September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ತೇಪೆ ಕಾಮಗಾರಿ ಆರಂಭ: ಬಹುಕಾಲದ ಬೇಡಿಕೆಗೆ ಅಲ್ಪ ಪರಿಹಾರ

ಬೆಳ್ತಂಗಡಿ: ಗುಂಡಿಗಳೇ ತುಂಬಿ ಹೋಗಿ ಸಂಚರ ಪ್ರಯಾಸಗೊಂಡಿದ್ದ ಕುಪ್ಪೆಟ್ಟಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ 45 ಲಕ್ಷ ರೂ.ವೆಚ್ಚದಲ್ಲಿ ತೇಪೆ ಕಾಮಗಾರಿಗೆ ಚಾಲನೆ ಜ.5 ರಂದು ದೊರೆತಿದೆ. ಈ ರಸ್ತೆಯ ಹದೆಗೆಟ್ಟು ಹತ್ತಿರ ಮೂರು ವರ್ಷದ ಬಳಿಕ ದುರಸ್ತಿ ಕಂಡಿದೆ.

12 ಕೀಮಿ.ಉದ್ದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಜನರ ಬಹುಕಾಲದ ಬೇಡಿಕೆಗೆ ಅಲ್ಪ ಪರಿಹಾರ ದೊರೆತಿದೆ. ಈ ರಸ್ತೆ ಸಂಪೂರ್ಣವಾಗಿ ಡಾಮರೀಕರಣ ಆಗಬೇಕೆಂಬುದು ಸಾರ್ವಜನಿಕರ ಆಶಯ ಆದರೆ ಗುಂಡಿಗಳ ದರ್ಬಾರ್‌ಗೆ ತಾತ್ಕಲಿಕ ಪರಿಹಾರ ದೊರೆತಾಂಗಿದೆ. ಕಳೆದ ಜೂನ್ ತಿಂಗಳಿನಿಂದ ಸುದ್ದಿಉದಯ ಪತ್ರಿಕೆ ನಿರಂತರವಾಗಿ ರಸ್ತೆಯ ಅವ್ಯವಸ್ಥೆಯ ಕುರಿತು ವರದಿ ಪ್ರಕಟಿಸಿ ತಾತ್ಕಲಿಕ ಪರಿಹಾರಕ್ಕೆ ಜನರಧ್ವನಿಯಾಗಿ ನಿಂತಿತ್ತು. ಜನಸ್ಪಂದನ ಸಭೆಯಲ್ಲಿ ರಸ್ತೆಯ ಅವ್ಯವಸ್ಥೆ ಕುರಿತು ವಿಷಯ ಪ್ರಸ್ತಾಪವಾದಗ ಶಾಸಕ ಹರೀಶ್ ಪೂಂಜ ಪ್ಯಾಚ್ ವಾರ್ಕ್ ಕಾಮಗಾರಿ ಒಂದುವಾರದೊಳಗೆ ಆರಂಭವಾಗಲಿದೆ ಅಲ್ಲದೇ ಈ ರಸ್ತೆ ಸಂಪೂರ್ಣ ದುರಸ್ತಿಗೆ ಎಸ್‌ಹೆಚ್‌ಡಿಪಿ ಅಡಿಯಲ್ಲಿ 12 ಕೋಟಿ ರೂ.ಮೀಸಲಿರಿಸಿ ಪ್ರಸ್ತವಾನೆ ಸಲ್ಲಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದರು.

Related posts

ಕರಂಬಾರು ಹಿ.ಪ್ರಾ. ಶಾಲೆಯಲ್ಲಿ ಭರತನಾಟ್ಯ ತರಗತಿ ಉದ್ಘಾಟನೆ

Suddi Udaya

ಮುಂಡಾಜೆ: ಯಂಗ್ ಚಾಲೆಂಜರ್ಸ್ ನಲ್ಲಿ ಅಣಬೆ ತರಬೇತಿ ಕಾರ್ಯಾಗಾರ

Suddi Udaya

ಮಡಂತ್ಯಾರು: ಪಾರೆಂಕಿ ನಿವಾಸಿ ಕೃಷಿಕ ಪಿ ಶಾಂತರಾಮ ಹೃದಯಾಘಾತದಿಂದ ನಿಧನ

Suddi Udaya

ಜಿಪ್ಸಿ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಬಳಂಜ ಶಾಲಾ ಮುಖ್ಯೋಪಾಧ್ಯಾಯರಿಗೆ ಗಂಭೀರ ಗಾಯ

Suddi Udaya

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ: ಸಹಕಾರಿ ಭಾರತಿ ಬಿಜೆಪಿ – 7 ಸ್ಥಾನ, ಕಾಂಗ್ರೆಸ್ – 5 ಸ್ಥಾನ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಬಂಟ ಕ್ರೀಡೋತ್ಸವ

Suddi Udaya
error: Content is protected !!