾವಿರ, ನಮ ಮಾತೇರ್ಲ ಒಂಜೇ ಕಲಾತಂಡ ಅಳದಂಗಡಿ ಇವರಿಗೆ ರೂ 5 ಸಾವಿರ ಹಾಗೂ ಮೃತ ದೂಜ ಬೊಟ್ಟದಗುಡ್ಡೆ ಬಳಂಜರವರ ಮರಣ ಸಾಂತ್ವನ ನಿಧಿಯನ್ನು ಅವರ ಮಗಳು ಸುಮಿತ್ರರವರಿಗೆ ರೂ. 10 ಸಾವಿರವನ್ನು ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸಿಇಓ ಮೀರಾ, ಸತೀಶ್ ಕೆ ಹಾಗೂ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.











