ಉಜಿರೆ: ಉಜಿರೆ ಎಸ್.ಡಿ.ಯಂ ಕಾಲೇಜಿನ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಶ್ರೀಕೃಷ್ಣ ಲೀಲೆ-ಕಂಸ ವಧೆ ಇಂಗ್ಲೀಷ್ ತಾಳಮದ್ದಳೆಯು ಡಿ.31ರಂದು ಎಸ್.ಡಿ.ಯಂ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಜರುಗಿತು.

ಎಸ್.ಡಿ.ಎಂ ಕಾಲೇಜು ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ್ ಪಿ ದೀಪಪ್ರಜ್ವಲನೆಗೊಳಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ IQAC ಸಂಯೋಜಕ ಗಜಾನನ ಆರ್ ಭಟ್, ಸಾಂಸ್ಕೃತಿಕ ಸಮಿತಿ ಸಂಯೋಜಕ ಡಾ. ನಾಗಣ್ಣ, ಯಕ್ಷಗಾನ ಸಂಯೋಜಕರಾದ ಶ್ರೇಯಸ್ ಪಾಳಂದೆ, ಸಚಿನ್ ಹೆಬ್ಬಾರ್, ವಿದ್ಯಾರ್ಥಿ ಸಂಯೋಜಕರಾದ ಮನಸ್ವಿ, ಅಮೋಘ ಶಂಕರ ಉಪಸ್ಥಿತರಿದ್ದರು.
ಭಾಗವತರಾಗಿ ಸಿಂಚನ ಮೂಡುಕೋಡಿ, ಚೆಂಡೆಯಲ್ಲಿ ಶ್ರೇಯಸ್ ಪಾಳಂದೆ, ಮದ್ದಳೆಯಲ್ಲಿ ಸುಧನ್ವ, ಮುಮ್ಮೇಳದಲ್ಲಿ ಮನಸ್ವಿ (ಪೂತನಿ), ಅನನ್ಯ ಶೆಟ್ಟಿ (ಮಾಯಾ ಪೂತನಿ), ಮೌಲ್ಯ ಎಸ್. ಜೈನ್ (ಶ್ರೀಕೃಷ್ಣ), ಅಂಕಿತ ಬಲರಾಮ, ತೇಜಸ್ (ವಿಜಯ), ನಿರಂಜನ್ (ಶಕಟ), ವರುಣ್ (ಕಂಸ) ಪಾತ್ರ ನಿರ್ವಹಿಸುತ್ತಾರೆ.
ಡಾ. ಶ್ರುತಕೀರ್ತಿರಾಜ್ ಜೈನ್ ಅರ್ಥರಚನೆ, ಅರುಣ್ ಕುಮಾರ್ ಧರ್ಮಸ್ಥಳ ನಿರ್ದೇಶಿಸುತ್ತಾರೆ. ಪವಿತ್ರ ಜೈನ್ ನಿರೂಪಿಸಿದರು. ಸಿಂಚನ, ಸಾಕ್ಷ, ಯಶ್ಮಿತಾ, ಶ್ವೇತ ಪ್ರಾರ್ಥಿಸಿದರು. ಸಿಂಚನ ಸ್ವಾಗತಿಸಿದರು. ಅಮೋಘ ಶಂಕರ ವಂದಿಸಿದರು.











