ವೇಣೂರು: ವೇಣೂರು ವಲಯ ಅರಣ್ಯ ಇಲಾಖೆಗೆ ಒಳಪಡುವ ಬಜಿರೆ ಗ್ರಾಮದ ಹೊಸಪಟ್ಣ, ಬಜಿರೆ, ಅಜ್ಜಿಬೆಟ್ಟು ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ಎರಡು ಚಿರತೆಗಳು ಓಡಾಟ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದು ಇದೀಗ ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ಬಜಿರೆಯ ಪರದ್ಯಾರು ಎಂಬಲ್ಲಿ ಗೂಡು ಇರಿಸಲಾಗಿದೆ.
ಚಿರತೆ ಹಾವಳಿ ಕುರಿತು ಸುದ್ದಿ ಉದಯ ವೆಬ್ ನ್ಯೂಸ್ ವರದಿ ಪ್ರಕಟಿಸಿದ ಬೆನ್ನಲ್ಲೇ ಕಾರ್ಯಪ್ರವತ್ತಾರದ ಅರಣ್ಯ ಇಲಾಖೆ ಬೋನ್ ಅಳವಡಿಸಿದೆ.
ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ಆಶ್ವಿತ್, ಗಸ್ತು ಅರಣ್ಯ ಪಾಲಕ ಸುರೇಶ್, ಅರಣ್ಯ ವೀಕ್ಷಕ ಯುವರಾಜ್ ಸಹಿತ ಸ್ಥಳೀಯರು ಉಪಸ್ಥಿತರಿದ್ದರು. ಬಜಿರೆ ಶಾಲೆ ಮುಖ್ಯಶಿಕ್ಷಕರು ಮುಜಾಂಗ್ರತೆ ವಹಿಸುವಂತೆ ಪೋಷಕರಿಗೆ ಮನದಟ್ಟು ಮಾಡಿದ್ದಾರೆ.











