22.6 C
ಪುತ್ತೂರು, ಬೆಳ್ತಂಗಡಿ
July 23, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಶೌರ್ಯ ತುರ್ತು ಸ್ಪಂದನಾ ತಂಡಕ್ಕೆ ಅಂತಾರಾಷ್ಟ್ರೀಯ ತರಬೇತುದಾರರಿಂದ ತರಬೇತಿ

ಬೆಳ್ತಂಗಡಿ: ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತು ಸ್ಪಂದನಾ ತಂಡ ಬೆಳ್ತಂಗಡಿ ಇದರ ಸ್ವಯಂಸೇವಕರು ಅಂತಾರಾಷ್ಟ್ರೀಯ ಫ್ರೀ ಡ್ರೈವಿಂಗ್ (ಈಜು)ತರಬೇತಿಯಲ್ಲಿ ಪಾಲ್ಗೊಂಡಿರುತ್ತಾರೆ.


ಬಂಟ್ವಾಳ ತಾಲೂಕು ವಿಟ್ಲ ಸಮೀಪದ ಅಡ್ಯನಡ್ಕದ ವಾರಾಣಸಿ ಫಾರ್ಮ್ನಲ್ಲಿ ಅಂತಾರಾಷ್ಟ್ರೀಯ ಫ್ರೀ ಡ್ರೈವಿಂಗ್ ಕೋಚಸ್ ಅಪ್ ಏಷ್ಯಾದ ಸ್ಥಾಪಕ ಜೇರೋಲೆನ್ ಎಲೌಟ್ ಇವರಿಂದ 7 ದಿನದ ತರಬೇತಿ ಕಾರ್ಯಕ್ರಮ ಆರಂಭಗೊಂಡಿದೆ.
ಈಜುಗಾರಿಕೆಯಲ್ಲಿ 30 ವರ್ಷಗಳ ಸುದೀರ್ಘ ಅನುಭವ ಪಡೆದ ಇವರು ನೆದರಲ್ಯಾಂಡ್ ದೇಶದಿಂದ ತರಬೇತಿ ನೀಡಲು ಆಗಮಿಸಿರುತ್ತಾರೆ.


ಈಜುಗಾರಿಕೆಯ ಮುಂಚೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳು, ಈಜುವಾಗ ಆರೋಗ್ಯದಲ್ಲಿ ಆಗುವ ಏರುಪೇರುಗಳು, ಅದಕ್ಕೆ ಆರೋಗ್ಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಯ ಮಾಹಿತಿಯೊಂದಿಗೆ ಈಜುಗಾರಿಕೆಯಲ್ಲಿ ವಿವಿಧ ಆಯಾಮಗಳ ಪ್ರಾತ್ಯಕ್ಷತೆಯನ್ನು ಈಜು ಕೊಳದಲ್ಲಿ ಮಾಡಿಸಿರುತ್ತಾರೆ.


ತರಬೇತಿ ಸಹಾಯಕರಾಗಿ ಜೇಕೊಬ್, ವಿನಯ್, ಪ್ರಿಯಾಂಕಾ ಸಹಕಾರ ನೀಡಿರುತ್ತಾರೆ.
ತರಬೇತಿಯಲ್ಲಿ ಬೆಳ್ತಂಗಡಿ ತಾಲೂಕು ಸಮಿತಿ ಮಾಸ್ಟರ್ ಅವಿನಾಶ್ ಭಿಡೆ, ಸ್ವಯಂ ಸೇವಕರಾದ ಸಚಿನ್ ಭೀಡೆ, ರಮೇಶ್, ಅನಿಲ್, ಜಯರಾಮ್, ಸತೀಶ್ ನೆರಿಯ, ಶರತ್ ನಿಂತಿಕಲ್ಲು ತರಬೇತಿಯಲ್ಲಿ ಪಾಲ್ಗೊಂಡಿದ್ದು, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಕಿಶೋರ್ ಕುಮಾರ್ ಮಾರ್ಗದರ್ಶನ ನೀಡಿರುತ್ತಾರೆ.

Related posts

ಗುರುವಾಯನಕೆರೆ: ಶ್ರೀ ದುರ್ಗಾ ಬ್ಯಾಟರಿ ಸೋಲಾರ್, ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಶುಭಾರಂಭ

Suddi Udaya

ಬೆಳ್ತಂಗಡಿ ಹಳೆಕೋಟೆ ಎಂಬಲ್ಲಿ ಮನೆಯೊಂದರಿಂದ‌ ರೂ. 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಲಕ್ಷ ‌ ನಗದು ಕಳವು

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ಕೌಟ್ ಗಣಪತಿ

Suddi Udaya

ಉಜಿರೆ : ಅನುಗ್ರಹ ಆಂ.ಮಾ. ಶಾಲೆಯಲ್ಲಿ ಚಿಟ್ಟೆಗಳ ವರ್ತನೆಯ ಜೀವಶಾಸ್ತ್ರ ಕಾರ್ಯಾಗಾರ

Suddi Udaya

ಶಾಸಕ ಹರೀಶ್ ಪೂಂಜರಿಗೆ ವಿಚಾರಣೆಗೆ ಬರಲು ಪೊಲೀಸರು ನೋಟಿಸು ನೀಡಿಲ್ಲ: ಶಾಸಕರಿಗೆ ಗೃಹ ಬಂಧನದಂತೆ ಪೊಲೀಸರು ಮಾಡಿದ್ದಾರೆ

Suddi Udaya

ಮುಂಡಾಜೆ: ಕೀರ್ತನಾ ಕಲಾತಂಡದಿಂದ ಕನಕ ಜಯಂತಿ ಆಚರಣೆ

Suddi Udaya
error: Content is protected !!