July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ತೇಪೆ ಕಾಮಗಾರಿ ಆರಂಭ: ಬಹುಕಾಲದ ಬೇಡಿಕೆಗೆ ಅಲ್ಪ ಪರಿಹಾರ

ಬೆಳ್ತಂಗಡಿ: ಗುಂಡಿಗಳೇ ತುಂಬಿ ಹೋಗಿ ಸಂಚರ ಪ್ರಯಾಸಗೊಂಡಿದ್ದ ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ 45 ಲಕ್ಷ ರೂ.ವೆಚ್ಚದಲ್ಲಿ ತೇಪೆ ಕಾಮಗಾರಿಗೆ ಚಾಲನೆ ಜ.5 ರಂದು ದೊರೆತಿದೆ. ಈ ರಸ್ತೆಯ ಹದೆಗೆಟ್ಟು ಹತ್ತಿರ ಮೂರು ವರ್ಷದ ಬಳಿಕ ದುರಸ್ತಿ ಕಂಡಿದೆ.

12 ಕೀಮಿ.ಉದ್ದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನರ ಬಹುಕಾಲದ ಬೇಡಿಕೆಗೆ ಅಲ್ಪ ಪರಿಹಾರ ದೊರೆತಿದೆ. ಈ ರಸ್ತೆ ಸಂಪೂರ್ಣವಾಗಿ ಡಾಮರೀಕರಣ ಆಗಬೇಕೆಂಬುದು ಸಾರ್ವಜನಿಕರ ಆಶಯ ಆದರೆ ಗುಂಡಿಗಳ ದರ್ಬಾರ್‌ಗೆ ತಾತ್ಕಲಿಕ ಪರಿಹಾರ ದೊರೆತಾಂಗಿದೆ. ಕಳೆದ ಜೂನ್ ತಿಂಗಳಿನಿಂದ ಸುದ್ದಿಉದಯ ಪತ್ರಿಕೆ ನಿರಂತರವಾಗಿ ರಸ್ತೆಯ ಅವ್ಯವಸ್ಥೆಯ ಕುರಿತು ವರದಿ ಪ್ರಕಟಿಸಿ ತಾತ್ಕಲಿಕ ಪರಿಹಾರಕ್ಕೆ ಜನರಧ್ವನಿಯಾಗಿ ನಿಂತಿತ್ತು. ಜನಸ್ಪಂದನ ಸಭೆಯಲ್ಲಿ ರಸ್ತೆಯ ಅವ್ಯವಸ್ಥೆ ಕುರಿತು ವಿಷಯ ಪ್ರಸ್ತಾಪವಾದಗ ಶಾಸಕ ಹರೀಶ್ ಪೂಂಜ ಪ್ಯಾಚ್ ವಾರ್ಕ್ ಕಾಮಗಾರಿ ಒಂದುವಾರದೊಳಗೆ ಆರಂಭವಾಗಲಿದೆ ಅಲ್ಲದೇ ಈ ರಸ್ತೆ ಸಂಪೂರ್ಣ ದುರಸ್ತಿಗೆ ಎಸ್‌ಹೆಚ್‌ಡಿಪಿ ಅಡಿಯಲ್ಲಿ 12 ಕೋಟಿ ರೂ.ಮೀಸಲಿರಿಸಿ ಪ್ರಸ್ತವಾನೆ ಸಲ್ಲಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದರು.

Related posts

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಬಟ್ಟೆಯ ಕಸೂತಿ ತಯಾರಿಕೆ ಸ್ವ ಉದ್ಯೋಗ ತರಬೇತಿ ಸಮಾರೋಪ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ: ಲಲಿತ ಸಹಸ್ರನಾಮ ಮತ್ತು ಶ್ರೀ ದೇವಿ ಅಷ್ಟೋತ್ತರ ಪಾರಾಯಣ,ಭಜನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವಲಯದ ಮಟ್ಟದ ಪ್ರಗತಿ ಬಂಧು ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಸಾಧನಾ ಸಮಾವೇಶ

Suddi Udaya

ಇಂದಬೆಟ್ಟು: ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಬಂಗಾಡಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಹಳೆ ವಿದ್ಯಾರ್ಥಿನಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಕೊಕ್ಕಡ: ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ನಾಗಪ್ರತಿಷ್ಠೆ, ಆಶ್ಲೇಷ ಬಲಿ

Suddi Udaya
error: Content is protected !!