24 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಸಾವ್ಯ: ಶುಭೋದಯ ಯುವಕ ಮಂಡಲದಿಂದ ಸಾಮೂಹಿಕ ಶ್ರೀ ಶನೈಶ್ವರ ಪೂಜೆ

ಸಾವ್ಯ: ಶುಭೋದಯ ಯುವಕ ಮಂಡಲ ಇದರ ವತಿಯಿಂದ ನಡೆದ 12ನೇ ವರ್ಷದ ಸಾಮೂಹಿಕ ಶ್ರೀ ಶನೈಶ್ವರ ಪೂಜೆಯು ಎ.22 ರಂದು ಕೆಳ ಕಾಶಿಪಟ್ಣ ಅನಂತ ಅಶ್ರಣ್ಣ ರ ನೇತೃತ್ವದಲ್ಲಿ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಆಶೀರ್ವಚನ ನೀಡಿದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಧರ್ಮದ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.

ನಂತರ ಧಾರ್ಮಿಕ ಪ್ರವಚನ ಮಾಡಿದ ಅಕ್ಷಯ ಗೋಖಲೆ ಅವರು ಮಾತನಾಡಿ ಸಂಘಟನೆಯ ಅಗತ್ಯತೆ, ಧರ್ಮದ ಉಳಿವಿಗಾಗಿ ಮಹಿಳೆಯರು ಮಾಡಬೇಕಾದ ಕರ್ತವ್ಯದ ಬಗ್ಗೆ ಹೇಳಿ ಭಾರತ ದೇಶದ ನೆಲ ಜಲ ಸಂಸ್ಕೃತಿ ಯ ಬಗ್ಗೆ ಹೇಳಿದರು.

ಸಭಾ ವೇದಿಕೆಯ ಅಧ್ಯಕ್ಷ ತೆಯನ್ನು ಯುವಕ ಮಂಡಲ ದ ಅಧ್ಯಕ್ಷರಾದ ರಕ್ಷಿತ್ ಆರ್ ಗುರುರಕ್ಷ ವಹಿಸಿದ್ದರು.
ವೇದಿಕೆಯಲ್ಲಿ ಯುವಕ ಮಂಡಲ ಗೌರವ ಅಧ್ಯಕ್ಷ ಶ್ರೀಧರ ಭೂತಡ್ಕ, ಕ್ಷೇಮ ಕ್ಲಿನಿಕ್ ನ ಶ್ರೀ ವಿಷ್ಣು ಕುಮಾರ್ ಹೆಗ್ಡೆ
ಸರಕಾರಿ ವಕೀಲರಾದ ಸತೀಶ್ ಕೆ, ಉಪಸ್ಥಿತರಿದ್ದರು.

ವಿನೀತ್ ಕೋಟ್ಯಾನ್ ಸ್ವಾಗತಿಸಿ, ಹರೀಶ್ ಹೆಗ್ಡೆ ವಂದಿಸಿದರು.
ಚೈತನ್ಯ ಕಲಾವಿದರು ಬೈಲೂರು ಇವರಿಂದ ವಾರ್ಡ್ ನಂಬರ್ 2 ನಾಟಕ ನಡೆಯಿತು.

Related posts

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನಶಾಸ್ತ್ರ ವಿಭಾಗದಿಂದ ಅಂತರಾಷ್ಟ್ರೀ ಯ ವಿಚಾರ ಸಂಕಿರಣ

Suddi Udaya

ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಶುಭಾಶಯ

Suddi Udaya

ಎಸ್. ಡಿ. ಎಂ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ವೇದಿಕೆ ಸಿನರ್ಜಿ ಹಮ್ಮಿಕೊಂಡ “ಪ್ರೊಫೆಷನಲ್ ಸಮ್ಮರಿ” ಕಾರ್ಯಕ್ರಮ

Suddi Udaya

ನಾಳ ಸ.ಹಿ.ಪ್ರಾ.ಶಾಲೆಯಲ್ಲಿ ಮೆಟ್ರಿಕ್‌ ಮೇಳ

Suddi Udaya

ಬೆಂಗಳೂರಿನ ಪ್ರಸಿದ್ದ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಇವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ

Suddi Udaya

ಭಾರಿ ಗಾಳಿ-ಮಳೆ: ಪಟ್ರಮೆ ಅನಾರುವಿನಲ್ಲಿ ಹಲವು ಮನೆಗಳಿಗೆ ಹಾನಿ

Suddi Udaya
error: Content is protected !!