22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಸಾವ್ಯ: ಶುಭೋದಯ ಯುವಕ ಮಂಡಲದಿಂದ ಸಾಮೂಹಿಕ ಶ್ರೀ ಶನೈಶ್ವರ ಪೂಜೆ

ಸಾವ್ಯ: ಶುಭೋದಯ ಯುವಕ ಮಂಡಲ ಇದರ ವತಿಯಿಂದ ನಡೆದ 12ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ವರ ಪೂಜೆಯು ಎ.22 ರಂದು ಕೆಳ ಕಾಶಿಪಟ್ಣ ಅನಂತ ಅಶ್ರಣ್ಣ ರ ನೇತೃತ್ವದಲ್ಲಿ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಆಶೀರ್ವಚನ ನೀಡಿದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಧರ್ಮದ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.

ನಂತರ ಧಾರ್ಮಿಕ ಪ್ರವಚನ ಮಾಡಿದ ಅಕ್ಷಯ ಗೋಖಲೆ ಅವರು ಮಾತನಾಡಿ ಸಂಘಟನೆಯ ಅಗತ್ಯತೆ, ಧರ್ಮದ ಉಳಿವಿಗಾಗಿ ಮಹಿಳೆಯರು ಮಾಡಬೇಕಾದ ಕರ್ತವ್ಯದ ಬಗ್ಗೆ ಹೇಳಿ ಭಾರತ ದೇಶದ ನೆಲ ಜಲ ಸಂಸ್ಕೃತಿ ಯ ಬಗ್ಗೆ ಹೇಳಿದರು.

ಸಭಾ ವೇದಿಕೆಯ ಅಧ್ಯಕ್ಷ ತೆಯನ್ನು ಯುವಕ ಮಂಡಲ ದ ಅಧ್ಯಕ್ಷರಾದ ರಕ್ಷಿತ್ ಆರ್ ಗುರುರಕ್ಷ ವಹಿಸಿದ್ದರು.
ವೇದಿಕೆಯಲ್ಲಿ ಯುವಕ ಮಂಡಲ ಗೌರವ ಅಧ್ಯಕ್ಷ ಶ್ರೀಧರ ಭೂತಡ್ಕ, ಕ್ಷೇಮ ಕ್ಲಿನಿಕ್ ನ ಶ್ರೀ ವಿಷ್ಣು ಕುಮಾರ್ ಹೆಗ್ಡೆ
ಸರಕಾರಿ ವಕೀಲರಾದ ಸತೀಶ್ ಕೆ, ಉಪಸ್ಥಿತರಿದ್ದರು.

ವಿನೀತ್ ಕೋಟ್ಯಾನ್ ಸ್ವಾಗತಿಸಿ, ಹರೀಶ್ ಹೆಗ್ಡೆ ವಂದಿಸಿದರು.
ಚೈತನ್ಯ ಕಲಾವಿದರು ಬೈಲೂರು ಇವರಿಂದ ವಾರ್ಡ್ ನಂಬರ್ 2 ನಾಟಕ ನಡೆಯಿತು.

Related posts

ತೆಂಕಕಾರಂದೂರು ಶ್ರೀ ವಿಷ್ಣು ಯಕ್ಷಗಾನ ತಂಡದಿಂದ ಯಕ್ಷಗಾನ ಮಕ್ಕಳಿಗೆ ಸಮವಸ್ತ್ರ ವಿತರಣೆ

Suddi Udaya

ಪಡoಗಡಿ-ಹಚ್ಚಾಡಿ -ಬಳಂಜ ಸಂಪರ್ಕ ಕಿರುಸೇತುವೆಯಲ್ಲಿ ತ್ಯಾಜ್ಯ ಶೇಖರಣೆ

Suddi Udaya

ಡೆಂಗ್ಯೂ ವಿರೋಧ ಮಾಸಾಚಾರಣೆ ಅಂಗವಾಗಿ ತಾಲೂಕಿನ ಗ್ರಾ.ಪಂ. ಗಳ ಪಿಡಿಒ, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿ

Suddi Udaya

ಕರಾಯ: ಡಾಕ್ಯೂಮೆಂಟ್ ರೈಟರ್‌ಗೆ ಜೀವ ಬೆದರಿಕೆ : ಪ್ರಕರಣ ದಾಖಲು

Suddi Udaya

ಉಜಿರೆ ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಯಕ್ಷಗಾನ ತರಗತಿ ಆರಂಭ

Suddi Udaya

ಸಿಯೋನ್ ಆಶ್ರಮದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!